ದೇವರ ಆಶೀರ್ವಾದ ಪಡೆದು 1.6 ಲಕ್ಷ ಎಗರಿಸಿದ ಖದೀಮ! ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳನ 'ಭಕ್ತಿ'

Published : Dec 09, 2024, 04:08 PM ISTUpdated : Dec 09, 2024, 04:16 PM IST
ದೇವರ ಆಶೀರ್ವಾದ ಪಡೆದು 1.6 ಲಕ್ಷ ಎಗರಿಸಿದ ಖದೀಮ! ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳನ 'ಭಕ್ತಿ'

ಸಾರಾಂಶ

ಮಧ್ಯಪ್ರದೇಶದ ಪೆಟ್ರೋಲ್ ಬಂಕ್‌ನಲ್ಲಿ ಮುಸುಕುಧಾರಿ ಕಳ್ಳ 1.6 ಲಕ್ಷ ರೂ. ಕಳ್ಳತನ ಮಾಡಿದ್ದಾನೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿ, ಕಳ್ಳತನಕ್ಕೂ ಮುನ್ನ ಮತ್ತು ನಂತರ ದೇವರಿಗೆ ನಮಸ್ಕರಿಸಿರುವುದು ಕಂಡುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಯಾವುದೇ ಒಳ್ಳೆಯ ಕೆಲಸ ಮಾಡುವ ಮುನ್ನ ದೇವರ, ಹಿರಿಯರ, ತಂದೆ-ತಾಯಂದಿರ, ಗುರುಗಳ ಆಶೀರ್ವಾದ ಪಡೆಯುವುದು ಸಾಮಾನ್ಯ. ಆದರೆ ಹೀಗೆ  ಆಶೀರ್ವಾದ ಪಡೆಯುವುದಾಗ ಅದರ ಹಿಂದೆ ಒಳ್ಳೆಯ ಕೆಲಸದ ಉದ್ದೇಶವಿರುತ್ತದೆ. ಆದರೆ ಇಲ್ಲೊಂದು ವಿಚಿತ್ರ ಘಟನೆಯಲ್ಲಿ ಕಳ್ಳನೊಬ್ಬ ಕಳ್ಳತನ ಮಾಡುವುದಕ್ಕೂ ಮುನ್ನ ಅಲ್ಲಿಯೇ ಇದ್ದ ದೇವರಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾನೆ. ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೀಗೆ ಆಶೀರ್ವಾದ ಪಡೆದಿ 1.6 ಲಕ್ಷ ರೂಪಾಯಿ ಎಗರಿಸಿದ್ದಾನೆ!

ಈ ಘಟನೆ ನಡೆದಿರುವುದು,  ಮಧ್ಯಪ್ರದೇಶದ ರಾಜ್ ಗಢದ ಜೀರಾಪುರ-ಮಚಲ್ಪುರ ರಸ್ತೆಯಲ್ಲಿರುವ ಪೆಟ್ರೋಲ್ ಪಂಪ್ ನಲ್ಲಿ. ಕಳೆದ ಶನಿವಾರ ನಸುಕಿನ ಸುಮಾರು  1 ಗಂಟೆಗೆ ಈ ಕಳ್ಳತನ ನಡೆದಿದೆ. ಒಬ್ಬ ಮುಸುಕುಧಾರಿ ಪೆಟ್ರೋಲ್‌ ಪಂಪ್‌ ಕಚೇರಿಯೊಳಗೆ ನುಗ್ಗಿರುವುದನ್ನು ಸಿಸಿಟಿವಿಯ ವಿಡಿಯೊದಲ್ಲಿ ನೋಡಬಹುದಾಗಿದೆ. ಅತ್ತ ಇತ್ತ ನೋಡುವ ಕಳ್ಳ, ಕಳ್ಳತನಕ್ಕೆ ಮೊದಲು ಅಲ್ಲಿಯೇ ಇದ್ದ ದೇವರ ಪೋಟೋಗೆ  ನಮಸ್ಕರಿಸಿದ್ದಾನೆ, ಬಳಿಕ  ಪೂಜಿಸಿದ್ದಾನೆ. ನಂತರ ಸಿಸಿಟಿವಿಯತ್ತ ಗಮನ ಹೋಗುತ್ತಿದ್ದಂತೆಯೇ ಅದನ್ನು ವಸ್ತ್ರದಿಂದ ಸುತ್ತಲು ನೋಡಿದ್ದಾನೆ. ಆದರೆ ಅದು ಸಾಧ್ಯವಾಗಲಿಲ್ಲ.

ಕುಣಿಯುತ್ತಲೇ ನೋರಾ ಫತೇಹಿಗೆ ದೆವ್ವ ಮೆಟ್ಟಿಕೊಳ್ತಾ? ನಟಿಯ ವಿಡಿಯೋ ನೋಡಿ ಫ್ಯಾನ್ಸ್‌ ಸುಸ್ತು!

ಬಳಿಕ,  ಕಚೇರಿಯ ಡ್ರಾಯರ್‍‌ ತೆರೆದು ಹಣವನ್ನು ದೋಚಿದ್ದಾನೆ. ಕಳ್ಳತನದ ಬಳಿಕ ಮತ್ತೊಮ್ಮೆ ಕಾರ್ಯ ಯಶಸ್ವಿಯಾಗಿದ್ದಕ್ಕೆ  ದೇವರಿಗೆ ನಮಸ್ಕರಿಸಿದ್ದಾನೆ, ಇವುಗಳನ್ನು ಈ ದೃಶ್ಯದಲ್ಲಿ ನೋಡಬಹುದಾಗಿದೆ. ಮರುದಿನ ಕಚೇರಿ ಸಿಬ್ಬಂದಿ ಬಂದಾಗ ಈ ವಿಷಯ ತಿಳಿದಿದೆ. 

ಘಟನೆಗೆ ಪ್ರತಿಕ್ರಿಯೆ ನೀಡಿರುವ, ಸ್ಥಳೀಯ  ಪೊಲೀಸ್ ಠಾಣೆಯ ಪ್ರಭಾರಿ ಜಿತೇಂದ್ರ ಸಿಂಗ್ ಅವರು,  ಪೆಟ್ರೋಲ್ ಬಂಕ್ ನಲ್ಲಿ 1.57 ಲಕ್ಷ ರೂಪಾಯಿ ನಗದು ಕಳ್ಳತನವಾಗಿದೆ. ಸಿಸಿಟಿವಿಯನ್ನು ಆಧರಿಸಿ ದೂರು ದಾಖಲು ಮಾಡಲಾಗಿದೆ. ಕಳ್ಳತನ ಮಾಡುವ ಮೊದಲು ಕಳ್ಳ ದೇವರಿಗೆ ನಮಸ್ಕರಿಸುವುದನ್ನು ಸಿಸಿಟಿವಿ ದೃಶ್ಯಗಳು ತೋರಿಸುತ್ತದೆ. ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಯನ್ನು ಶೀಘ್ರವಾಗಿ ಬಂಧಿಸುವ ವಿಶ್ವಾಸವಿದೆ ಎಂದಿದ್ದಾರೆ.   

ಚಿಪ್ಸ್‌ ಖರೀದಿಸ್ತಿದ್ದಾಕೆ ರೈಲು ಬಂತೆಂದು ಓಡಿದಳು! ಮುಂದಾದದ್ದು ದುರಂತ- ಶಾಕಿಂಗ್‌ ವಿಡಿಯೋ ವೈರಲ್‌

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ