ಲವ್ ಜಿಹಾದ್; ಇಡೀ ಕುಟುಂಬದ ಮೇಲೆ ಕೇಸ್, ಮಹಿಳೆಯರು ಸೇರಿ 6  ಜನರ ಬಂಧನ

Published : Dec 22, 2020, 09:45 PM IST
ಲವ್ ಜಿಹಾದ್; ಇಡೀ ಕುಟುಂಬದ ಮೇಲೆ ಕೇಸ್, ಮಹಿಳೆಯರು ಸೇರಿ 6  ಜನರ ಬಂಧನ

ಸಾರಾಂಶ

ಉತ್ತರ ಪ್ರದೇಶದಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ/ ಮನೆಯಿಂದ ಹೊರಹೋದ ಹಿಂದೂ ಯುವತಿ ಮತಾಂತರ/ ಮದುವೆಯಾಗುವುದಕ್ಕಾಗಿಯೇ ಮತಾಂತರ/  ಇಡೀ ಕುಟುಂಬದ ಮೇಲೆ ಪ್ರಕರಣ ದಾಖಲು

ಆಗ್ರಾ (ಡಿ. 22)  ಮನೆ ತೊರೆದ  21 ವರ್ಷದ ಮಹಿಳೆ ಸುಮಾರು ಒಂದು ತಿಂಗಳ ನಂತರ ಮುಸ್ಲಿಂಗೆ ಮತಾಂತರಗೊಂಡು ದೆಹಲಿಯಲ್ಲಿ ಮುಸ್ಲಿಂ ಯುವಕನನ್ನು ಮದುವೆಯಾಗುತ್ತಾರೆ.  ಉತ್ತರ ಪ್ರದೇಶದ ಪೊಲೀಸರು ಹೊಸ ಲವ್ ಜಿಹಾದ್ ಕಾನೂನಿನ ಅಡಿ ಮುಸ್ಲಿಂ  ಯುವಕ ಮತ್ತು ಆತನ ಇಡೀ ಕುಟುಂಣಬದ ಮೇಲೆ ಪ್ರಕರಣ ದಾಖಲಿಸುತ್ತಾರೆ.

 25 ವರ್ಷದ ಮೊಹಮ್ಮದ್ ಜಾವೇದ್ ನನ್ನು ಬಿಟ್ಟು  ಅವರ ಕುಟುಂಬದ ಮೂವರು ಮಹಿಳೆಯರು ಸೇರಿದಂತೆ 10  ಜನರ ಮೇಲೆ ಪ್ರಕರಣ ದಾಖಲಾಗಿದೆ..  ಇನ್ನು ನಾಲ್ಕು ಜನರನ್ನು ಬಂಧಿಸಬೇಕಿದ್ದು ಮಾಹಿತಿ ನೀಡಿದವರಿಗೆ  ಈಗ 25 ಸಾವಿರ ರೂ.ಗಳ ಬಹುಮಾನವನ್ನು ಪೊಲೀಸರು ಘೋಷಿಸಿದ್ದಾರೆ.

ಯುವತಿಯ ತಂದೆ ಗುರುವಾರ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಜಾವೇದ್ ಪರ ವಕೀಲರು ನ್ಯಾಯಾಲಯಕ್ಕೆ ಯುವತಿ ಮತಾಂತರ ಮತ್ತು ಮದುವೆಯ ಮಾಹಿತಿ ನೀಡಿದ್ದಾರೆ.

ಮದುವೆಗೆ ಮುನ್ನ ರಾಹುಲ್ ವರ್ಮಾ..ಮದುವೆ ನಂತರ ತೌಫೀಕ್

ಈ ಬಗ್ಗೆ ಮಾಹಿತಿ ನೀಡಿದ ಡಿಎಸ್ಪಿ ರಾಮ್ ನಿವಾಸ್ ಸಿಂಗ್, ಜಾವೇದ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಐಪಿಸಿ ಸೆಕ್ಷನ್ 366 ರ ಅಡಿಯಲ್ಲಿ (ಮಹಿಳೆಯನ್ನು ಅಪಹರಿಸುವುದು, ಅಪಹರಿಸುವುದು ಅಥವಾ ಅವಳ ಮದುವೆಯನ್ನು ಒತ್ತಾಯಿಸಲು ಪ್ರೇರೇಪಿಸುವುದು ಇತ್ಯಾದಿ)  ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದಿದ್ದಾರೆ.

ಪೊಲೀಸರು ಹೇಳುವಂತೆ  ನವೆಂಬರ್ 17 ರಿಂದ ಮಹಿಳೆ ಕಾಣೆಯಾಗಿದ್ದಳು. ಜಾವೇದ್ ಆಕೆಯ ಮನೆ ಸಮೀಪವೇ ವಾಸವಿದ್ದ. ಆದರೆ ಮಹಿಳೆ ಕುಟುಂಬದವರು ಆರಂಭದಲ್ಲಿ ದೂರು ದಾಖಲಿಸಿರಲಿಲ್ಲ.

ಕುಟುಂಬದವರ ವಿಚಾರಣೆ ನಡೆಸಿರುವ ಪೊಲೀಸರು ಬಲವಂತದ ಮತಾಂತರ ನಡೆದಿರುವ ಸಾಧ್ಯತೆ ಇದೆ ಎಂದಿದ್ದು ಕುಟುಂಬದ ಎಲ್ಲ ಸದಸ್ಯರು ಜಾವೇದ್ ನೊಂದಿಗೆ ನಿರಂತರ ಸಂಪರ್ಕದಲ್ಲಿಒದ್ದರು ಎಂಬ ಮಾಹಿತಿ ನೀಡಿದ್ದಾರೆ.

ನ್ಯಾಯಾಲಯದ ಆದೇಶದ ಮೇರೆಗೆ ಇವರೆಲ್ಲರನ್ನು ಜೈಲಿಗೆ ಕಳುಹಿಸಲಾಗಿದೆ. ಜಾವೇದ್ ಮತ್ತು ಪರಾರಿಯಾಗಿದ್ದ ಇತರ ನಾಲ್ವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.  ಬಂಧಿತ ಆರು ಜನರಲ್ಲಿ ಜಾವೇದ್ ಅವರ ಅತ್ತಿಗೆ. ಆತನ ಸಹೋದರಿ, ಇಬ್ಬರು ಸಹೋದರರು  ಸೇರಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!