ಜಮೀನು ವಿವಾದ ಪರಸ್ಪರ ದೊಣ್ಣೆಗಳಿಂದ ಬಡಿದಾಡಿಕೊಂಡ ಕುಟುಂಬ!

Published : May 27, 2024, 01:20 PM IST
ಜಮೀನು ವಿವಾದ ಪರಸ್ಪರ ದೊಣ್ಣೆಗಳಿಂದ ಬಡಿದಾಡಿಕೊಂಡ ಕುಟುಂಬ!

ಸಾರಾಂಶ

ಜಮೀನು ವಿವಾದಿಂದ ಎರಡು ಕುಟುಂಬಗಳ ನಡುವೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಪರಸ್ಪರ ದೊಣ್ಣೆಗಳಿಂದ ಬಡಿದಾಡಿಕೊಂಡ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹಿಪ್ಪಾಡಿ ಗ್ರಾಮದಲ್ಲಿ ನೆಡದಿದೆ.

ತುಮಕೂರು (ಮೇ.27): ಜಮೀನು ವಿವಾದಿಂದ ಎರಡು ಕುಟುಂಬಗಳ ನಡುವೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಪರಸ್ಪರ ದೊಣ್ಣೆಗಳಿಂದ ಬಡಿದಾಡಿಕೊಂಡ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹಿಪ್ಪಾಡಿ ಗ್ರಾಮದಲ್ಲಿ ನೆಡದಿದೆ.

ರಂಗಸ್ವಾಮಿ, ಪತ್ನಿ ಲೀಲಾವತಿ ಮೇಲೆ ಹಲ್ಲೆಗೊಳಗಾದವರು. ಮುದ್ದುರಂಗಚಾರ್ ಹಾಗೂ ಆತನ ಕುಟುಂಬದವರು ಹಲ್ಲೆ ದೊಣ್ಣೆಗಳಿಂದ ರಂಗಸ್ವಾಮಿ ದಂಪತಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ರಂಗಸ್ವಾಮಿ ತಲೆಗೆ ಗಂಭೀರ ಪೆಟ್ಟು ಬಿದ್ದು ಗಾಯಗೊಂಡಿದ್ದಾರೆ. ಇನ್ನು ಪತ್ನಿಯ ಮೇಲೆಯೂ ಮುದ್ದುರಂಗಾಚಾರ್ ದೊಣ್ಣೆಯಿಂದ ನಡೆಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಜಮೀನು ವಿವಾದ ಕಾಂಗ್ರೆಸ್ ಮುಖಂಡನ ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ!

ಏನಿದು ವಿವಾದ?

ಗ್ರಾಮದ ಸರ್ವೆ ನಂಬರ್ 41-42 ರ ಜಮೀನು ‌ವಿಚಾರವಾಗಿ ರಂಗಸ್ವಾಮಿ ಕುಟುಂಬ ಹಾಗೂ ಮುದ್ದುರಂಗಚಾರ್ ಗಲಾಟೆಯಾಗಿತ್ತು. ಜಮೀನು ವಿವಾದ ಕೋರ್ಟ್‌ನಲ್ಲಿದೆ. ಕೋರ್ಟ್‌ನಲ್ಲಿದ್ದರೂ ಉಳುಮೆ ಮಾಡಲು ಬಂದಿದ್ದ ಮುದ್ದುರಂಗಾಚಾರ್ ಕುಟುಂಬ. ಕೋರ್ಟ್‌ನಲ್ಲಿ ವಿವಾದ ಇತ್ಯರ್ಥ ಆಗೋವರೆಗೆ ಉಳುಮೆ ಮಾಡುವಂತಿಲ್ಲ. ಇದನ್ನ ಪ್ರಶ್ನೆ ಮಾಡಲು ಜಮೀನಿಗೆ ಹೋಗಿದ್ದ ರಂಗಸ್ವಾಮಿ ದಂಪತಿ. ಜಮೀನು ಯಾರಿಗೆ ಸೇರಿದ್ದು ಎಂಬ ಬಗ್ಗೆ ಕೋರ್ಟ್ ನಲ್ಲಿ ಇತ್ಯರ್ಥದ ಬಳಿಕವೇ ಉಳುಮೆ ಮಾಡಿ. ವಿವಾದ ಕೋರ್ಟ್‌ನಲ್ಲಿರುವಾಗಲೇ ಉಳುಮೆ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದ್ದ ದಂಪತಿ. ಪ್ರಶ್ನಿಸಿದ ದಂಪತಿಗಳ ಮೇಲೆ ಏಕಾಏಕಿ ದೊಣ್ಣೆಗಳಿಗೆ ಅಟ್ಟಾಡಿಸಿ ಹೊಡೆದಿರುವ ಮುದ್ದುರಂಗಾಚಾರ್ ಕುಟುಂಬ. ರಂಗಸ್ವಾಮಿಗೆ ಹಲ್ಲೆ ನಡೆಸಿದ್ದಲ್ಲೆ ಆತನ ಪತ್ನಿ ಮೇಲೆ ದೊಣ್ಣೆಗಳಿಂದ ದಾಳಿ. ತಲೆ ಪೆಟ್ಟಾದರೂ ಬಿಡದ ಮುದ್ದುರಂಗಾಚಾರ್ ಕುಟುಂಬ. ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!