ಬಸ್ ಹತ್ತೋ ನೆಪದಲ್ಲಿ ಮೊಬೈಲ್ ಎಗರಿಸುತ್ತಿದ್ದ ಕಳ್ಳ ಸಹೋದರರರು ಅರೆಸ್ಟ್, ಒಂದೇ ತಾಯಿ ಮಕ್ಕಳು, ಒಟ್ಟಿಗೆ ಕಳ್ಳತನ, ಜೊತೆಗೇ ಜೈಲು!

Published : Dec 02, 2025, 12:55 PM IST
Kengeri police arrest brothers who were stealing mobile phones in bmtc bus

ಸಾರಾಂಶ

Kengeri police arrest brothers: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಪ್ರಯಾಣಿಕರ ಮೊಬೈಲ್ ಕದಿಯುತ್ತಿದ್ದ ಅಣ್ಣತಮ್ಮಂದಿರನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಬಸ್ ಹತ್ತುವ ವೇಳೆ ನೂಕುನುಗ್ಗಲು ಸೃಷ್ಟಿಸಿ ಮೊಬೈಲ್ ಕದ್ದು, ನಂತರ ಮಾಲೀಕರ ದಿಕ್ಕು ತಪ್ಪಿಸಿ ಪರಾರಿಯಾಗುತ್ತಿದ್ದರು.

ಬೆಂಗಳೂರು (ಡಿ.2): ರಾಜಧಾನಿ ಬೆಂಗಳೂರಿನಲ್ಲಿ ಕಳ್ಳತನವನ್ನೇ ತಮ್ಮ ಕುಲ ಕಸುಬಾಗಿ ಮಾಡಿಕೊಂಡಿದ್ದ ಐನಾತಿ ಅಣ್ಣತಮ್ಮಂದಿರನ್ನು ಕೆಂಗೇರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಗೇಪಲ್ಲಿ ಮೂಲದವರಾದ ಈ ಕಳ್ಳ ಸಹೋದರರು ಒಂದೇ ತಾಯಿಯ ಮಕ್ಕಳಾಗಿದ್ದು, ಜೊತೆಜೊತೆಯಲ್ಲೇ ಕಳ್ಳತನ ಮಾಡುತ್ತಿದ್ದರು. ಇವರು ಹೆಚ್ಚಾಗಿ ಜನ ನಿಲ್ಲುವ ಬಿಎಂಟಿಸಿ ಬಸ್ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡು ಖದೀಮ ಸಹೋದರರು ಕಳ್ಳತನ ಮಾಡುತ್ತಿದ್ದರು.

ಅಣ್ಣ ಮೊಬೈಲ್‌ ಎಗರಿಸಿದ್ರೆ ಕ್ಷಣಾರ್ಧದಲ್ಲಿ ತಮ್ಮ ಬ್ಯಾಗ್‌ಗೆ:

ಬಸ್ ಹತ್ತುವಾಗ ಅಣ್ಣ ನೂಕುನುಗ್ಗಲಿನಲ್ಲಿ ಜನರ ಜೇಬಿಗೆ ಕೈಹಾಕಿ ಮೊಬೈಲ್ ಕಳವು ಮಾಡಿದರೆ, ತಮ್ಮ ಅದನ್ನು ಕ್ಷಣಾರ್ಧದಲ್ಲಿ ಬ್ಯಾಗ್‌ಗೆ ಹಾಕಿಕೊಳ್ಳುತ್ತಿದ್ದ. ನಂತರ ಈ ಸಹೋದರರು ನಡೆಸುತ್ತಿದ್ದ ನಾಟಕ ಎಲ್ಲರನ್ನು ಅಚ್ಚರಿಗೊಳಿಸಿದೆ. ಮೊಬೈಲ್ ಕಳುವಾದ ವಿಷಯ ಮಾಲೀಕರ ಅರಿವಿಗೆ ಬಾರದಿದ್ದರೂ, ಕಳ್ಳರಲ್ಲಿ ಒಬ್ಬ ಸಭ್ಯಸ್ಥನಂತೆ ನಟಿಸಿ, 'ನಿಮ್ಮ ಮೊಬೈಲ್ ಕಳುವಾಯ್ತು ನೋಡಿ! ಎಂದು ಹೇಳುತ್ತಿದ್ದ. ನಂತರ, ಕಳ್ಳ ಆ ಕಡೆ ಹೋಗುತ್ತಿದ್ದಾನೆ ಎಂದು ಮಾಲೀಕರನ್ನು ಅನುಮಾನ ಬರದಂತೆ ಬೇರೆ ದಿಕ್ಕಿಗೆ ಡೈವರ್ಟ್ ಮಾಡಿ, ಅದೇ ಬಸ್ಸಿನಲ್ಲಿ ಮುಂದಿನ ನಿಲ್ದಾಣದಲ್ಲಿ ಇಳಿದು ಎಸ್ಕೇಪ್ ಆಗುತ್ತಿದ್ದರು.

ಕೈಚಳಕ ತೋರಿದ ಪ್ರದೇಶಗಳು: 

ಕೆಂಗೇರಿ, ಎಲೆಕ್ಟ್ರಾನಿಕ್ ಸಿಟಿ, ಬಾಗಲೂರು ಸೇರಿದಂತೆ ನಗರದ ಹಲವೆಡೆ ಬಿಎಂಟಿಸಿ ಬಸ್ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ ಈ ಸಹೋದರರು ಕೈಚಳಕ ತೋರಿಸುತ್ತಿದ್ದರು. ಸದ್ಯ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಇಬ್ಬರು ಖತರ್ನಾಕ್ ಕಳ್ಳ ಅಣ್ಣತಮ್ಮಂದಿರನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೇಣುಕಾಸ್ವಾಮಿ ತಂದೆ-ತಾಯಿಗೆ ಸಮನ್ಸ್, ದರ್ಶನ್‌ಗೆ ಜೈಲಲ್ಲೊಂದು ಶಾಕ್, ಕೋರ್ಟ್‌ನಲ್ಲೊಂದು ಆಘಾತ!
ದಂಪತಿ, ಪಾಲಿಕೆ ಅಧಿಕಾರಿಗಳ ಕಿರುಕುಳಕ್ಕೆ ಟೆಕ್ಕಿ ದುರಂತ ಸಾವು, ಡೆಟ್‌ನೋಟ್‌ನಲ್ಲಿ ಶಾಕಿಂಗ್ ಮಾಹಿತಿ!