ಹಲ್ಲು ಮುರಿದ ಹಾವಿನಂತಿದ್ದ ISDಗೆ ಜೀವ ಬಂದಿದ್ದು ಹೇಗೆ..?

Suvarna News   | Asianet News
Published : Sep 22, 2020, 12:49 PM IST
ಹಲ್ಲು ಮುರಿದ ಹಾವಿನಂತಿದ್ದ ISDಗೆ ಜೀವ ಬಂದಿದ್ದು ಹೇಗೆ..?

ಸಾರಾಂಶ

ಇದೀಗ ಡ್ರಗ್ ಕೇಸ್‌ಗಳಿಗೆ ಸಂಬಂಧಿಸಿದಂತೆ ಕಾರ್ಯಪ್ರವೃತ್ತವಾಗಿರುವ ಐಎಸ್‌ಡಿಗೆ ಜೀವ ಕೊಟ್ಟಿದ್ದು ಐಪಿಎಸ್ ಭಾಸ್ಕರ್‌ ರಾವ್.

ಬೆಂಗಳೂರು (ಸೆ.22): ಬೆಂಗಳೂರು ಕಮಿಷನರ್ ಆಗಿದ್ದ ಭಾಸ್ಕರ್ ರಾವ್ ಅವರೇ ಯಾವುದೇ ಪ್ರಕರಣ ದಾಖಲಾಗದೇ ಖಾಲಿಯಾಗಿ ಉಳಿದಿದ್ದ ಐಎಸ್‌ಡಿ(Internal security division) ಗೆ ಜೀವ ಕೊಟ್ಟರು. 

ರಾಜ್ಯ ಸರ್ಕಾರ 2008ರಲ್ಲಿ ಐಎಸ್‌ಡಿ ಸ್ಥಾಪಿಸಿದ್ದು, ಇದರಲ್ಲಿ 6 ವಿಂಗ್‌ಗಳಂತೆ ರಚನೆ ಮಾಡಲಾಗಿತ್ತು. ಆದರೆ ಇದರಲ್ಲಿ ಒಂದೇ ಒಂದು ದೂರು ಸಹ ದಾಖಲಾಗಿರಲಿಲ್ಲ. 

ಸಿಸಿಬಿ ನಗರಕ್ಕಷ್ಟೇ ಸೀಮಿತವಾಗಿತ್ತು.ಸಿಸಿಬಿಯ ನಾರ್ಕೋಟಿಕ್ ವಿಂಗ್ ನಗರಕ್ಕೆ ಸೀಮಿತವಾಗಿ ಕೆಲಸ ನಿರ್ವಹಿಸುತಿತ್ತು. ಆದರೆ ರಾಜ್ಯದಲ್ಲಿ ಡ್ರಗ್ ಪ್ರಕರಣಗಳ ಬಗ್ಗೆ ಎಲ್ಲಿ ದೂರು ದಾಖಲು ಮಾಡಬೇಕು ಎನ್ನುವ ಅರಿವಿರಲಿಲ್ಲ.

ಮಾಜಿ ಸಂಸದರ ಪುತ್ರನಿಗೆ ISD ಯಿಂದ ಬುಲಾವ್..! ...

ಆದರೆ ಐಎಸ್‌ಡಿ ಎಡಿಜಿಪಿಯಾಗಿ ಭಾಸ್ಕರ್ ರಾವ್ ಅವರು ಮೊದಲ ಕೇಸ್ ದಾಖಲು ಮಾಡಿದರು. ಕಳೆದ ಆಗಸ್ಟ್ 5 ರಂದು ಭಾಸ್ಕರ್ ರಾವ್ ಎಫ್‌ಐಆರ್ ದಾಖಲು ಮಾಡಿದರು.

2013ರಲ್ಲಿಯೇ ಐಎಸ್‌ಡಿ ಪೊಲೀಸ್‌ ಸ್ಟೇಷನ್ ಆದರೂ ಒಂದೇ ಒಂದು ಎಫ್‌ಐ ಆರ್ ದಾಖಲಾಗಿರಲಿಲ್ಲ. ಇದೀಗ  ಐಎಸ್‌ಡಿ ಇತಿಹಾಸದಲ್ಲೇ 5 ಎಫ್‌ಐಆರ್ ದಾಖಲು ಮಾಡಿಸಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!