ಗಾಂಜಾ ಮತ್ತಲ್ಲಿ ಬೆಂಗಳೂರು 'ಬುಲೆಟ್ ಬಸ್ಯರು' ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ!

Published : Aug 30, 2020, 10:53 PM IST
ಗಾಂಜಾ ಮತ್ತಲ್ಲಿ ಬೆಂಗಳೂರು 'ಬುಲೆಟ್ ಬಸ್ಯರು' ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ!

ಸಾರಾಂಶ

ವೀಲಿಂಗ್ ಪ್ರಶ್ನಿಸಿದ್ದಕ್ಕೆ ಟ್ರಾಫಿಕ್ ಕಾನ್ಸ್ಟೇಬಲ್ ಗೆ ಥಳಿತ/ ಮೂವರು ಯುವಕರಿಂದ ಕಾನ್ಸ್ಟೇಬಲ್ ಮೇಲೆ ಹಲ್ಲೆ ವಿಜಯನಗರ ಮುಖ್ಯ ರಸ್ತೆಯ ಮಾರುತಿ ಮಂದಿರ ಬಳಿ ಘಟನೆ/ ಅಡ್ಡಾದಿಡ್ಡಿ ಬೈಕ್ ನಲ್ಲಿ‌ ಸಂಚರಿಸುತ್ತಿದ್ದ ಯುವಕರು/ ಯುವಕರನ್ನ ಪ್ರಶ್ನಿಸಿದ್ದ ವಿಜಯನಗರ ಸಂಚಾರ ಠಾಣೆ ಕಾನ್ಸ್ಟೇಬಲ್ ವಿದ್ಯಾಧರ್

ಬೆಂಗಳೂರು(ಆ.  30)  ಸ್ಯಾಂಡಲ್ ವುಡ್ ಗೆ ನಶೆ ದೊಡ್ಡ ಚರ್ಚೆ ನಡೆಯುತ್ತಿರುವಾಗಲೇ ಬೆಂಗಳೂರು ಪೊಲೀಸರಿಗೆ  'ಬುಲೆಟ್' ಮಹಾಶಯರು ಸಿಕ್ಕಿಬಿದ್ದಿದ್ದಾರೆ.

ವೀಲಿಂಗ್ ಪ್ರಶ್ನಿಸಿದ್ದಕ್ಕೆ ಟ್ರಾಫಿಕ್ ಕಾನ್ಸ್ಟೇಬಲ್  ಮೇಲೆ ಹಲ್ಲೆಗೆ ಮುಂದಾಗಿದ್ದವರು ಆತಿಥ್ಯ ಪಡೆದುಕೊಳ್ಳುತ್ತಿದ್ದಾರೆ. ವಿಜಯನಗರ ಮುಖ್ಯ ರಸ್ತೆಯ ಮಾರುತಿ ಮಂದಿರ ಬಳಿ ಘಟನೆ ನಡೆದಿದೆ.  ಅಡ್ಡಾದಿಡ್ಡಿ ಬೈಕ್ ನಲ್ಲಿ‌ ಸಂಚರಿಸುತ್ತಿದ್ದ ಯುವಕರನ್ನು ವಿಜಯನಗರ ಸಂಚಾರ ಠಾಣೆ ಕಾನ್ಸ್ಟೇಬಲ್ ವಿದ್ಯಾಧರ್ ಪ್ರಶ್ನೆ ಮಾಡಿದ್ದಾರೆ.

ಇಂದ್ರಜಿತ್ ಆರೋಪಕ್ಕೆ ಮೇಘನಾ ಕೊಟ್ಟ ರಿಯಾಕ್ಷನ್

ಈ ವೇಳೆ ಪೊಲೀಸ್ ಅಧಿಕಾರಿಗೆ ಥಳಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಸ್ಥಳಿಯರ ನೆರವಿನಿಂದ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಗಾಂಜಾ ನಶೆ: ಹೆಲ್ಮೆಟ್ ಇಲ್ಲದೆ ಅಡ್ಡಾದಿಡ್ಡಿ ವಾಹನ ಚಾಲನೆ ಮಾಡುತ್ತಿದ್ದ ಪುಂಡರು ಗಾಂಜಾ ನಶೆಯಲ್ಲಿದ್ದರು ಎಂಬುದು ಶಾಕಿಂಗ್ ಸಂಗತಿ . ಅಪ್ರಾಪ್ತ ಬಾಲಕ‌ ಸೇರಿ‌ ಮೂವರು ಪೊಲೀಸರ ವಶಕ್ಕೆ ಪಡೆಯಲಾಗಿದೆ. ಅಮರ್ ಖುರೇಷಿ, ಸೈಯದ್ ಸಾಧಿಕ್ ಅಹಮದ್, ಹಾಗೂ ಮತ್ತೋರ್ವ ಅಪ್ರಾಪ್ತ ಬಾಲಕನ ಬಂಧಿಸಲಾಗಿದ್ದು ಬಂಧಿತರ ಪೈಕಿ‌ ಓರ್ವನ ಜೇಬಿನಲ್ಲಿ ಗಾಂಜಾ ಪ್ಯಾಕೆಟ್ ಸಹ ಪತ್ತೆಯಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!