
ನವದೆಹಲಿ (ಆ. 25) ದೆಹಲಿಯ ಪೊಲೀಸ್ ಅಧಿಕಾರಿಯೊಬ್ಬರು ಮಧ್ಯ ರಸ್ತೆಯಲ್ಲೇ ಬಾಲಕನೊಬ್ಬನನ್ನು ಹಿಗ್ಗಾ ಮುಗ್ಗಾ ಥಳಿಸುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಪೊಲೀಸ್ ಅಧಿಕಾರಿಯ ಮೇಲೆ ತನಿಖೆಗೆ ದೆಹಲಿ ಪೊಲೀಸ್ ಈಗ ಮುಂದಾಗಿದೆ.
ನೈರುತ್ಯ ದೆಹಲಿಯ ಆರ್ಕೆ ಪುರಂ ಪ್ರದೇಶದಲ್ಲಿ ಘಟನೆ ನಡೆದಿತ್ತು. ನೈರುತ್ಯ ವಿಭಾಗದ ಹೆಚ್ಚುವರಿ ಡಿಸಿಪಿ ಇಂಗಿತ್ ಸಿಂಗ್, ಘಟನೆ ನಮ್ಮ ಗಮನಕ್ಕೆ ಬಂದ ನಂತರ ಡಿಪಾರ್ಟ್ ಮೆಂಟಲ್ ತನಿಖೆಗೆ ಆದೇಶ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ನೂರು ರೂ. ಲಂಚ ಕೊಡದ ಬಾಲಕನ ಮೊಟ್ಟೆ ಗಾಡಿ ಪುಡಿ ಪುಡಿ
ಆಗಸ್ಟ್ 22 ರಂದು ಈ ಘಟನೆ ನಡೆದಿದೆ. ಹುಡುಗರ ಗುಂಪೋದು ಮಧ್ಯರಾತ್ರಿ ರಸ್ತೆ ಮಧ್ಯೆ ಮಲಗಿತ್ತು. ಡ್ಯೂಟಿಯಲ್ಲಿದ್ದ ಕಾನ್ಸ್ಟೇಬಲ್ ಹುಡುಗರಿಗೆ ಮನೆಗೆ ಹೋಗುವಂತೆ ಹೇಳಿದ್ದಾರೆ. ಅರ್ಧ ಗಂಟೆ ನಂತರ ಮತ್ತೆ ಅದೆ ಜಾಗಕ್ಕೆ ಹೋದಾಗ ಹುಡುಗರು ರಸ್ತೆ ಮಧ್ಯೆಯೇ ಇದ್ದರು. ಕೋಪಗೊಂಡ ಅಧಿಕಾರಿ ಹುಡುಗನನ್ನು ಥಳಿಸಿದ್ದಾರೆ.
ಆದರೆ ಇದು ಹಳೆ ವಿಡಿಯೋ ಎಂದು ಆರ್ ಕೆ ಪುರ ಪೊಲೀಸರು ಹೇಳುವ ಯತ್ನ ಮಾಡಿದ್ದಾರೆ. ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ತನಿಖೆ ವರೆಗೆ ತಂದು ನಿಲ್ಲಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ