ಹುಬ್ಬಳ್ಳಿ:ಜಾನುವಾರು ಮೇಯಿಸಲು ಹೋದ ಮಹಿಳೆ ಶವವಾಗಿ ಪತ್ತೆಯಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹುಬ್ಬಳ್ಳಿಯ ಈಶ್ವರನಗರದ ನಿವಾಸಿ ಮಹಾದೇವಿ ನೀಲನ್ನವರ (mahadevi nilannavar) ಮೃತ ಮಹಿಳೆ. ಆಕೆ ಮನೆಯಿಂದ ಊಟ ಮಾಡಿಕೊಂಡು ಜಾನುವಾರು ಮೇಯಿಸಲು ಹೊಲಕ್ಕೆ ಹೋಗಿದ್ವಳು ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಸಮೀಪದ ಕಾಡಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿದೆ. ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ತಂಬೂರದ ಗ್ರಾಮದ ಹೊರವಲಯದಲ್ಲಿ ಈ ಅನಾಹುತ ನಡೆದಿದೆ.
ಜಾನುವಾರು ಮೇಯಿಸಲು ಹೋದ ಈಕೆಯನ್ನು ದುಷ್ಕರ್ಮಿಗಳು ಕೊಲೆ ಮಾಡಿ ಮೃತದೇಹಕ್ಕೆ ಬೆಂಕಿ ಹಚ್ಚಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಗುರುತು ಪತ್ತೆಯಾಗದ ರೀತಿಯಲ್ಲಿ ಈಕೆಯ ಶವ ಪತ್ತೆಯಾಗಿದ್ದು, ಈಕೆಯ ಮನೆಯವರು ನಮಗೆ ಯಾರ ಮೇಲೆಯೂ ಅನುಮಾನ ಇಲ್ಲ ಎಂದು ಹೇಳಿದ್ದಾರೆ.
ನೂಪುರ್ ಬೆಂಬಲಿಸಿದ ಮಹಾರಾಷ್ಟ್ರ ಮೆಡಿಕಲ್ ಸ್ಟೋರ್ ಮಾಲೀಕನ ಇರಿದು ಕೊಲೆ, NIA ತನಿಖೆಗೆ ಆದೇಶ!
ಪೊಲೀಸ್ ತನಿಖೆಯ ನಂತರ ಸತ್ಯಾಂಶ ಹೊರ ಬರಲಿದೆ. ಈ ಕುರಿತು ಕಲಘಟಗಿ (Kalagatagi) ಪೊಲೀಸ್ ಠಾಣೆಯಲ್ಲಿ(police Station) ಪ್ರಕರಣ ದಾಖಲಾಗಿದ್ದು, ಮಹಿಳೆಯ (woman) ಸ್ಥಿತಿಯನ್ನು ನೋಡಿ ಕುಟುಂಬದವರಿಗೆ ಮುಗಿಲು ಕಳಚಿ ಹೆಗಲ ಮೇಲೆ ಬಿದ್ದಂತಾಗಿದೆ.
ಕನ್ಹಯ್ಯಲಾಲ್ ಹಂತಕರಿಗೆ ಎನ್ಐಎ ಫುಲ್ ಡ್ರಿಲ್, ಕೋರ್ಟ್ನಲ್ಲಿ ವಕೀಲರಿಂದಲೇ ಹಲ್ಲೆ, ವಿಡಿಯೋ ವೈರಲ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ