ಮಿಜೋರಾಂ: ಒಂದನೇ ಕ್ಲಾಸ್ ಬಾಲಕಿಯನ್ನು ವಿವಸ್ತ್ರಗೊಳಿಸಿದ ಸರ್ಕಾರಿ ಟೀಚರ್ ಬಂಧನ

Published : Aug 28, 2022, 09:32 PM IST
ಮಿಜೋರಾಂ: ಒಂದನೇ ಕ್ಲಾಸ್ ಬಾಲಕಿಯನ್ನು ವಿವಸ್ತ್ರಗೊಳಿಸಿದ ಸರ್ಕಾರಿ ಟೀಚರ್ ಬಂಧನ

ಸಾರಾಂಶ

Crime News: ಒಂದನೇ ತರಗತಿ ವಿದ್ಯಾರ್ಥಿನಿಯ ಸಮವಸ್ತ್ರವನ್ನು ತೆಗೆದ ಆರೋಪದ ಮೇಲೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯನ್ನು ಬಂಧಿಸಲಾಗಿದೆ

ಮಿಜೋರಾಂ (ಆ. 28): ಮಿಜೋರಾಂನ ಲುಂಗ್ಲೈ ಜಿಲ್ಲೆಯ ತಂಗ್‌ಪುಯಿ ಗ್ರಾಮದಲ್ಲಿ ಒಂದನೇ ತರಗತಿ ವಿದ್ಯಾರ್ಥಿನಿಯ ಸಮವಸ್ತ್ರವನ್ನು ತೆಗೆದ ಆರೋಪದ ಮೇಲೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯನ್ನು ಶನಿವಾರ ಬಂಧಿಸಲಾಗಿದೆ. ಗುರುವಾರ ನಡೆದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೇಂದ್ರದ ಸರ್ವ ಶಿಕ್ಷಾ ಅಭಿಯಾನದ ಅಡಿಯಲ್ಲಿ ನೇಮಕಗೊಂಡಿರುವ ಲಾಲ್ಬಿಯಾಕೆಂಗಿ ಎಂದು ಗುರುತಿಸಲಾದ ಗುತ್ತಿಗೆ ಮಹಿಳಾ ಶಿಕ್ಷಕಿಯ ವಿರುದ್ಧ ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, 2015 ರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 

ತನ್ನ ಮಗಳಿಗೆ ಶಾಲೆಯಲ್ಲಿ ಬಾಲಕನೋರ್ವ ಕಿರುಕುಳ ನೀಡುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳ ಅಸಡ್ಡೆಯ ಕಾರಣದಿಂದ ಮಗಳನ್ನು ಶಾಲೆಯಿಂದ ಬಿಡಿಸುವುದಾಗಿ ತಿಳಿಸಿದ ನಂತರ  ಶಿಕ್ಷಕಿ ಈ ರೀತಿ ಮಾಡಿದ್ದಾರೆ ಎಂದು ಬಾಲಕಿಯ ತಾಯಿ ಆರೋಪಿಸಿದ್ದಾರೆ. 

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ಎಫ್‌ಐಆರ್ ದಾಖಲಿಸಿದ ನಂತರ ಲಾಲ್‌ಬಿಯಾಕೆಂಗಿಯನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ರೆಕ್ಸ್ ವಾಂಚೌಂಗ್  ತಿಳಿಸಿದ್ದಾರೆ.ಆಗಸ್ಟ್ 22 ರಂದು ಶಾಲೆಯಲ್ಲಿ ಬಾಲಕನೊಬ್ಬ ತನ್ನ ಮಗಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದು, ಆಕೆಗೆ ಗಂಭೀರ ಗಾಯಗಳಾಗಿದ್ದು, ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯವಿದೆ ಎಂದು ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

ಉತ್ತರ ಪ್ರದೇಶ: ಊಟ ನೀಡಲು ತಡ ಮಾಡಿದಕ್ಕೆ ಮಗಳನ್ನೇ ಕೊಂದ ತಂದೆ

"ಮೂರು ದಿನಗಳ ಕಾಲ ವೈದ್ಯಕೀಯ ಚಿಕಿತ್ಸೆಗೆ ಒಳಗಾದ ನಂತರ ಅವಳು ಮತ್ತೆ ಶಾಲೆಗೆ ಹೋಗಬೇಕೆಂದು ಒತ್ತಾಯಿಸಿದಾಗ, ನಾವು ಗುರುವಾರ (ಆಗಸ್ಟ್ 25) ಅವಳನ್ನು ಶಾಲೆಗೆ ಕಳುಹಿಸಿದ್ದೇವೆ, ಆದರೆ ಅದೇ ಹುಡುಗ ಮತ್ತೆ ಥಳಿಸಿದ್ದಾನೆ," ಎಂದು ತಾಯಿ ಆರೋಪಿಸಿದ್ದಾರೆ.

ಪುಂಡ ಹುಡುಗ ಮತ್ತೆ ತನ್ನ ಮಗಳಿಗೆ ಥಳಿಸಿದ ವಿಷಯ ತಿಳಿದ ಆಕೆಯ ತಾಯಿ ಕೋಪಗೊಂಡು ಶುಕ್ರವಾರ ಶಾಲೆಗೆ ಹೋಗಿ ಬಾಲಕನಿಗೆ ಬೈದು ಬುದ್ಧಿ ಹೇಳಿದ್ದಾರೆ. ಆದರೆ “ಮಧ್ಯಾಹ್ನ, ನನಗೆ ಶಿಕ್ಷಕರಿಂದ ಕರೆ ಬಂತು. ಹುಡುಗನನ್ನು ಬೈಯುವ ಮೂಲಕ ನಾನು ನಿಯಮಗಳನ್ನು ಉಲ್ಲಂಘಿಸಿದ್ದೇನೆ ಎಂದು ನನಗೆ ತಿಳಿಸಿದ್ದಾರೆ" ಎಂದು ಬಾಲಕಿಯ ತಾಯಿ ಆರೋಪಿಸಿದ್ದಾರೆ. 

ಇದರಿಂದ ಕುಪಿತಳಾದ ಮಹಿಳೆ ತಮ್ಮ ಮಗಳನ್ನು  ಮನೆಗೆ ಕರೆತರಲು ಮತ್ತೆ ಶಾಲೆಗೆ ತೆರಳಿದ್ದರು. ತಾಯಿ  ತನ್ನ ಮಗಳನ್ನು ಶಾಲೆಯಿಂದ ಹೊರಗೆ ಕರೆತರುವಂತೆ ಬೆದರಿಕೆ ಹಾಕಿದಾಗ, ಶಿಕ್ಷಕಿ ಮಗಳನ್ನು ಮನೆಗೆ ಕರೆದೊಯ್ಯಲು ಬಯಸಿದರೆ, ಮತ್ತೊಂದು ವಿದ್ಯಾರ್ಥಿಗೆ ಅಗತ್ಯವಿರುವುದರಿಂದ ಅವಳು ತನ್ನ ಸಮವಸ್ತ್ರವನ್ನು ಬಿಟ್ಟು ಹೋಗಬೇಕಾಗುತ್ತದೆ ಎಂದು ಹೇಳಿದರು ಎಂದು ತಾಯಿ ತಿಳಿಸಿದ್ದಾರೆ. 

"ಅವಳು ನನ್ನ ಮಗಳನ್ನು ಇಡೀ ತರಗತಿಯ ಮುಂದೆ ವಿವಸ್ತ್ರಗೊಳಿಸಿದಳು ಮತ್ತು ಕೇವಲ ಅವಳ ಒಳ ಉಡುಪುಗಳೊಂದಿಗೆ ಅವಳನ್ನು ಹೋಗಲು ಬಿಟ್ಟಳು" ಎಂದು ಒಂದನೇ ತರಗತಿಯ ವಿದ್ಯಾರ್ಥಿನಿಯ ತಾಯಿ ದೂರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ