ಹುಬ್ಬಳ್ಳಿಯಲ್ಲಿ ಮಾಟ, ಮಂತ್ರದ ನೆಪವೊಡ್ಡಿ ಚಿನ್ನಾಭರಣ ಕಳ್ಳತನ

Published : Feb 10, 2024, 04:00 AM IST
ಹುಬ್ಬಳ್ಳಿಯಲ್ಲಿ ಮಾಟ, ಮಂತ್ರದ ನೆಪವೊಡ್ಡಿ ಚಿನ್ನಾಭರಣ ಕಳ್ಳತನ

ಸಾರಾಂಶ

ಮೋಸ ಹೋದ ಮಹಿಳೆ ಬೆಂಡಿಗೇರಿ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.

ಹುಬ್ಬಳ್ಳಿ(ಫೆ.10):  ಮಾಟ ಮಂತ್ರದ ನೆಪವೊಡ್ಡಿ ಆಗಂತುಕನೊಬ್ಬ ಚಿನ್ನಾಭರಣ ಎಗರಿಸಿಕೊಂಡು ಹೋದ ಘಟನೆ ಇಲ್ಲಿಯ ಮಿಲ್ಲತನಗರದಲ್ಲಿ ನಡೆದಿದೆ. 

ಮಹಿಳೆಯೊಬ್ಬರನ್ನು ಭೇಟಿ ಮಾಡಿದ ಅಪರಿಚಿತನೊಬ್ಬ ನಿಮ್ಮ ಮನೆಗೆ ಮಾಟಮಂತ್ರ ಮಾಡಿಸಿದ್ದಾರೆ. ನಿಮಗೆ ದೊಡ್ಡ ತೊಂದರೆ ತಪ್ಪಿದ್ದಲ್ಲ ಎಂದು ಹೆದರಿಸಿದ್ದಾನೆ. ಒಟ್ಟು ₹ 1.65 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಮಹಿಳೆಯ ಮಗಳ ಕೊರಳಲ್ಲಿ ಇದ್ದುದ್ದನ್ನು ತೆಗೆಯಿಸಿ ಚಿಕ್ಕ ಮಣ್ಣಿನ ಗಡಿಗೆಗೆ ಹಾಕಿಸಿದ್ದಾನೆ. ಇನ್ನೊಂದು ಗಡಿಗೆಯಲ್ಲಿ ಲಿಂಬೆಹಣ್ಣು, ಸಣ್ಣ ಕಲ್ಲು ಹಾಕಿ ಹಸಿರು ಬಟ್ಟೆ ಸುತ್ತಿದ್ದನ್ನು ಕೊಟ್ಟಿದ್ದಾನೆ. 

ಏಕಾಂಗಿ ಜೀವನ ನಡೆಸುತ್ತಿದ್ದ ವೃದ್ಧೆ; ಆಸ್ತಿ ವಿಚಾರಕ್ಕೆ ದುಷ್ಕರ್ಮಿಗಳಿಂದ ಹತ್ಯೆ!

ಚಿನ್ನಾಭರಣವಿದ್ದ ಗಡಿಗೆ ತೆಗೆದುಕೊಂಡು ಹೋಗಿದ್ದಾನೆ ಎಂದು ಮಹಿಳೆಯು ಬೆಂಡಿಗೇರಿ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ