
ಹುಬ್ಬಳ್ಳಿ(ಮಾ.14): ತನ್ನ ಪ್ರೀತಿ ತಿರಸ್ಕಾರ ಮಾಡಿದ್ದಾನೆಂಬ ಕಾರಣಕ್ಕೆ ಯುವಕನನ್ನು ಕರೆಸಿದ ಯುವತಿ ತನ್ನವರಿಂದ ಅಪಹರಣ ಮಾಡಿಸಿ ಹಲ್ಲೆ ಮಾಡಿಸಿದ್ದಲ್ಲದೆ 5 ಲಕ್ಷ ಕೊಡದಿದ್ದರೆ ಫೋಟೋ, ವಿಡಿಯೋವನ್ನು ಬಹಿರಂಗ ಮಾಡುವುದಾಗಿ ಹೆದರಿಸಿ ಜೀವ ಬೆದರಿಕೆ ಹಾಕಿಸಿದ ಪ್ರಕರಣ ನಗರದಲ್ಲಿ ನಡೆದಿದೆ.
ಈ ಸಂಬಂಧ 10 ಜನರ ವಿರುದ್ಧ ಗೋಕುಲ ರಸ್ತೆಯಲ್ಲಿ ಎಫ್ಐಆರ್ ದಾಖಲಾಗಿದೆ. ಲಿಂಗರಾಜ ನಗರದ ಕುಮಾರಸ್ವಾಮಿ ರಾಚಯ್ಯ ಕೊಟಗಿಮಠ ಎಂಬುವರೇ ಹಲ್ಲೆಗೊಳಗಾದವರು.
ಬಾಯ್ಫ್ರೆಂಡ್ನ ಅಸಲಿ ಮುಖವಾಡ ಬಯಲು: ಪ್ರಾಣಬಿಟ್ಟ ಪ್ರಿಯತಮೆ!
ಈ ಪ್ರಕರಣದಲ್ಲಿ 5ನೇ ಆರೋಪಿಯಾದ ಯುವತಿಯ ಜತೆಗೆ ಕುಮಾರಸ್ವಾಮಿ ಪ್ರೀತಿ ಪ್ರೇಮ ನಡೆದಿತ್ತು. ಕುಮಾರಸ್ವಾಮಿ ಆಕೆಯನ್ನು ತಿರಸ್ಕರಿಸಿದ್ದಾನೆ. ಇದರಿಂದ ಯುವಕನನ್ನು ಅಪಹರಣ ಮಾಡಿಸಿ ಹಲ್ಲೆ ಮಾಡಿಸಿದ್ದಾಳೆ ಮತ್ತು ಹಣ ಕೊಡದಿದ್ದರೆ ಜೊತೆಗಿರುವ ಫೋಟೋ, ವಿಡಿಯೋ ಬಹಿರಂಗ ಮಾಡುವುದಾಗಿ ಬೆದರಿಸಿದ್ದಾಳೆ ಎಂದು ಆರೋಪಿಸಿ ದೂರು ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ