
ಹೈದರಾಬಾದ್, (ಮಾ.13): ತಾನೂ ಮನಸಾರೆ ಪ್ರೀತಿಸಿದ ಯುವಕನ ಮುಖವಾಡ ತಿಳಿದು ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಖಮ್ಮಮ್ ಜಿಲ್ಲೆಯಲ್ಲಿ ನಡೆದಿದೆ.
ರತ್ನಕುಮಾರಿ (24) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಖಮ್ಮಮ್ ಜಿಲ್ಲೆಯ ಮಲಬಂಜಾರಾ ಗ್ರಾಮದ ನಿವಾಸಿ. ಖಮ್ಮಮ್ನಲ್ಲಿ ದೋಬಿಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈಕೆಗೆ ಖಮ್ಮಮ್ ಮೂಲದ ಆಟೋ ಚಾಲಕ ಸಂಜಯ್ ಪರಿಚಯವಾಗಿತ್ತು.
16ರ ಸುಂದರಿಯ ಸಾವಿನಲ್ಲಿ ತೆರೆದುಕೊಂಡ ಲವ್ ಸ್ಟೋರಿ: ಚಲುವೆಯ ರಹಸ್ಯ...!
ಆದರೆ, ಸಂಜಯ್ಗೆ ಈಗಾಗಲೇ ಮದುವೆ ಆಗಿತ್ತು. ವಾಸ್ತವವನ್ನು ಮರೆಮಾಚಿ ರತ್ನ ಕುಮಾರಿಗೆ ದ್ರೋಹವೆಸಗುತ್ತಿದ್ದ. ಮದುವೆ ಆಗಿರುವ ವಿಚಾರ ರತ್ನಕುಮಾರಿಗೆ ತಿಳಿದಿರಲಿಲ್ಲ. ಕೆಲವು ದಿನಗಳ ಹಿಂದೆ ಈ ವಿಚಾರ ರತ್ನಕುಮಾರಿಗೆ ತಿಳಿದಿದು ಭಾರಿ ಆಘಾತ ಅನುಭವಿಸಿದ್ದಳು.
ಈ ನೋವಿನಿಂದ ಹೊರಬಾರದ ರತ್ನಕುಮಾರಿ ಮಾರ್ಚ್ 9ರಂದು ತಮ್ಮ ಗ್ರಾಮಕ್ಕೆ ಹಿಂದಿರುಗಿದ್ದಾಳೆ. ಮಾರ್ಚ್ 10ರಂದು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆಕೆಯನ್ನು ಪಾಲಕರು ಖಮ್ಮಮ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾಳೆ. ಇದೀಗ ಸಂಜಯ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ