ನಿಷೇಧಿತ ನೋಟು ಚಲಾವಣೆಗೆ ಯತ್ನ: ನಾಲ್ವರ ಬಂಧನ

Published : Jul 31, 2020, 08:24 AM IST
ನಿಷೇಧಿತ ನೋಟು ಚಲಾವಣೆಗೆ ಯತ್ನ: ನಾಲ್ವರ ಬಂಧನ

ಸಾರಾಂಶ

ಅಮಾನ್ಯಗೊಂಡ 1 ಸಾವಿರ ಮತ್ತು 500 ಮುಖಬೆಲೆಯ 96 ಲಕ್ಷ ನೋಟು ಜಪ್ತಿ| ಯಶವಂತಪುರ ಆರ್‌ಟಿಓ ಕಚೇರಿ ಸಮೀಪ ಜನರಿಗೆ ಕಮಿಷನ್‌ ಆಸೆ ತೋರಿಸಿ ಹಳೇ ನೋಟುಗಳ ವಿಲೇವಾರಿ ಹೊಂಚು ಹಾಕಿದ್ದ ಆರೋಪಿಗಳು| 

ಬೆಂಗಳೂರು(ಜು.31):  ನಿಷೇಧಿತ ನೋಟುಗಳ ಚಲಾವಣೆ ಹೆಸರಿನಲ್ಲಿ ಜನರಿಗೆ ವಂಚಿಸಲು ಯತ್ನಿಸಿದ್ದ ಮತ್ತೊಂದು ತಂಡ ಯಶವಂತಪುರ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆಯ ದಿನೇಶ್‌, ರಾಸಿಕ್‌, ದಾಸರಹಳ್ಳಿ ಎಸ್‌.ನಾಗರಾಜ್‌ ಹಾಗೂ ಬಿಟಿಎಂ ಲೇಔಟ್‌ನ ಕೃಷ್ಣಮೂರ್ತಿ ಬಂಧಿತರಾಗಿದ್ದು, ಆರೋಪಿಗಳಿಂದ ಅಮಾನ್ಯಗೊಂಡ 1 ಸಾವಿರ ಮತ್ತು 500 ಮುಖಬೆಲೆಯ .96 ಲಕ್ಷ ನೋಟುಗಳನ್ನು ಜಪ್ತಿ ಮಾಡಲಾಗಿದೆ. ಯಶವಂತಪುರ ಆರ್‌ಟಿಓ ಕಚೇರಿ ಸಮೀಪ ಆರೋಪಿಗಳು, ಜನರಿಗೆ ಕಮಿಷನ್‌ ಆಸೆ ತೋರಿಸಿ ಹಳೇ ನೋಟುಗಳ ವಿಲೇವಾರಿ ಹೊಂಚು ಹಾಕಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು: ಕುಖ್ಯಾತ ಕಳ್ಳನ ಬಂಧನ, 7 ಬೈಕ್‌ ವಶ

ದಿನೇಶ್‌ ಹಾಗೂ ರಾಸಿಕ್‌ ವಿರಾಜಪೇಟೆಯಲ್ಲಿ ದಿನಸಿ ವ್ಯಾಪಾರಿಗಳಾಗಿದ್ದಾರೆ. ತಾವು ಕೇರಳ ಮೂಲದ ವ್ಯಕ್ತಿಗಳಿಂದ .1 ಕೋಟಿ ನಿಷೇಧಿತ ನೋಟುಗಳನ್ನು ಪಡೆದು 20 ಲಕ್ಷದ ಕಮಿಷನ್‌ ಆಸೆಗೆ ಈ ಕೃತ್ಯಕ್ಕೆ ಮುಂದಾಗಿದ್ದೇವು ಎಂದು ವಿಚಾರಣೆ ವೇಳೆ ಅವರು ಹೇಳಿಕೆ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ನಿಷೇಧಿತ ನೋಟುಗಳು ಚಲಾವಣೆ ಮಾಡಲು ಸಾಧ್ಯವಿಲ್ಲ. ಆದರೆ ಜನರಿಗೆ ಲಕ್ಷ ಲಕ್ಷ ಕಮಿಷನ್‌ ಆಮಿಷವೊಡ್ಡಿ ಆರೋಪಿಗಳು ವಂಚಿಸಲು ಯತ್ನಿಸಿದ್ದರು. ಒಂದು ಕೋಟಿ ಹಳೇ ನೋಟು ಬದಲಾಯಿಸಿದರೆ .20 ಲಕ್ಷದಿಂದ .30 ಲಕ್ಷದವರೆಗೆ ಕಮಿಷನ್‌ ಸಿಗಲಿದೆ ಎಂದು ಆರೋಪಿಗಳು ಪ್ರಚಾರ ಮಾಡುತ್ತಿದ್ದರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗೆಳತಿಯ ತಡೆಯಲು ಕಾರಿನ ರೂಫ್‌ ಮೇಲೆ ಹತ್ತಿದ.. ಆದರೆ ಆಕೆಯ ಪ್ರಿಯಕರ ಆತನ ಮೇಲೆ ಕಾರು ಹತ್ತಿಸಿದ
Shivamogga: 14 ವರ್ಷ ಜೈಲು ಶಿಕ್ಷೆ ಅನುಭವಿಸಿದ್ರು ಬದಲಾಗಲಿಲ್ಲ; ತಂದೆಯನ್ನು ಕೊಲೆಗೈದು ಬಾವಿಗೆ ಎಸೆದ ಮಗ!