ಗಾಂಜಾ ಮಾರಾಟ: ಭಟ್ಕಳ ಜಾಲಿ ಬೀಚ್‌ನಲ್ಲಿ ನಾಲ್ವರ ಬಂಧನ

Kannadaprabha News   | Asianet News
Published : Sep 16, 2020, 12:06 PM IST
ಗಾಂಜಾ ಮಾರಾಟ: ಭಟ್ಕಳ ಜಾಲಿ ಬೀಚ್‌ನಲ್ಲಿ ನಾಲ್ವರ ಬಂಧನ

ಸಾರಾಂಶ

ಆರೋಪಿಗಳಿಂದ 250 ಗ್ರಾಂ ಗಾಂಜಾ, ಒಂದು ಕಾರು, ಒಂದು ಬೈಕ್‌ ಹಾಗೂ 5700 ರು. ಹಣ ವಶ| ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಜಾಲಿ ಸಮುದ್ರದ ಬೀಚ್‌ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರ ದಾಳಿ|

ಭಟ್ಕಳ(ಸೆ.16): ಇಲ್ಲಿನ ಜಾಲಿ ಬೀಚ್‌ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಯುವಕರನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ.

ಭಟ್ಕಳ ಪಟ್ಟಣದ ಹಳೇ ಬಸ್‌ನಿಲ್ದಾಣದ ಸನಿಹದ ನಿವಾಸಿ ಸೈಯದ್‌ ಅಕ್ರಮ ಮೊಹ್ಮದ್‌ ಹುಸೇನ್‌, ಹೆಬಳೆ ಹನೀಪಾಬಾದ್‌ ತಲಹಾ ಕಾಲನಿಯ ಸೈಯದ್‌ ಮೂಸಾ ಸೈಯದ್‌, ಜಾಲಿ ದೇವಿನಗರದ ರೂಪೇಶ ಮಾಸ್ತಪ್ಪ ಮೊಗೇರ, ಹೆಬಳೆ ಗಾಂಧಿನಗರದ ಹೇಮಂತ ಶ್ರೀಧರ ನಾಯ್ಕ ಪೊಲೀಸರಿಂದ ಬಂಧಿತರು.

ಚಿತ್ರದುರ್ಗದಲ್ಲಿ ಭಾರೀ ಪ್ರಮಾಣದ ಗಾಂಜಾ ಸೀಜ್ : ಗುತ್ತಿಗೆ ಪಡೆದು 4 ಎಕರೆಯಲ್ಲಿ ಬೆಳೆ

ಆರೋಪಿತರಿಂದ 250 ಗ್ರಾಂ ಗಾಂಜಾ, ಒಂದು ಕಾರು, ಒಂದು ಬೈಕ್‌ ಹಾಗೂ 5700 ರು. ಹಣವನ್ನ ವಶಪಡಿಸಿಕೊಂಡಿದ್ದಾರೆ. ಇವರು ಸೆ. 15 ರಂದು ಬೆಳಗ್ಗೆ 7.15ರ ಸುಮಾರಿಗೆ ಭಟ್ಕಳದ ಜಾಲಿ ಸಮುದ್ರದ ಬೀಚ್‌ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
ಕಾರವಾರ: ಉಂಡ‌ ಮನೆಗೆ ದ್ರೋಹ; ಮನೆ ಕೆಲಸದವನಿಂದಲೇ ಲಕ್ಷಾಂತರ ರೂಪಾಯಿ ಕದ್ದವನ ಬಂಧನ