ಯೂಟ್ಯೂಬ್‌ನಲ್ಲಿ ಟ್ರೇನಿಂಗ್, ಕೇರಳದಲ್ಲಿ ಪ್ರಿಂಟಿಂಗ್, ಕರ್ನಾಟಕದಲ್ಲಿ ಶಾಪಿಂಗ್! ಖೋಟಾ ನೋಟು ಗ್ಯಾಂಗ್ ಅರೆಸ್ಟ್

Published : Aug 19, 2024, 06:22 PM IST
ಯೂಟ್ಯೂಬ್‌ನಲ್ಲಿ ಟ್ರೇನಿಂಗ್, ಕೇರಳದಲ್ಲಿ ಪ್ರಿಂಟಿಂಗ್, ಕರ್ನಾಟಕದಲ್ಲಿ ಶಾಪಿಂಗ್! ಖೋಟಾ ನೋಟು ಗ್ಯಾಂಗ್ ಅರೆಸ್ಟ್

ಸಾರಾಂಶ

ಯುಟ್ಯೂಬ್‌ ಮೂಲಕ ತರಬೇತಿ ಪಡೆದು ಕೇರಳದಿಂದ ಮಂಗಳೂರು ನಗರಕ್ಕೆ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ನಾಲ್ವರು ಖತರ್ನಾಕ್ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು (ಆ.19): ಯುಟ್ಯೂಬ್‌ ಮೂಲಕ ತರಬೇತಿ ಪಡೆದು ಕೇರಳದಿಂದ ಮಂಗಳೂರು ನಗರಕ್ಕೆ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ನಾಲ್ವರು ಖತರ್ನಾಕ್ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು ಜಿಲ್ಲೆಯ ಕೊಳತ್ತೂರಿನ ವಿ. ಪ್ರಿಯೇಶ್(38), ಮುಳಿಯಾರಿನ ವಿನೋದ್ ಕುಮಾರ್.6(33), ಹೊಸದುರ್ಗದ ಅಬ್ದುಲ್ ಖಾದರ್ ಎಸ್.ಎ(58) ಹಾಗೂ ಪುತ್ತೂರಿನ ಅಯೂಬ್ ಖಾನ್ (51) ಬಂಧಿತರು. ಬಂಧಿತರಿಂದ ಸುಮಾರು 2,13,500 ರೂ. ಮೌಲ್ಯದ 500 ರೂಪಾಯಿ ಮುಖಬೆಲೆಯ 427 ಖೋಟಾ ನೋಟುಗಳನ್ನು ವಶಕ್ಕೆ ಪಡೆದುಕೊಂಡ ಪೊಲೀಸರು.

ಛತ್ತೀಸ್‌ಗಢದಲ್ಲಿ ನಕ್ಸಲರ ಬೃಹತ್‌ ಖೋಟಾ ನೋಟು ಫ್ಯಾಕ್ಟರಿ ಪತ್ತೆ!

 ಅರೋಪಿ ಪ್ರಿಯೇಶ್ ಕಾಸರಗೋಡು ಜಿಲ್ಲೆಯ ಚೆರ್ಕಳ ಎಂಬಲ್ಲಿ ಪ್ರಿಂಟಿಂಗ್ ಪ್ರೆಸ್ ನ್ನು ಹೊಂದಿದ್ದ. ಇದೇ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಖೋಟಾನೋಟು ತಯಾರಿಸುತ್ತಿದ್ದ ಖದೀಮರು. ಖೋಟಾ ನೋಟು ತಯಾರಿಸಲು ಬೇಕಾದ ಕಚ್ಚಾ ಸಾಮಗ್ರಿಗಳನ್ನ ಕೇರಳದ ಕೋಝಿಕೋಡ್ ಮತ್ತು ದೆಹಲಿಯಿಂದ ಖರೀದಿ ಮಾಡಿ ತರಿಸಿಕೊಳ್ಳುತ್ತಿದ್ದ ಗ್ಯಾಂಗ್. ಬಳಿಕ ಪ್ರಿಯೆಶ್ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಖೋಟಾನೋಟು ತಯಾರಿಸಿ ಚಲಾವಣೆ ಮಾಡುತ್ತಿದ್ದರು. ಖೋಟಾನೋಟು ತಯಾರಿಸುವ ವಿಧಾನವನ್ನು ಯುಟ್ಯೂಬ್‌ ಮೂಲಕವೇ ವೀಕ್ಷಿಸಿ ಕರಗತ ಮಾಡಿಕೊಂಡಿದ್ದ ಗ್ಯಾಂಗ್. ಮಂಗಳೂರಿನಲ್ಲಿ ಖೋಟಾನೋಟು ಚಲಾವಣೆ ಆಗುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿ ಆರೋಪಿಗಳ ಬೆನ್ನಹತ್ತಿದ್ದ ಮಂಗಳೂರು ಸಿಸಿಬಿ ಟೀಂ. ಕೊನೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Bengaluru crime: ಕಡಿಮೆ ಬಡ್ಡಿ ಆಸೆ ತೋರಿಸಿ ಖೋಟಾ ನೋಟು ಚಲಾವಣೆ!

ಖೋಟಾನೋಟು ಚಲಾವಣೆಯಲ್ಲಿ ದೊಡ್ಡ ಜಾಲವೇ ಇದೆಯಾ? ದೇಶಾದ್ಯಂತ ಚಲಾವಣೆ ಮಾಡುತ್ತಿದ್ದರಾ? ಇದುವರೆಗೆ ಎಷ್ಟು ಖೋಟಾನೋಟುಗಳನ್ನ ಚಲಾವಣೆ ಮಾಡಿದ್ದಾರೆ? ಎಲ್ಲ ಆಯಾಮಗಳಲ್ಲಿ ವಿಚಾರಣೆ ನಡೆಸಲಿರುವ ಪೊಲೀಸರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು