ರೌಡಿಶೀಟರ್ ಭಿಕ್ಲು ಶಿವಾ ಕೊಲೆ ಪ್ರಕರಣ: ಕರ್ತವ್ಯ ಲೋಪ ಎಸೆದ ಪೊಲೀಸರ ವಿರುದ್ಧ ಕಣ್ಣಿಟ್ಟ ಕಮಿಷನರ್

Published : Jul 19, 2025, 11:04 AM IST
Biklu SHiva Murder_Bengaluru

ಸಾರಾಂಶ

ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ಕರ್ತವ್ಯ ಲೋಪದ ಶಂಕೆ ವ್ಯಕ್ತವಾಗಿದ್ದು, ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತನಿಖೆ ಆರಂಭಿಸಿದ್ದಾರೆ. ಶಿವಾ ನೀಡಿದ್ದ ದೂರುಗಳನ್ನು ನಿರ್ಲಕ್ಷಿಸಿ NCR ದಾಖಲಿಸಿದ್ದು ಚರ್ಚೆಗೆ ಗ್ರಾಸವಾಗಿದೆ.

ರೌಡಿಶೀಟರ್ ಬಿಕ್ಲು ಶಿವಾ ಕೊಲೆಯ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಈ ಕುರಿತು ಬೆಂಗಳೂರಿನ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಈ ಹಿಂದೆ, ಭಾರತಿನಗರದಲ್ಲಿ ಶಿವಾ ನೀಡಿದ್ದ ದೂರಿನ ಅನ್ವಯ ಜಗದೀಶ್ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಆದರೆ, ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಸಾಕ್ಷ್ಯಾಧಾರಗಳೊಂದಿಗೆ ಸಲ್ಲಿಸಲಾದ ಇನ್ನೊಂದು ದೂರುವನ್ನು ಕೇವಲ NCR (ನಾನ್-ಕಾಗ್ನಿಜೆಬಲ್ ರಿಪೋರ್ಟ್) ಆಗಿ ದಾಖಲಿಸಲಾಗಿತ್ತು.

FIR ಮಾಡದೇ ಕೇವಲ ಎನ್.ಸಿ.ಆರ್ ಮಾಡಿದ್ದರ ಬಗ್ಗೆ ಆಯುಕ್ತ ಸೀಮಂತ್ ಕುಮಾರ್ ಸಿಂಗ್  ಮಾಹಿತಿ ಪಡೆದುಕೊಂಡಿದ್ದಾರೆ. ಇದರಿಂದ ಸಂಬಂಧಿತ ಠಾಣೆಯ ಪೊಲೀಸ್ ಸಿಬ್ಬಂದಿಯ ವಿರುದ್ಧ ಕರ್ತವ್ಯ ಲೋಪದ ಆರೋಪ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಅವರ ಮೇಲೆ ಕ್ರಮ ಜರುಗುವ ಸಾಧ್ಯತೆ ಇದೆ.

ಕಮಿಷನರ್ ದಯಾನಂದ್ ಸ್ಪಂದನೆ:

ಪ್ರಮುಖ ರೌಡಿಶೀಟರ್ ಬಿಕ್ಲು ಶಿವಾ ಫೆಬ್ರವರಿ 18, 2024ರಂದು ಅಂದಿನ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ದಯಾನಂದ್ ಅವರಿಗೆ ಗಂಭೀರ ಜೀವ ಬೆದರಿಕೆ ಇದೆ ಎಂದು ದೂರು ನೀಡಿದ್ದರು. ಶಿವಾ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಅಂದಿನ ಕಮಿಷನರ್ ದಯಾನಂದ್, ತಕ್ಷಣವೇ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದರು. ಈ ಆಧಾರದ ಮೇಲೆ ಭಾರತಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಇನ್ಸ್‌ಪೆಕ್ಟರ್ ಫಿರೋಜ್ ಅಹಮದ್ ಅವರು ಜಗದೀಶ್ ವಿರುದ್ಧ ಕೇಸ್ ದಾಖಲಿಸಿದ್ದರು. ಆದರೆ ನಂತರ ಜಗದೀಶ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಿಂದ ಸ್ಟೇ ಆದೇಶ ಪಡೆದಿದ್ದರು.

ಮತ್ತೊಂದು ದೂರು

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾ 2025ರ ಮಾರ್ಚ್ 25ರಂದು ರಾಮಮೂರ್ತಿನಗರ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ರಾಜಶೇಖರ್ ಅವರಿಗೆ ಮತ್ತೊಂದು ದೂರು ಸಲ್ಲಿಸಿದ್ದರು. ಈ ಬಾರಿ ಜಗದೀಶ್ ಹಾಗೂ ಆತನ ತಂಡದಿಂದ ಕೊಲೆಗೆ ಯತ್ನವಾಗಿದೆ ಎಂದು ಸಿಸಿಟಿವಿ ದೃಶ್ಯಗಳ ಸಹಿತ ಮಾಹಿತಿ ನೀಡಿದ್ದರು. ಆದರೆ ಈ ದೂರಿನನ್ನೂ ಗಂಭೀರವಾಗಿ ಪರಿಗಣಿಸದೇ, ಕೇವಲ NCR (ನಾನ್-ಕಾಗ್ನಿಜಬಲ್ ರಿಪೋರ್ಟ್) ಆಗಿ ದಾಖಲಿಸಿ ಪ್ರಕರಣವನ್ನು ಮುಚ್ಚಿದಂತಾಯಿತು. ಆರೋಪಿಗಳಿಗೆ ತಾವು ಎಚ್ಚರಿಕೆ ನೀಡಿದ್ದು, ಯಾವುದೇ ತೀಕ್ಷ್ಣ ವಿಚಾರಣೆ ನಡೆದಿಲ್ಲ ಎಂಬುದಾಗಿ ಹೇಳಲಾಗಿದೆ.

ದೂರಿನ ಪ್ರಮುಖ ಅಂಶಗಳು:

  • ಶಾಸಕ ಭೈರತಿ ಬಸವರಾಜ್ ಅವರ ಸಹಚರ ಜಗದೀಶ್ ಹಾಗೂ ಆತನ ಸಂಬಂಧಿ ಕಿರಣ್ ಶಿವಾಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿಸಲಾಗಿತ್ತು.
  • ಶಿವಾ “ಎಕ್ಸ್‌ಟ್ರೀಂ ಪಾಯಿಂಟ್ ಲ್ಯಾಂಡ್ ಡೆವಲಪರ್ಸ್” ಕಂಪನಿಯ ಪಾರ್ಟ್ನರ್ ಆಗಿದ್ದ.
  • ಕಿತ್ತಗನೂರಿನ ಸರ್ವೆ ನಂ. 212 ರ ಜಮೀನಿಗೆ ಸಿಂಗಾರೆಡ್ಡಿಯಿಂದ 2024ರಲ್ಲಿ ಜಿಪಿಎ ಪಡೆದಿದ್ದರು.
  • ಈ ಜಿಪಿಎ ಅನ್ನು ರದ್ದುಪಡಿಸಿ, ಅವರ ಮನಪಟ್ಟಿಗೆ ಹೊಸ ಜಿಪಿಎ ನೀಡಲು ಜಗದೀಶ್ ಹಾಗೂ ಕಿರಣ್ ಬೆದರಿಕೆ ಹಾಕಿದ್ದಾರೆಂದು ದೂರಿಸಿದ್ದರು.
  • ಈ ಪೈಕಿ ಜಗದೀಶ್ ಮೇಲೆ ಇದ್ದ ರೌಡಿಶೀಟ್ ಕೂಡ ಶಾಸಕರ ಪ್ರಭಾವ ಬಳಸಿ ಕ್ಲೋಸ್ ಮಾಡಲಾಗಿದೆ ಎಂದು ದೂರಿನಲ್ಲಿತ್ತು.
  • ನಕಲಿ ದಾಖಲೆಗಳ ಮೂಲಕ ಹಲವು ಭೂಮಾಲೀಕರಿಗೆ ತೊಂದರೆ ಕೊಡುತ್ತಿರುವುದಾಗಿ ಆರೋಪಿಸಿದ್ದ ಶಿವಾ, ಸರಕಾರಿ ಅಧಿಕಾರಿಗಳು ಇವರ ಪ್ರಭಾವಕ್ಕೆ ಮಣಿದಿದ್ದಾರೆ ಎಂದೂ ದೂರಿದ್ದರು.

ಇದೀಗ ಎಚ್ಚೆತ್ತ ಕಮಿಷನರ್ ಸೀಮಂತ್ ಕುಮಾರ್ ಸಿಂಗ್:

ಈ ಎಲ್ಲ ಸಂಗತಿಗಳ ಬಗ್ಗೆ ಪ್ರಸ್ತುತ ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರಿಗೆ ಸಂಪೂರ್ಣ ಮಾಹಿತಿ ದೊರೆತಿದೆ. ರಾಮಮೂರ್ತಿನಗರದಲ್ಲಿ ನೀಡಿದ್ದ ದೂರು ಹಾಗೂ ಅದರ ಜೊತೆಗೆ ಸಲ್ಲಿಸಿದ ಸಿಸಿಟಿವಿ ದೃಶ್ಯಾವಳಿಗಳ ಬಗ್ಗೆ ಅವರು ಪರಿಶೀಲನೆ ಆರಂಭಿಸಿದ್ದಾರೆ.

ಇತ್ತೀಚಿನ ಬಿಕ್ಲು ಶಿವಾ ಕೊಲೆಯ ಹಿನ್ನೆಲೆ ನೋಡಿದರೆ, ಈ ದೂರುಗಳ ಅಸಡ್ಡೆ ಹಾಗೂ ಕರ್ತವ್ಯಲೋಪ ಅಧಿಕಾರಿಗಳ ಮೇಲೆ ಹಲವು ಪ್ರಶ್ನೆಗಳನ್ನು ಎಬ್ಬಿಸುತ್ತಿದೆ. ಇದೀಗ ಆರೋಪದ ಸ್ಪಷ್ಟತೆ, ಹಾಗೂ ನ್ಯಾಯದ ಕಠಿಣ ಕಾರ್ಯಾಚರಣೆ ಕುರಿತಾಗಿ ಮುಂದೆ ಹೆಚ್ಚಿನ ಬೆಳವಣಿಗೆ ನಿರೀಕ್ಷೆಯಲ್ಲಿದೆ.

ಜಗದೀಶ್ ವಿರುದ್ಧ ರೌಡಿಶೀಟರ್ ತೆರೆಯಲು ಚಿಂತನೆ

ರೌಡಿಶೀಟರ್ ಬಿಕ್ಲು ಶಿವಾ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಜಗದೀಶ್ ವಿರುದ್ಧ authorities ಈಗ “ಡಾರ್ಮೆಂಟ್ರಿ ರೌಡಿಶೀಟ್” ತೆರೆಯಲು ಚಿಂತನೆ ನಡೆಸುತ್ತಿದ್ದಾರೆ. ಡಾರ್ಮೆಂಟ್ರಿ ರೌಡಿಶೀಟ್ ಎಂದರೆ, ಮೊದಲಿಗೆ ತೆರೆದು ನಂತರ ಕ್ರಮವಿಲ್ಲದ ಕಾರಣದಿಂದ ಮುಚ್ಚಲ್ಪಟ್ಟ ರೌಡಿಪಟ್ಟಿಯನ್ನು ಪುನಃ ತೆರೆಯುವುದು.

ಜಗದೀಶ್ ಹಿಂದಿನ ಹಿನ್ನಲೆ:

  • ಜಗದೀಶ್ ಮೊದಲು ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ.
  • ಈ ಪಟ್ಟಿ ನಂತರ ಯಾವುದೇ ಸೂಕ್ತ ಕಾರ್ಯವಿಲ್ಲದ ಕಾರಣದಿಂದ “ಕ್ಲೋಸ್” ಮಾಡಲಾಗಿತ್ತು.
  • ಆದರೆ, ಇದನ್ನು ರಾಜಕೀಯ ಪ್ರಭಾವದಿಂದ ಮುಚ್ಚಲಾಗಿದೆ ಎಂದು ಬಿಕ್ಲು ಶಿವಾ (ಶಿವಪ್ರಕಾಶ್) ಆರೋಪಿಸಿದ್ದರು.
  • ಜಗದೀಶ್ ರೌಡಿಶೀಟ್ ಕ್ಲೋಸ್ ಮಾಡಿರುವ ಬಗ್ಗೆ ಶಿವಾ ಕಳೆದ ಫೆಬ್ರವರಿ 18 ರಂದು ನಗರ ಪೊಲೀಸ್ ಆಯುಕ್ತ (Commissioner) ದಯಾನಂದ್ ಅವರಿಗೆ ನೇರವಾಗಿ ದೂರು ನೀಡಿದ್ದರು.
  • ಬಿಕ್ಲು ಶಿವಾ ಹತ್ಯೆ ಪ್ರಕರಣದಲ್ಲಿ ಜಗದೀಶ್‌ ವಿರುದ್ಧ A1 (ಮುಖ್ಯ ಆರೋಪಿ) ಎಂಬಂತಾಗಿ ಪ್ರಕರಣ ದಾಖಲಾಗಿದೆ.
  • ಘಟನೆ ಬಳಿಕ ಜಗದೀಶ್ ನಾಪತ್ತೆಯಾಗಿದ್ದು, ಅಜ್ಞಾತ ಸ್ಥಳದಿಂದಲೇ ನಿರೀಕ್ಷಣಾ ಜಾಮೀನಿಗೆ (anticipatory bail) ಅರ್ಜಿ ಸಲ್ಲಿಸುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
  • ಜಗದೀಶ್ ವಿರುದ್ಧ ಇನ್ನೂ ಹಲವು ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಇದ್ದು, ತನಿಖಾಧಿಕಾರಿಗಳು ಅದನ್ನೂ ಪರಿಗಣಿಸುತ್ತಿದ್ದಾರೆ.
  • ಅಂದು ಶಿವಾ ನೀಡಿದ್ದ ದೂರಿನಲ್ಲಿ, ಶಾಸಕರ ರಾಜಕೀಯ ಬೆಂಬಲದಿಂದಲೇ ರೌಡಿಪಟ್ಟಿ ಮುಚ್ಚಲಾಗಿದೆ ಎಂಬ ಆರೋಪವಿದೆ.

ಶಿವಾ ಕೊಟ್ಟ ದೂರು ಹಾಗೂ ಇದೀಗ ಜಗದೀಶ್ ವಿರುದ್ಧ ಮತ್ತೆ ಗಂಭೀರ ಆರೋಪಗಳು ಬಂದ ಹಿನ್ನೆಲೆ, ಪೊಲೀಸರು ಡಾರ್ಮೆಂಟ್ರಿ ರೌಡಿಪಟ್ಟಿ ತೆರೆಯುವ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಈ ಬಗ್ಗೆ ಅಂತಿಮ ನಿರ್ಧಾರವೊಂದು ಹೊರಬೀಳುವ ಸಾಧ್ಯತೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡೆಡ್ಲಿ ರಾಟ್‌ವೀಲರ್ ನಾಯಿಗಳ ದಾಳಿಗೆ ಮಹಿಳೆ ದುರ್ಮರಣ; ಮೂವರು ಮಕ್ಕಳು ಅನಾಥ
ಚಿಕ್ಕಮಗಳೂರು: ಬ್ಯಾನರ್ ಗಲಾಟೆ, ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ, ಬಜರಂಗದಳ ಕಾರ್ಯಕರ್ತರ ಮೇಲೆ ಶಂಕೆ!