
ಮೈಸೂರು(ಸೆ. 30) ಪತ್ನಿ ಜತೆ ಗಲಾಟೆ ಮಾಡಿಕೊಂಡ ಗಂಡ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೈಸೂರಿನ ಮೇಟಗಳ್ಳಿಯ ಬಿ.ಎಂ.ಶ್ರೀ ನಗರದಲ್ಲಿ ಶಿವಾನಂದ (45) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಟೆಂಪೋ ಟ್ರಾವೆಲರ್ ಇಟ್ಟಿದ್ದ ಶಿವಾನಂದ ಅವರಿಗೆ ಕೊರೋನಾ ಲಾಕ್ ಡೌನ್ ಸಂಕಟ ತಂದಿತ್ತು. ಕರೊನಾ ಹಿನ್ನೆಲೆ ಸಂಪಾದನೆ ಇಲ್ಲದೆ ಮನೆಯಲ್ಲೇ ಕುಳಿತಿದ್ದ ಶಿವಾನಂದ್.
ಮದ್ಯಪಾನಕ್ಕೆ ದಾಸರಾಗಿದ್ದರು. ಇದೇ ವಿಚಾರವಾಗಿ ಹೆಂಡತಿಯೊಂದಿಗೆ ಪದೇ ಪದೇ ಗಲಾಟೆ ಆಗುತ್ತಿತ್ತು.
ಮನೆಗೆ ಮರಳುತ್ತಿದ್ದ ವಿದ್ಯಾರ್ಥಿನಿಗೆ ಮದ್ಯ ಕುಡಿಸಿ ರೇಪ್!
ಮನನೊಂದ ಶಿವಾನಂದ ಮೇಟಗಳ್ಳಿಯ ಗ್ಯಾಸ್ ಗೋದಾಮು ಬಳಿ ನಿರ್ಮಾಣ ಹಂತದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮಗಳ ಮೊಬೈಲ್ ಗೆ ಫೋನ್ ಮಾಡಿ ಸಾಯುತ್ತಿರುವುದಾಗಿ ಶಿವಾನಂದ ತಿಳಿಸಿದ್ದರು. ಕುಡಿದ ಅಮಲಿನಲ್ಲಿ ಆಗಾಗ ಶಿವಾನಂದ ಭಯ ಪಡಿಸುತ್ತಿದ್ದರು. ಇದು ಸಹಜವಾದ ಬೆದರಿಕೆ ಎಂದು ಸುಮ್ಮನಾಗಿದ್ದ ಪತ್ನಿ ಮಣಿ ಅಲ್ಲಿಗೆ ಬಿಟ್ಟಿದ್ದರು.
ಕುಡಿದ ಅಮಲಿನಲ್ಲಿ ನೇಣಿಗೆ ಶರಣಾಗಿರುವ ಶಿವಾನಂದ್ ನೇಣಿಗೆ ಶರಣಾಗಿದ್ದಾನೆ. ಹಿಂದೆಯೂ ಒಂದೆರಡು ಸಾರಿ ಆತ್ಮಹತ್ಯೆಗೆ ಯತ್ನ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ