
ಹರ್ಯಾಣ(ಅ. 22) ಭೀಕರ ರಸ್ತೆ ಅಪಘಾತದಲ್ಲಿ(Road Accident) ಒಂದೇ ಕುಟುಂಬದ 8 ಜನ ದುರಂತ (Death) ಸಾವಿಗೀಡಾಗಿದ್ದಾರೆ. ಹರ್ಯಾಣ ಜಜ್ಜರ್ ಜಿಲ್ಲೆಯ ಬಹದ್ದೂರ್ಗಢ್ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಮಗು ಸೇರಿ ಒಂದೇ ಕುಟುಂಬದ 8 ಮಂದಿ ಮೃತಪಟ್ಟಿದ್ದಾರೆ.
ವೇಗವಾಗಿ ಬಂದ ಟ್ರಕ್ ಎರ್ಟಿಗಾದ ಮೇಲೆ ಹರಿದಿದೆ. Kundli-Manesar-Palwal (KMP) ರಸ್ತೆ ಬದಿ ನಿಲ್ಲಿಸಿದ್ದ ಎರ್ಟಿಗಾದ ಮೇಲೆ ಟ್ರಕ್ ಹರಿದಿದೆ.
ದುರಂತದಲ್ಲಿ ಸಾವಿಗೀಡಾದವರು ಉತ್ತರ ಪ್ರದೇಶ ಮೂಲದವರು ಎಂಬುದು ತಿಳಿದು ಬಂದಿದೆ. ರಾಜಸ್ಥಾನದ ದೇವಾಲಯವೊಂದಕ್ಕೆ ತೆರಳಿ ಊರಿನ ಕಡೆ ವಾಪಾಸಾಗುತ್ತಿದ್ದ ವೇಳೆ ಘೋರ ಅವಘಡ ಸಂಭವಿಸಿದೆ.
ನಿಂತಿದ್ದ ಬಸ್ ಗೆ ಡಿಕ್ಕಿ ಹೊಡೆದ ಟ್ರಕ್, 18 ಜನರ ಪ್ರಾಣ ಹೋಯ್ತು
ಚಾಲಕ ಸೇರಿ ಎರ್ಟಿಗಾದಲ್ಲಿ ಹನ್ನೊಂದ ಮಂದಿ ಪ್ರಯಾಣಿಸುತ್ತಿದ್ದರು ವೇಗವಾಗಿ ಬಂದ ಟ್ರಕ್ ನಿಂತಿದ್ದ ಎರ್ಟಿಗಾಕ್ಕೆ ಹಿಂದಿನಿಂದ ಗುದ್ದಿದೆ. ಚಾಲಕ ಮತ್ತು ಒಬ್ಬ ಮಹಿಳೆ ಸ್ವಲ್ಪ ದೂರದಲ್ಲಿ ನಿಂತಿದ್ದರಿಂದ ಬಚಾವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಲಾರಿ ಚಾಲಕನ ಮೇಲೆ ಅಜಾಗರೂಕತೆಯ ವಾಹನ ಚಾಲನೆ (279 (rash driving)) ನಿರ್ಲಕ್ಷ್ಯದಿಂದ ಬೇರೆಯವರ ಸಾವಿಗೆ ಕಾರಣ 304-A (causing death due to negligence) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಉತ್ತರ ಪ್ರದೇಶದ ಪೊಲೀಸರು ಮತ್ತು ಸಂಬಂಧಿಕರಿಗೆ ವಿಷಯ ತಿಳಿಸಲಾಗಿದೆ. ಕರ್ನಾಟಕದಿಂದ ಗೋವಾಕ್ಕೆ ಪ್ರವಾಸ ಹೊರಟಿದ್ದ ಬಾಲ್ಯ ಗೆಳತಿಯರು ಘೋರ ಅಪಘಾತದಲ್ಲಿ ಕಳೆದ ವರ್ಷ ಬಲಿಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ