'ರಜನಿಕಾಂತ್ ನನ್ನ ಜೀವ..ಜೀವನ ..ಇದು ನನ್ನ ಕೊನೆಯ ಪೋಸ್ಟ್'

Published : Jan 01, 2021, 04:39 PM ISTUpdated : Jan 01, 2021, 06:10 PM IST
'ರಜನಿಕಾಂತ್ ನನ್ನ ಜೀವ..ಜೀವನ ..ಇದು ನನ್ನ ಕೊನೆಯ ಪೋಸ್ಟ್'

ಸಾರಾಂಶ

ರಾಜಕೀಯಕ್ಕೆ ಬರುವುದಿಲ್ಲ ಎಂದ ಸೂಪರ್ ಸ್ಟಾರ್ ರಜನಿಕಾಂತ್/ ನೊಂದ ಅಭಿಮಾನಿ ಆತ್ಮಹತ್ಯೆಗೆ ಶರಣು/  ಪೊಲೀಸರು ಹೇಳುವುದೇ  ಬೇರೆ/ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಅಭಿಮಾನಿ

ವಿಲ್ಲುಪುರಂ(ಜ. 01) ಅನಾರೋಗ್ಯ ಮತ್ತು ಇತರೆ ಕಾರಣಗಳಿಂದ  ನಟ ರಜನಿಕಾಂತ್ ರಾಜಕೀಯದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ಇದೇ ಕಾರಣಕ್ಕೆ ನಿರಾಶೆಗೊಂಡ  ಪನಂಪಟ್ಟು ಮೂಲದ 34 ವರ್ಷದ ಅಭಿಮಾನಿಯೊಬ್ಬ  ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಜೆ.ರಾಜ್‌ಕುಮಾರ್ ಬುಧವಾರ ಫೇಸ್‌ಬುಕ್‌ನಲ್ಲಿ ಪೋಸ್ಟ್  ಹಾಕಿ ರಜನಿ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.  ರಜಿನಿಕಾಂತ್ ಅವರೇ ನನ್ನ ಜೀವ ಮತ್ತು ಜೀವನ ಇದು ನನ್ನ ಕೊನೆಯ ಪೋಸ್ಟ್  ಎಂದು ಬರೆದುಕೊಂಡಿದ್ದಾನೆ.  ಇದಾದ ಮೇಲೆ ಗೆಳೆಯರೊಂದಿಗೆ ಪಾರ್ಟಿ ಮಾಡಿದ್ದಾನೆ. ಮದ್ಯದ ಅಮಲಿನಲ್ಲಿ ರಾಜ್ ಕುಮಾರ್ ನನ್ನು ಆತನ ಗೆಳೆಯರು ಛೇಡಿಸಿದ್ದಾರೆ.  ರಜನಿಕಾಂತ್ ನಿರ್ಧಾರದ ಬಗ್ಗೆಯೂ ಟೀಕೆ ಮಾಡಿದ್ದಾರೆ.

ತಲೈವಾ ರಾಜಕಾರಣಕ್ಕೆ ಬರಲ್ವಂತೆ!

 ಗುರುವಾರ ಬೆಳಿಗ್ಗೆ ಶವವಾಗಿ ರಾಜ್ ಕುಮಾರ್ ಪತ್ತೆಯಾಗಿದ್ದಾನೆ.  ಆದರೆ ಪೊಲೀಸರು ಇದು ಆತ್ಮಹತ್ಯೆ ಅಲ್ಲ ಎಂದಿದ್ದಾರೆ. ಬೇರೆ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರಕ್ಕೆ ರಾಜ್ ಕುಮಾರ್ ಹೂಮಾಲೆ ಖರೀದಿಗಾಗಿ ರಾತ್ರಿ ಮಾರುಕಟ್ಟೆಗೆ ಸ್ನೇಹಿತರೊಂದಿಗೆ ತೆರಳಿದ್ದಾನೆ. ಅಲ್ಲಿ ಮೂರ್ಛೆ ಹೋಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಕೊನೆ ಉಸಿರು  ಎಳೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.  ರಾಜ್ ಕುಮಾರ್ ಕುಟುಂಬ ಸಹ ಯಾವುದೇ ದೂರು ನೀಡಿಲ್ಲ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿವ್ಯಾಂಗ ಯುವತಿ ಮೇಲೆ ಬಲಾತ್ಕಾರ: ಯಾರಿಗೂ ಹೇಳದಂತೆ ಬೆದರಿಕೆ!
ಗ್ರ್ಯಾಮಿ ಪ್ರಶಸ್ತಿ ವಿಜೇತ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಬೆಂಗಳೂರು ಮನೆಯಿಂದ ಡೆಲಿವರಿ ಬಾಯ್ಸ್ ಕಳ್ಳತನ!