
ಬೆಂಗಳೂರು [ಡಿ.10]: ಬೆಂಗಳೂರಿಗೆ ಎಂಟ್ರಿ ಕೊಟ್ಟಿದೆ ಒಂದು ನಟೋರಿಯಸ್ ಗ್ಯಾಂಗ್ ಬೆಂಗಳೂರಿಗರೇ ಎಚ್ಚರ! ಹಂತರ ಟೀಂ ಒಂದು ಬೆಂಗಳೂರು ಪ್ರವೇಶಿಸಿದ್ದು, ಚಿನ್ನ ಕದಿಯೋ ಜೊತೆಗೆ ಪ್ರಾಣ ತೆಗೆದೂ ಹೋಗ್ತಾರೆ. ಸದ್ಯ ಈ ಗ್ಯಾಂಗ್ ಬೆಂಗಳೂರು ಪೊಲೀಸರ ನಿದ್ದೆ ಗೆಡಿಸಿದ್ದು, ಇವರ ಬಂಧನಕ್ಕೆ ಬಲೆ ಬೀಸಿದೆ.
ಕ್ಯಾತ್ಸಂದ್ರದಲ್ಲಿ ಮಹಿಳೆಯೊಬ್ಬರನ್ನ ಈ ಗ್ಯಾಂಗ್ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದು, ಬೈಕಿನಲ್ಲಿ ಆಗಮಿಸಿ ಚಿನ್ನ ಕಿತ್ತುಕೊಳ್ಳುವುದಲ್ಲದೇ ಕತ್ತು ಸೀಳಿ ಕೊಲೆ ಮಾಡಿ ತೆರಳುತ್ತಾರೆ.
ವೇಶ್ಯಾವಾಟಿಕೆ ದಂಧೆ : ನಟ ಸಾಧುಕೋಕಿಲಾಗೆ ರಿಲೀಫ್...
ಉತ್ತರ ಪ್ರದೇಶದಿಂದ ಬಂದಿರೋ ಗ್ಯಾಂಗಿನ ಕೈಯಲ್ಲಿ ಯಾರೇ ಸಿಕ್ಕಿದರೂ ಕೂಡ ಅವರು ಪ್ರಾಣ ತೆಗೆದು ದೋಚಿಕೊಂಡು ಪರಾರಿಯಾಗುತ್ತಾರೆ. ದಂಡುಪಾಳ್ಯ ಗ್ಯಾಂಗ್ ನಂತೆಯೇ ಭೀಕರವಾಗಿ ಕೊಲೆ ಮಾಡುವ ಈ ಗ್ಯಾಂಗ್ ಸೋಲದೇವನಹಳ್ಳಿ, ಹೇಸರಘಟ್ಟ, ಪೀಣ್ಯ ಈ ಭಾಗದಲ್ಲಿ ನೆಲೆಸಿದೆ ಎನ್ನಲಾಗುತ್ತಿದೆ.
ಸದ್ಯ ಬೆಂಗಳೂರು ಪೊಲೀಸರು ಈ ಖತರ್ನಾಕ್ ಗ್ಯಾಂಗ್ ಬಂಧನಕ್ಕೆ ಬಲೆ ಬೀಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ