ಶಂಕರ ಬಿದರಿ ಮೇಲ್‌ ಐಡಿ ಹ್ಯಾಕ್‌ ಮಾಡಿ ವಂಚನೆ

Kannadaprabha News   | Asianet News
Published : Feb 28, 2021, 07:38 AM IST
ಶಂಕರ ಬಿದರಿ ಮೇಲ್‌ ಐಡಿ ಹ್ಯಾಕ್‌ ಮಾಡಿ ವಂಚನೆ

ಸಾರಾಂಶ

ನಿವೃತ್ತ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಶಂಕರ ಮಹದೇವ ಬಿದರಿ ಅವರ ಇ-ಮೇಲ್‌ ಐಡಿಯನ್ನು ಹ್ಯಾಕ್‌ ಮಾಡಿ ಸಾವಿರಾರು ರು. ವಂಚನೆ ಮಾಡಲಾಗಿದೆ. 

 ಬೆಂಗಳೂರು (ಫೆ.28):  ನಿವೃತ್ತ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಶಂಕರ ಮಹದೇವ ಬಿದರಿ ಅವರ ಇ-ಮೇಲ್‌ ಐಡಿಯನ್ನು ಹ್ಯಾಕ್‌ ಮಾಡಿದ ಕಿಡಿಗೇಡಿಗಳು, ಬಿದರಿ ಅವರ ಹೆಸರಿನಲ್ಲಿ ಸ್ನೇಹಿತರಿಗೆ ಮೇಲ್‌ ಕಳುಹಿಸಿ 25 ಸಾವಿರ ವಸೂಲಿ ಮಾಡಿರುವ ಘಟನೆ ನಡೆದಿದೆ.

ಎರಡು ದಿನಗಳ ಹಿಂದ ಈ ಕೃತ್ಯ ನಡೆದಿದ್ದು, ಆಗ್ನೇಯ ವಿಭಾಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ಬಿದರಿ ದೂರು ದಾಖಲಿಸಿದ್ದಾರೆ. ಈ ದೂರಿನನ್ವಯ ಪೊಲೀಸರು, ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ಹರಿದ ಪೇಪರ್ ಚೂರು, ಮೂರು ಕೂದಲು..ಚಿನ್ನಸ್ವಾಮಿ ಸ್ಫೋಟದ ಅಸಲಿ ಕತೆ!

‘ನನ್ನ ಇ-ಮೇಲ್‌ ಐಡಿಯನ್ನು ಅಪರಿಚಿತರು ಹ್ಯಾಕ್‌ ಮಾಡಿದ್ದಲ್ಲದೆ ಇ-ಮೇಲ್‌ನಲ್ಲಿರುವ ಸ್ನೇಹಿತರಿಗೆ ಬ್ಯಾಂಕ್‌ ಖಾತೆ ಸಂಖ್ಯೆ ಹಾಗೂ ಐಎಫ್‌ಎಸ್‌ಸಿ ಕೋಡ್‌ ಕಳುಹಿಸಿದ್ದರು. ಬಳಿಕ ಸದರಿ ಖಾತೆಗೆ ಹಣವನ್ನು ಜಮಾವಣೆ ಮಾಡುವಂತೆ ದುಷ್ಕರ್ಮಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರು. ನನ್ನ ಸ್ನೇಹಿತರೊಬ್ಬರು ನಾನೇ ಸಂದೇಶ ಕಳುಹಿಸಿದ್ದೇನೆ ಎಂದು ಭಾವಿಸಿ 25 ಸಾವಿರವನ್ನು ಪಾವತಿ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಜರುಗಿಸಬೇಕು’ ಎಂದು ಶಂಕರ ಬಿದರಿ ದೂರಿನಲ್ಲಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ