ಸೋಶಿಯಲ್ ಮೀಡಿಯಾ ಗುದ್ದಾಟ; ಕ್ಷುಲ್ಲಕ ಕಾರಣಕ್ಕೆ ಬಾಲಕ ಕೊಲೆಯಾದ

Published : Nov 30, 2020, 10:15 PM ISTUpdated : Nov 30, 2020, 10:16 PM IST
ಸೋಶಿಯಲ್ ಮೀಡಿಯಾ ಗುದ್ದಾಟ; ಕ್ಷುಲ್ಲಕ ಕಾರಣಕ್ಕೆ ಬಾಲಕ ಕೊಲೆಯಾದ

ಸಾರಾಂಶ

ಕ್ಷುಲ್ಲಕ ಕಾರಣಕ್ಕೆ ಬಾಲಕನ ಮೇಲೆ ಹಲ್ಲೆ/ ಫೇಸ್ ಬುಕ್ ನಲ್ಲಿ ಸಹೋದರಿಯ ಪೋಟೋ ಹಾಕಿದ್ದಕ್ಕೆ ಕೊಲೆ/ ಗೆಳೆಯರೊಂದಿಗೆ ದಾಳಿ ಮಾಡಿದ ಬಾಲಕ/ ಚಿಕಿತ್ಸೆ ಫಲಕಾರಿಯಾಗದೆ ಸಾವು

ಇಂದೋರ್(ನ. 30)  ಈ ಸೋಶಿಯಲ್ ಮೀಡಿಯಾ ಎಷ್ಟೊಂದು ಆತಂಕಕಾರಿಯಾಗಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.  ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯಲ್ಲಿ 16 ವರ್ಷದ ಬಾಲಕ ಮತ್ತು ಆತನ ಸ್ನೇಹಿತ 17 ವರ್ಷದ ಬಾಲಕನ ಮೇಲೆ ದಾಳಿ ಮಾಡಿದ್ದು ದಾಳಿಗೊಳಗಾದವ ಸಾವನ್ನಪ್ಪಿದ್ದಾನೆ.

ಬಾಪು ನಗರದ ಕೃಷ್ಣ (17) ಕ್ಷುಲ್ಲಕ ಕಾರಣಕ್ಕೆ ಹತ್ಯೆಯಾಗಿಹೋಗಿದ್ದಾನೆ. 16 ವರ್ಷದ ಬಾಲಕನ ಸಹೋದರಿಯ ಪೋಟೋವನ್ನು ಕೃಷ್ಣ ಸೋಶಿಯಲ್ ಮೀಡಿಯಾಕ್ಕೆ ಅಪ್ ಲೋಡ್ ಮಾಡಿದ್ದ. ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳ ಆರಂಭವಾಗಿದ್ದು ಕೊಲೆಯಲ್ಲಿ ಅಂತ್ಯವಾಗಿದೆ.

ಚುಡಾಯಿಸಿದ ಎಂಬ ಕಾರಣಕ್ಕೆ ಹಿಗ್ಗಾ ಮುಗ್ಗಾ ಥಳಿಸಿ, ಮಾನವನ ಮಲ ತಿನ್ನಲು ಹೇಳಿದ್ರು!
 
ಸಾಮಾನ್ಯ  ಪೋಟೋ ಅಪ್ ಲೋಡ್  ಮಾಡಿದ್ದ ಕೃಷ್ಣನನ್ನು ಕರೊಂಡಿ ರೈಲ್ವೆ ನಿಲ್ದಾಣದ ಬಳಿ ಬರಲು ಹೇಳಲಾಗಿದೆ. ಕೃಷ್ಣ ಅಲ್ಲಿಗೆ ಹೋದಾಗ ಆರೋಪಿ ಬಾಲಕ  ಇತರ ಮೂವರು ಸ್ನೇಹಿತರೊಂದಿಗೆ ನಿಂತಿದ್ದ. 

ಈ ವೇಳೆ  ಮೂವರು ಹಡುಗರಲ್ಲಿ ಒಬ್ಬಾತ ದಾಳಿ ಮಾಡಿದ್ದಾನೆ. ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಲಾಗಿದೆ.   ಗಂಭೀರ ಗಾಯಗೊಂಡ ಬಾಲಕನನ್ನು ಅಲ್ಲಿಯೇ ಬಿಟ್ಟು ತೆರಳಿದ್ದಾರೆ.

ಕೃಷ್ಣನ ಸೋದರಸಂಬಂಧಿ ದಾರಿಹೋಕರ ಸಹಾಯದಿಂದ ರಕ್ಷಣೆ ಮಾಡಿ ಆಂಬುಲೆನ್ಸ್ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಲಾಗಿದೆ.   ತೀವ್ರ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ