ಮಣಿಪಾಲ್; ಚಾಕು ತೋರಿಸಿ ಕಾಲೇಜು ಸ್ಟುಡೆಂಟ್ಸ್ ದೋಚಿದ್ದ ಶಿವಮೊಗ್ಗದ ಕಳ್ಳರು ಬಲೆಗೆ

Published : Feb 07, 2021, 10:39 PM IST
ಮಣಿಪಾಲ್; ಚಾಕು ತೋರಿಸಿ ಕಾಲೇಜು ಸ್ಟುಡೆಂಟ್ಸ್ ದೋಚಿದ್ದ ಶಿವಮೊಗ್ಗದ ಕಳ್ಳರು ಬಲೆಗೆ

ಸಾರಾಂಶ

ಸುಲಿಗೆ ಆರೋಪಿಗಳಿಬ್ಬರ ಬಂಧನ/ ವಿದ್ಯಾರ್ಥಿಗಳನ್ನು ಸುಲಿಗೆ ಮಾಡಿ ಪರಾರಿಯಾಗಿದ್ದರು/ ಕಾರಿನಲ್ಲಿ ಬಂದು ಚಾಕು  ತೋರಿಸಿ ದೋಚಿದ್ದರು/ ಮೊಬೈಲ್ ಮತ್ತು ನಗದು ಕಸಿದು ಪರಾರಿಯಾಗಿದ್ದವರು ಶಿವಮೊಗ್ಗ ಜಿಲ್ಲೆಯವರು

ಮಣಿಪಾಲ(ಫೆ.  07)   ಇಲ್ಲಿನ ಕೆಎಫ್ ಸಿ ಬಿಲ್ಡಿಂಗ್ ಬಳಿ ಜ.31ರಂದು ಇಬ್ಬರು ವಿದ್ಯಾರ್ಥಿಗಳಿಗೆ, ಕಾರಿನಲ್ಲಿ ಬಂದು ಚೂರಿ ತೋರಿಸಿ ಬೆದರಿಸಿ ಸುಲಿಗೆ ಮಾಡಿದ ಇಬ್ಬರು ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆಯ ಟಿಪ್ಪುನಗರದ ಆಶಿಫ್ (24) ಮತ್ತು ದಸ್ತಗೀರ್ ಬೇಗ್ (24) ಎಂದು ಗುರುತಿಸಲಾಗಿದ್ದು, ಇನ್ನೊಬ್ಬ ಆರೋಪಿ ತಲೆಮರಿಸಿಕೊಂಡಿದ್ದಾನೆ ಎಂದು ಎಸ್‌ಪಿ ಎನ್.ವಿಷ್ಣುವರ್ಧನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ

ಆರೋಪಿಗಳು ವಿದ್ಯಾರ್ಥಿ ಮತ್ತವನ ಗೆಳತಿ ಬಳಿ ಬಂದಿದ್ದಾರೆ.  ಗೆಳತಿಯ ಕುತ್ತಿಗೆಗೆ ಚಾಕು ಹಿಡಿದು ಬೆದರಿಸಿ, ಅವರಲ್ಲಿದ್ದ 2 ಮೊಬೈಲ್, ಇಯರ್ ಫೋನ್, 250 ರು. ನಗದು ಸುಲಿಗೆ ಮಾಡಿ ಪರಾರಿಯಾಗಿದ್ದರು.

'ಅಲ್ಲಾ' ಗಾಗಿ ಹೆತ್ತ ಮಗುವಿನ ಕತ್ತು ಸೀಳಿದ ತಾಯಿ, 'ತ್ಯಾಗ ಮಾಡಿದ್ದೇನೆ'

ಆದರೇ ಆರೋಪಿಗಳು ಮಣಿಪಾಲದಲ್ಲಿಯೇ ತಲೆಮರೆಸಿಕೊಂಡಿದ್ದರು. ಅವರನ್ನು ಭಾನುವಾರ ಬೆಳಗ್ಗೆ ಮಣಿಪಾಲ ಪ್ಲಾನೆಟ್ ಕಫೆ ಹೊಟೆಲ್ ಸಮೀಪ ಬಂಧಿಸಿ ಕಾರು ಮತ್ತು ಮಾರಕಾಯುಧವನ್ನು  ವಶಪಡಿಸಿಕೊಳ್ಳಲಾಗಿದೆ. ಮಣಿಪಾಲ ಪಿಎಸ್‌ಐ ರಾಜ್‌ಶೇಖರ ವಂದಲಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು.

ಮತ್ತೊಬ್ಬನ ಬಂಧನ:   ಮಣಿಪಾಲದ ನರ್ಸರಿ ಮಾಲಕ ದಿಲೀಪ್ ಕುಮಾರ್ ರೈ ಅವರನ್ನು ಅಲ್ಲಿ ಕೆಲಸಕ್ಕಿದ್ದ ಬಾಗಲಕೋಟೆ ಬಸವರಾಜ್ ಎಂಬಾತ ಹಣಕ್ಕಾಗಿ ಬೆದರಿಕೆಯೊಡ್ಡಿ ಪರಾರಿಯಾಗಿದ್ದು, ಆತನನ್ನು ಬಾಗಲಕೋಟೆಯಲ್ಲಿ ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

 ‌ಕಳ್ಳತನ ಸುಳಿವು ಲಭ್ಯ;   ಇತ್ತೀಚೆಗೆ ನಗರದ ಮಿಶನ್‌ಕಾಂಪೌಂಡ್ ನ ಸಹಕಾರ ಬ್ಯಾಂಕಲ್ಲಿ ಕಳ್ಳತನ ಮಾಡಿದ  ಪ್ರಕರಣದ ಆರೋಪಿಗಳ ಸುಳಿವು ದೊರೆತಿದ್ದು, ಆರೋಪಿಗಳನ್ನು ಸದ್ಯವೇ ಬಂಧಿಸಲಾಗುತ್ತದೆ ಎಂದು ಎಸ್‌ಪಿ ವಿಷ್ಣುವರ್ಧನ್ ತಿಳಿಸಿದರು. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!
ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ