
ಮಂಗಳೂರು(ಜೂ. 21) ಇಲಿ ಪಾಷಾಣ ತಿಂದು ಮಗು ಸಾವನ್ನಪ್ಪಿದೆ. ಎರಡುವರೆ ವರ್ಷದ ಶ್ರೇಯಾ ಆಟವಾಡುತ್ತಾ ಮನೆಯಲ್ಲಿದ್ದ ಇಲಿಪಾಷಾಣ ತಿಂದಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನ ಮಾಡಿದರೂ ಫಲಕಾರಿಯಾಗಲಿಲ್ಲ.
ನಿವೃತ್ತ ಸೈನಿಕ ಸೈಜು ಹಾಗೂ ದೀಪ್ತಿ ದಂಪತಿಗಳ ಪುತ್ರಿ ಶ್ರೇಯಾ ಮನೆಯಲ್ಲಿ ಆಡವಾಡುತ್ತಿದ್ದಳು. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏನೂ ಅರಿಯದ ಪುಟ್ಟ ಕಂದ ದಾರುಣ ಸಾವಿಗೆ ಗುರಿಯಾಗಿದೆ.
ಲಾಕ್ ಡೌನ್ ನಲ್ಲೂ ಮೂರು ಮದುವೆ ಮಾಡಿಕೊಂಡ ಮೈಸೂರಿನ ರಂಗಿಲಾಲ
ಎಚ್ಚರ; ಲಾಕ್ ಡೌನ್ ಕಾರಣಕ್ಕೆ ಶಾಲೆಗಳು ಬಂದ್ ಇದ್ದು ನಿಧಾನಕ್ಕೆ ತೆರೆದುಕೊಳ್ಳುತ್ತಿವೆ. ಮಕ್ಕಳು ಆಟವಾಡುತ್ತ ಎಲ್ಲಿಂದಲೋ ಎಲ್ಲಿಗೆ ತೆರಳುವುದು, ವಸ್ತುಗಳನ್ನು ಹುಡುಕುವುದನ್ನು ಮಾಡುತ್ತಿರುತ್ತವೆ. ಈ ಸಂದರ್ಭದಲ್ಲಿ ಪಾಲಕರು ಹೆಚ್ಚಿನ ನಿಗಾ ವಹಿಸುವುದು ಅನಿವಾರ್ಯವಾಗಿರುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ