ಮಾನವೀಯತೆ ಮರೆತ ಕ್ಯಾಬ್ ಚಾಲಕ, ಪುಟ್ಟ ಮರಿಗಳ ಮೇಲೆ ಕಾರು ಹತ್ತಿಸಿದ!

Published : Nov 19, 2019, 01:46 PM ISTUpdated : Nov 19, 2019, 01:50 PM IST
ಮಾನವೀಯತೆ ಮರೆತ ಕ್ಯಾಬ್ ಚಾಲಕ, ಪುಟ್ಟ ಮರಿಗಳ ಮೇಲೆ ಕಾರು ಹತ್ತಿಸಿದ!

ಸಾರಾಂಶ

ಭುವನೇಶ್ವರದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಕ್ಯಾಬ್ ಚಾಲಕನೊಬ್ಬ ಪುಟ್ಟ ನಾಯಿ ಮರಿಗಳ ಮೇಲೆ ಕ್ಯಾಬ್ ಚಲಾಯಿಸಿದ್ದಾನೆ,

ಭುವನೇಶ್ವರ[ನ.19]: ಮಾನವೀಯತೆ ಮರೆತ ಕ್ಯಾಬ್ ಚಾಲಕನೊಬ್ಬ ರಸ್ತೆ ಬದಿಯಲ್ಲಿದ್ದ ನಾಲ್ಕು ಪುಟ್ಟ ನಾಯಿ ಮರಿಗಳ ಮೇಲೆ ಕಾರು ಚಲಾಯಿಸಿರುವ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಪ್ರಾಣಿ ದಯಾ ಸಂಘದ ಸದಸ್ಯರು ನೀಡಿದ ದೂರನ್ನು ಸ್ವೀಕರಿಸಿದ ಪೊಲೀಸರು ಸದ್ಯ ಕ್ಯಾಬ್ ಚಾಲಕನನ್ನು ಬಂಧಿಸಿದ್ದಾರೆ.

ಈ ಸಂಬಂಧ ಮಾಹಿತಿ ನೀಡಿರುವ ಭುವನೇಶ್ವರ ಡಿಸಿಪಿ ಅನುಪ್ ಕುಮಾರ್ ಸಾಹೂ 'ಭಾನುವಾರದಂದು ಈ ಘಟನೆ ನಡೆದಿದ್ದು, ಭುವನೇಶ್ವರದ ಶೈಲಶ್ರೀ ವಿಹಾರ್ ಪ್ರದೇಶದಲ್ಲಿ ಕ್ಯಾಬ್ ಚಾಲಕ ಕನ್ಹು ಚರಣ್ ಗಿರಿ ನಾಯಿ ಮರಿಗಳನ್ನು ಆಹುತಿ ಪಡೆದಿದ್ದಾನೆ. ಅಲ್ಲೇ ಕರ್ತವ್ಯದಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಕ್ಯಾಬ್ ಚಾಲಕನನ್ನು ತಡೆಯಲು ಯತ್ನಿಸಿದರಾದರೂ ಚಾಲಕ ಪರಾರಿಯಾಗಿದ್ದಾನೆ' ಎಂದಿದ್ದಾರೆ.

ಪೀಕ್ ಟೈಮ್‌ನಲ್ಲಿ ಬೆಲೆ ಹೆಚ್ಚಳವಿಲ್ಲ; ಪ್ರಯಾಣಿಕರಿಗೆ ಒಲಾ ಕೊಡುಗೆ!

ಘಟನೆಯ ಮಾಹಿತಿ ಪಡೆದ ಪ್ರಾಣಿ ದಯಾ ಸಂಘದ ಸದಸ್ಯರು ಕೂಡಲೇ ಪೊಲೀಸ್ ಠಾಣೆಗೆ ತೆರಳಿ ಐಪಿಸಿ ಸೆಕ್ಷನ್ 279, 429 ಹಾಗೂ ಮೋಟಾರು ವಾಹನ ಕಾಯ್ದೆ184ರಡಿಯಲ್ಲಿ ಕ್ಯಾಬ್ ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ. 

2016ರ ಮಾರ್ಚ್ ನಲ್ಲಿ 8 ನಾಯಿ ಮರಿಗಳನ್ನು ಕೊಂದಿದ್ದ ಆರೋಪದಡಿಯಲ್ಲಿ ನಿವೃತ್ತ ವಾಯಿಸೇನಾಧಿಕಾರಿಯ ಪತ್ನಿಯನ್ನು ಬಂಧಿಸಲಾಗಿತ್ತು. ಬಳಿಕ ತಾನು ತಾಯಿ ನಾಯಿಗೆ ಬುದ್ಧಿ ಕಲಿಸುವ ಸಲುವಾಗಿ ಹೀಗೆ ಮಾಡಿದ್ದೆ ಎಂಬ ಉತ್ತರ ನೀಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನನ್ನ ಜೊತೆಗೂ ಬಾ: ಗೆಳೆಯನ ಗರ್ಲ್‌ಫ್ರೆಂಡ್‌ಗೆ ಸಂದೇಶ: ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನೇ ಕೊಂದು ಪೀಸ್ ಪೀಸ್ ಮಾಡಿದ
The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ Darshan ಮೆಸೇಜ್