ಭಾಗ್ಯವಂತಿ ದೇವಸ್ಥಾನ ಕಳ್ಳತನ; ಇಬ್ಬರು ಖದೀಮರು ಅರೆಸ್ಟ್

Published : Jun 04, 2023, 05:35 AM IST
ಭಾಗ್ಯವಂತಿ ದೇವಸ್ಥಾನ ಕಳ್ಳತನ; ಇಬ್ಬರು ಖದೀಮರು ಅರೆಸ್ಟ್

ಸಾರಾಂಶ

ರಾಜ್ಯದ ಪ್ರಸಿದ್ಧ ಧಾರ್ಮಿಕ ತಾಣಗಳಲ್ಲಿ ಒಂದಾಗಿರುವ ಅಫಜಲ್ಪುರ ತಾಲೂಕಿನ ಸುಕ್ಷೇತ್ರ ಘತ್ತರಗಿಯ ಭಾಗ್ಯವಂತಿ ದೇವಸ್ಥಾನದಲ್ಲಿ ಕಳೆದ ಮೇ 29ರಂದು ಮೂರು ಜನ ಮುಸುಕುಧಾರಿ ಕಳ್ಳರು ದೇವಸ್ಥಾನದ ಒಳ ಹೊಕ್ಕು ದೇವಿಯ ಮೈಮೇಲಿನ ಬಂಗಾರದ ಒಡವೆ, ಕಾಣಿಕೆ ಹುಂಡಿಯಲ್ಲಿನ ಹಣ ದೋಚಿ ಪರಾರಿಯಾಗಿದ್ದರು. ನಾಲ್ಕು ದಿನದ ನಂತರ ಸೂಕ್ತ ಮಾಹಿತಿ ಮೇರೆಗೆ ಕಳ್ಳರನ್ನು ಬಂಧಿಸುವಲ್ಲಿ ಅಫಜಲ್ಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಚವಡಾಪುರ (ಜೂ.4) : ರಾಜ್ಯದ ಪ್ರಸಿದ್ಧ ಧಾರ್ಮಿಕ ತಾಣಗಳಲ್ಲಿ ಒಂದಾಗಿರುವ ಅಫಜಲ್ಪುರ ತಾಲೂಕಿನ ಸುಕ್ಷೇತ್ರ ಘತ್ತರಗಿಯ ಭಾಗ್ಯವಂತಿ ದೇವಸ್ಥಾನದಲ್ಲಿ ಕಳೆದ ಮೇ 29ರಂದು ಮೂರು ಜನ ಮುಸುಕುಧಾರಿ ಕಳ್ಳರು ದೇವಸ್ಥಾನದ ಒಳ ಹೊಕ್ಕು ದೇವಿಯ ಮೈಮೇಲಿನ ಬಂಗಾರದ ಒಡವೆ, ಕಾಣಿಕೆ ಹುಂಡಿಯಲ್ಲಿನ ಹಣ ದೋಚಿ ಪರಾರಿಯಾಗಿದ್ದರು. ನಾಲ್ಕು ದಿನದ ನಂತರ ಸೂಕ್ತ ಮಾಹಿತಿ ಮೇರೆಗೆ ಕಳ್ಳರನ್ನು ಬಂಧಿಸುವಲ್ಲಿ ಅಫಜಲ್ಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೇ 19ರಂದು ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ದೇವಿಯ ಮೈಮೇಲಿನ 6 ಲಕ್ಷ 40 ಸಾವಿರ ಮೌಲ್ಯದ ಒಡವೆಗಳು, ಹುಂಡಿಯಲ್ಲಿನ ಸುಮಾರು 1.5 ಲಕ್ಷ ನಗದು ದೋಚಲಾಗಿತ್ತು. ಇದು ದೇವಸ್ಥಾನದ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಈ ವಿಷಯ ಮಿಂಚಿನಂತೆ ಎಲ್ಲೆಡೆ ಸಂಚರಿಸಿ ಪೊಲೀಸ್‌ ಇಲಾಖೆಗೆ ತಲೆಬಿಸಿಯಾಗುವಂತಾಗಿತ್ತು.

ದಾವಣಗೆರೆ: ಘನತ್ಯಾಜ್ಯ ವಿಲೇವಾರಿ ಘಟಕದ ಶೀಟು ಕಳವು, ಕುಣಿಗಲ್‌ನಲ್ಲಿ ಕೊಳವೆ ಬಾವಿ ಕೇಬಲ್ ಕಳವು

ಈ ಕುರಿತು ಅಫಜಲ್ಪುರ ಸಿಪಿಐ ರಾಜಶೇಖರ ಬಡದೇಸಾರ್‌ ಮಾಹಿತಿ ನೀಡಿದ್ದು ಕಳ್ಳತನವಾದಾಗಿನಿಂದ ನಮಗೆಲ್ಲ ಈ ಕೇಸು ಪ್ರತಿಷ್ಠೆಯಾಗಿತ್ತು. ಶಕ್ತಿ ದೇವತೆಯ ಒಡವೆ, ಕಾಣಿಕೆ ಹುಂಡಿಯನ್ನು ಕಳ್ಳತನ ಮಾಡಿದವರ ಹೆಡೆಮುರಿ ಕಟ್ಟಬೇಕೆಂದು ನಿರ್ಧರಿಸಿ ಆಳಂದ ಡಿವೈಎಸ್‌ಪಿ ಗೋಪಿ.ಆರ್‌ ನೇತೃತ್ವದಲ್ಲಿ ಅಫಜಲ್ಪುರ ಸಿಪಿಐ ರಾಜಶೇಖರ ಬಡದೇಸಾರ್‌, ಅಫಜಲ್ಪುರ ಪಿಎಸ್‌ಐ ಭೀಮರಾಯ ಬಂಕ್ಲಿ, ಸಿಬ್ಬಂದಿಯರಾದ ಸಂತೋಷ.ಎಚ್‌, ಶಿವಲಿಂಗ, ರೇವಣಸಿದ್ದ, ಆನಂದ, ರೇವೂರ(ಬಿ) ಠಾಣೆಯ ಯಲ್ಲಾಲಿಂಗ, ದೇವಲ ಗಾಣಗಾಪೂರ ಠಾಣೆಯ ಮಲ್ಲಿಕಾರ್ಜುನ ಇವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿ ಪತ್ತೆ ಕಾರ್ಯ ನಡೆಸಿದ್ದೆವು.

ಕಳ್ಳತನವಾಗಿದ್ದ ಆಭರಣಗಳನ್ನು ಇಟ್ಟುಕೊಂಡಿದ್ದ ಬಿದರ ಜಿಲ್ಲೆಯ ಅವರಾದ ತಾಲೂಕಿನ ಹುಲಿಯಾಳ ತಾಂಡಾದ ನಿವಾಸಿಗಳಾದ ಆರೋಪಿ ತಾನಾಜಿ ಹಾಗೂ ಕವಿತಾ ರಾಠೋಡ ಇವರನ್ನು ಶನಿವಾರ ಸೂಕ್ತ ಮಾಹಿತಿಯ ಮೇರೆಗೆ ದಸ್ತಗಿರಿ ಮಾಡಲಾಗಿದ್ದು ಬಂಧಿತರ ಬಳಿಯಿಂದ 65 ಗ್ರಾಂ ಬಂಗಾರದ ಒಡವೆಗಳು ಹಾಗೂ 80 ಸಾವಿರ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಅಂಗಡಿ ಮೇಲ್ಚಾವಣಿ ಕೊರೆದು ಲಕ್ಷಾಂತರ ರೂ. ಮೊಬೈಲ್ ಕದ್ದೊಯ್ದ ಖದೀಮರು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!