ಯುಬಿ ಸಿಟಿ ಹಲ್ಲೆ ಪ್ರಕರಣ; ವಿಜಯಾನಂದ ಕಾಶಪ್ಪನವರ್ ಖುಲಾಸೆ

Published : Apr 15, 2021, 04:42 PM ISTUpdated : Apr 15, 2021, 04:48 PM IST
ಯುಬಿ ಸಿಟಿ ಹಲ್ಲೆ ಪ್ರಕರಣ; ವಿಜಯಾನಂದ ಕಾಶಪ್ಪನವರ್ ಖುಲಾಸೆ

ಸಾರಾಂಶ

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹಾಗೂ ರೌಡಿಶೀಟರ್ ಸೋಮಶೇಖರ್ ಖುಲಾಸೆ/ ಯುಬಿ ಸಿಟಿಯ ಸ್ಕೈ ಬಾರ್ ಹಲ್ಲೆ ಪ್ರಕರಣ/ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ನಿರ್ದೋಷಿ/ ಜನಪ್ರತಿನಿಧಿಗಳ‌ ವಿಶೇಷ ನ್ಯಾಯಾಲಯದ ತೀರ್ಪು

ಬೆಂಗಳೂರು(ಏ. 15)   ಯುಬಿ ಸಿಟಿಯ ಸ್ಕೈ ಬಾರ್ ಹಲ್ಲೆ ಪ್ರಕರಣದಲ್ಲಿ  ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹಾಗೂ ರೌಡಿಶೀಟರ್ ಸೋಮಶೇಖರ್ ಖುಲಾಸೆಗೊಂಡಿದ್ದಾರೆ.

 ಬೆಂಗಳೂರು ಯುಬಿ ಸಿಟಿಯ ಸ್ಕೈ ಬಾರ್ ಹಲ್ಲೆ ಪ್ರಕರಣದಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ನಿರ್ದೋಷಿ ಎಂದು ನ್ಯಾಯಾಲಯ  ತೀರ್ಪು ನೀಡಿದೆ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳನ್ನು ಖುಲಾಸೆ ಮಾಡಲಾಗಿದೆ. ಜನಪ್ರತಿನಿಧಿಗಳ‌ ವಿಶೇಷ ನ್ಯಾಯಾಲಯದ ನ್ಯಾ. ತ್ಯಾಗರಾಜ್ ಎನ್.ಇನವಳ್ಳಿ ತೀರ್ಪು ನೀಡಿದ್ದಾರೆ. 

'ವಿಜಯೇಂದ್ರ ಎಲ್ಲಿ ಮಲಗುತ್ತಾರೆ ಎನ್ನುವುದು ನಮಗೆ ಗೊತ್ತು'

ಏನಿದು ಪ್ರಕರಣ :  2014 ರ ಜುಲೈ 1 ರ ರಾತ್ರಿ ನಡೆದಿದ್ದ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿತ್ತು.  ಹುಟ್ಟುಹಬ್ಬ ಆಚರಣೆ ವೇಳೆ ಪೊಲೀಸರ ಮೇಲೆ‌ ವಿಜಯಾನಂದ  ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.  ಕಾನ್ಸ್‌ಟೇಬಲ್ ಗಳಾದ ಕಿರಣ್ ಹಾಗೂ ಪ್ರಶಾಂತ್ ನಾಯಕ್‌ ಮೇಲೆ‌ ಹಲ್ಲೆ ಆರೋಪವಿತ್ತು.

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ನಂತರ ಸಿಸಿಬಿ ತನಿಖೆ‌ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿತ್ತು... ವಾದ ಪ್ರತಿವಾದ ಆಲಿಸಿ ಇಂದು ತೀರ್ಪು ಪ್ರಕಟಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!