
ಬೆಂಗಳೂರು(ಜು. 31) ಕಾರಿನ ಆಸೆಗೆ ಬಿದ್ದು ವೃದ್ಧರೊಬ್ಬರು ಸಾವಿರಾರು ರೂ. ಕಳೆದುಕೊಂಡಿದ್ದಾರೆ. ಬೆಂಗಳೂರಿನ ಹೊಸಕೆರೆಹಳ್ಳಿ ನಿವಾಸಿ ಶ್ರೀನಾಥ್ (76) ಮೋಸ ಹೋಗಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ Naaptol Online Shopping pvt ltd ಮಾಡಿದ್ದ ಪೋಸ್ಟ್ ನಂಬಿ ಹಣ ಕಳೆದುಕೊಂಡಿದ್ದಾರೆ. ಲಕ್ಕಿ ಡ್ರಾ ಮೂಲಕ XUV 500 ಕಾರ್ ಬಹುಮಾನವಾಗಿ ಬಂದಿದೆ ಎಂಬ ಪೋಸ್ಟ್ ನಂಬಿದ್ದಾರೆ.
ಫೋಸ್ಟ್ ನೋಡಿ ಅದರಲ್ಲಿದ್ದ 9432157469 ನಂಬರ್ ಕರೆ ಮಾಡಿದ್ದ ಶ್ರೀನಾಥ್ ಗೆ ಆ ಕಡೆಯಿಂದ ಮಾತನಾಡಿದ ವ್ಯಕ್ತಿ ನೀವು ಬಹುಮಾನ ಪಡೆದುಕೊಳ್ಳಲು ಟ್ಯಾಕ್ಸ್ ಪೇ ಮಾಡಬೇಕು ಅಂದಿದ್ದ. ಅದನ್ನ ನಂಬಿ ಆನ್ ಲೈನ್ ಬ್ಯಾಂಕ್ ಮೂಲಕ ಹಂತ ಹಂತವಾಗಿ ಹಣ ಜಮಾ ಮಾಡಿದ್ದರು. 59 ಸಾವಿರದ 200 ರೂಪಾಯಿಗಳನ್ನು ಅಪರಿಚಿತನ ಅಕೌಂಟ್ ಗೆ ಜಮಾಮಾಡಿದ್ದಾರೆ.
ಗೂಗಲ್ ಪೇ ಬಳಕೆದಾರರೆ ಎಚ್ಚರ, ನಿಮಗೂ ಇಂಥ ನಕಲಿ ಕರೆ ಬರಬಹುದು!
ಬಳಿಕ ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು, ಮೋಸ ಹೋಗಿರೋದು ಗೊತ್ತಾಗಿದೆ. ಬಹುಮಾನ ಬಂದಿದೆ ಎಂದು ವಂಚಿಸಿದ ಅಪರಿಚಿತನ ವಿರುದ್ಧ FIR ದಾಖಲಿಸಲಾಗಿದೆ.
ಸೌತ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಾಗಿ ಹುಡುಕಾಟ ನಡೆದಿದೆ. ಇತ್ತ ಕಾರು ಬರುತ್ತೆ ಅಂಥ ಕುಟುಂಬಸ್ಥರೆಲ್ಲರಿಗೂ ತಿಳಿಸಿದ್ದ ಶ್ರೀನಾಥ್ ಆರೋಗ್ಯದಲ್ಲೂ ಏರುಪೇರಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ