
ಬೆಂಗಳೂರು(ನ. 30) 42 ಜನರಿಗೆ 8 ಕೋಟಿ ಪಂಗನಾಮ ಹಾಕಿದ ಐನಾತಿ ದಂಪತಿಯು ಕೊನೆಗೂ ಸಿಕ್ಕಿಬಿದ್ದಿದ್ದಾರೆ. ಬಾಡಿಗೆಗೆ ಮನೆ ಪಡೆದು ಇತರರಿಗೆ ಭೋಗ್ಯಕ್ಕೆ ನೀಡಿ ವಂಚನೆ ಮಾಡುತ್ತಿದ್ದ ದಂಪತಿಯ ಕತೆಯೇ ರೋಚಕ
ವಂಚಕ ದಂಪತಿಯನ್ನ ಬಾಣಸವಾಡಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮನೋಹರ್ ನಾನಾವತ್ ಹಾಗೂ ಶೀತಲ್ ನಾನಾವತ್ ಪೊಲೀಸರ ಆರೋಪಿ ದಂಪತಿ.
ಬಾಣಸವಾಡಿ ವ್ಯಾಪ್ತಿಯಲ್ಲಿ ಮನೆಗಳನ್ನ ಬಾಡಿಗೆಗೆ ಪಡೆಯುತ್ತಿದ್ದ ಆರೋಪಿಗಳು ನಂತರ ಅದೇ ಮನೆಗಳನ್ನ ಲಕ್ಷ ಲಕ್ಷ ರೂಪಾಯಿಗೆ ಇತರರಿಗೆ ಭೋಗ್ಯಕ್ಕೆ ನೀಡುತ್ತಿದ್ದರು ಭೋಗ್ಯಕ್ಕೆ ಪಡೆದ ಹಣದಲ್ಲಿ ಮನೆಗಳ ಮೂಲ ಮಾಲೀಕರಿಗೆ ಬಾಡಿಗೆಗೆ ನೀಡುತ್ತಿದ್ದರು. ಉಳಿದ ಹಣವನ್ನ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿ ಕೈಸುಟ್ಟುಕೊಂಡಿದ್ದರು.
ಮ್ಯಾಟ್ರಿಮೋನಿ ಸೈಟ್ ಗೆ ಲಾಗ್ ಇನ್ ಆಗುವ ಮುನ್ನ ಎಚ್ಚರ
ಲಾಕ್ ಡೌನ್ ಸಂದರ್ಭದಲ್ಲಿ ಮನೆ ಮಾಲಿಕರಿಗೆ ಬಾಡಿಗೆ ನೀಡುವುದನ್ನು ಆರೋಪಿಗಳು ನಿಲ್ಲಿಸಿದಾಗ ಭೋಗ್ಯಕ್ಕೆ ಪಡೆದವರ ಬಳಿ ಬಾಡಿಗೆ ಕೇಳಲಾರಂಭಿಸಿದ್ದ ಮನೆ ಮಾಲೀಕರು ಬಾಡಿಗೆ ಕೇಳಿದ್ದಾರೆ. ಆ ಈ ವೇಳೆ ನವರಂಗಿ ದಂಪತಿಯ ಬಟಾಬಯಲಾಗಿದೆ.
ವಂಚನೆಗೆ ಒಳಗಾದವರು ಬಾಣಸವಾಡಿ ಠಾಣೆಗೆ ದೂರು ನೀಡಿದ್ದಾರೆ ಆರೋಪಿಗಳಿಂದ ಬರೋಬ್ಬರಿ 8 ಕೋಟಿಗೂ ಹೆಚ್ಚು ಹಣ ವಂಚನೆಯಾದ ಮಾಹಿತಿ ಇದ್ದು ವಿವರ ಕಲೆಹಾಕಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ