ತಮ್ಮ ವಿರುದ್ಧದ ಸುದ್ದಿಗೆ ತಡೆ ಕೋರಿದ್ದ ಸಚಿವರು..  ಅರ್ಜಿ ವಿಚಾರಣೆ ಏನಾಗಿದೆ?

Published : Mar 31, 2021, 11:04 PM IST
ತಮ್ಮ ವಿರುದ್ಧದ ಸುದ್ದಿಗೆ ತಡೆ ಕೋರಿದ್ದ ಸಚಿವರು..  ಅರ್ಜಿ ವಿಚಾರಣೆ ಏನಾಗಿದೆ?

ಸಾರಾಂಶ

ಸುದ್ದಿ ಪ್ರಸಾರಕ್ಕೆ ನಿರ್ಬಂಧ ಕೋರಿ ಕೋರ್ಟ್ ಮೊರೆ ಹೋಗಿದ್ದ ಸಚಿವರು/ ಅರ್ಜಿ ವಿಚಾರಣೆಯನ್ನು  ಮೇ.  29 ಕ್ಕೆ  ಮುಂದೂಡಿದ ಕೋರ್ಟ್/ ಆರು ಸಚಿವರು ತಮ್ಮ ವಿರುದ್ಧ ಷಡ್ಯಂತ್ರ  ನಡೆದಿರುವ ಗುಮಾನಿ ಇದೆ ಎಂದಿದ್ದರು

ಬೆಂಗಳೂರು (ಮಾ​ 31)  ತಮ್ಮ ವಿರುದ್ಧ ಕೆಲ ಸುದ್ದಿ ಪ್ರಸಾರಕ್ಕೆ ನಿರ್ಬಂಧ ಕೋರಿ ಆರು ಸಚಿವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮೇ.  29 ಕ್ಕೆ ಮುಂದೂಡಲಾಗಿದೆ. 

ಮೆಯೋ ಹಾಲ್ ಕೋರ್ಟ್ ಈ ಆದೇಶ ನೀಡಿದೆ. ತಮ್ಮ ವಿರುದ್ಧ ವರದಿ ಪ್ರಸಾರ ಮಾಡದಂತೆ  ಸಚಿವರಾದ ಶಿವರಾಮ್  ಹೆಬ್ಬಾರ್, ಬಿಸಿ ಪಾಟೀಲ್, ಎಸ್‌ಟಿ ಸೋಮಶೇಖರ್, ಕೆ. ಸುಧಾಕರ್, ನಾರಾಯಣ ಗೌಡ, ಬೈರತಿ ಬಸವರಾಜ್   ನ್ಯಾಯಾಲಯದ ಮೊರೆ ಹೋಗಿದ್ದರು.

ನಮ್ಮ ವಿರುದ್ಧ ರಾಜಕಾರಣದ ಷಡ್ಯಂತ್ರ ನಡೆಯುತ್ತಿರುವ ಗುಮಾನಿ ಇದ್ದು ವಿರುದ್ಧದ ಸುದ್ದಿ ಪ್ರಸಾರ ಮಾಡಬಾರದು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಷಡ್ಯಂತ್ರ ರೂಪಿಸಿರುವ ಸಾಧ್ಯತೆ ಇದೆ ಎಂದಿದ್ದರು.

ನಮ್ಮ ಜನಪ್ರಿಯತೆ ಸಹಿಸದೆ  ತೇಜೋವಧೆ ಮಾಡಿಸುವ ಹುನ್ನಾರ ಇದೆ.  ನ್ಯಾಯಾಲಯದ ಮೇಲೆ ವಿಶ್ವಾಸ ಇದ್ದು ಮೊರೆ ಹೋಗಿದ್ದೇವೆ ಎಂದಿದ್ದರು. ವಿಧಾನಸಭೆಯಲ್ಲಿಯೂ ಈ ವಿಚಾರ ಚರ್ಚೆ ಆಗಿತ್ತು. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!