ಬೆಂಗಳೂರು ಡ್ರಗ್ಸ್ ಕೇಸಿಗೆ ಲಂಕಾ ಸ್ಫೋಟದ ನಂಟು..?

Kannadaprabha News   | Asianet News
Published : Sep 18, 2020, 07:15 AM IST
ಬೆಂಗಳೂರು ಡ್ರಗ್ಸ್ ಕೇಸಿಗೆ ಲಂಕಾ ಸ್ಫೋಟದ ನಂಟು..?

ಸಾರಾಂಶ

ಬೆಂಗಳೂರು ಡ್ರಗ್ಸ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಡ್ರಗ್ಸ್ ಜಾಲ ಶ್ರೀಲಂಕಾದವರೆಗೂ ತನ್ನ ಕಬಂಧ ಬಾಹುಗಳನ್ನು ಚಾಚಿರುವ ಸುಳಿವೊಂದು ತನಿಖಾ ಸಂಸ್ಥೆಗಳಿಗೆ ಸಿಕ್ಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಕೊಚ್ಚಿ: ಕನ್ನಡ ಚಿತ್ರ​ರಂಗ​ದ​ಲ್ಲಿನ ಡ್ರಗ್ಸ್‌ ಪ್ರಕ​ರ​ಣಕ್ಕೆ ಮತ್ತೊಂದು ‘ಸ್ಫೋಟ’ಕ ತಿರುವು ಸಿಕ್ಕಿದೆ. ಡ್ರಗ್ಸ್‌ ಜಾಲ ಸ್ಯಾಂಡಲ್‌ವುಡ್‌ನಿಂದ ಕೇರಳದವರೆಗೆ ಹಬ್ಬಿದ್ದು ಬೆಳಕಿಗೆ ಬಂದ ಬೆನ್ನಲ್ಲೇ, ಅದು ಅಲ್ಲಿಂದಲೂ ದಾಟಿ ಶ್ರೀಲಂಕಾದವರೆಗೂ ತನ್ನ ಕಬಂಧ ಬಾಹುಗಳನ್ನು ಚಾಚಿರುವ ಸುಳಿವೊಂದು ತನಿಖಾ ಸಂಸ್ಥೆಗಳಿಗೆ ಸಿಕ್ಕಿದೆ. ಹೀಗಾಗಿ 267 ಜನರ ಬಲಿ ಪಡೆದ 2019ರ ಶ್ರೀಲಂಕಾ ಸರಣಿ ಸ್ಫೋಟ ಪ್ರಕರಣದಲ್ಲಿ ಭಾರತೀಯರ ನಂಟಿನ ಬಗ್ಗೆ ತನಿಖೆ ನಡೆಸಿದ್ದ ರಾಷ್ಟ್ರೀಯ ತನಿಖಾ ದಳ (ಎ​ನ್‌​ಐ​ಎ)ದ ತಂಡವು, ಇದೀಗ ಬೆಂಗಳೂರು ಡ್ರಗ್ಸ್‌ ಪ್ರಕರಣದ ಆರೋಪಿಗಳನ್ನೂ ವಿಚಾರಣೆಗೆ ಒಳಪಡಿಸಲು ನಿರ್ಧರಿಸಿದೆ ಎನ್ನಲಾಗಿದೆ.

ಬೆಂಗಳೂರು ಡ್ರಗ್ಸ್‌ ಪ್ರಕರಣ ಸಂಬಂಧ ಇತ್ತೀಚೆಗೆ ಬಂಧಿತ ಆರೋ​ಪಿಯೊಬ್ಬ ಪದೇ ಪದೇ ಶ್ರೀಲಂಕಾಗೆ ಭೇಟಿ ನೀಡುತ್ತಿದ್ದ ವಿವ​ರ​ವನ್ನು ಎನ್‌​ಐಎ ಸಂಗ್ರ​ಹಿ​ಸಿದೆ. ಅಲ್ಲದೆ, ಚಿತ್ರ​ರಂಗ​ದ​ವರೂ ಲಂಕಾದ ಕ್ಯಾಸಿನೋಗಳಿಗೆ ಹಲವು ಬಾರಿ ಭೇಟಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಡ್ರಗ್ಸ್‌ ಕೇಸಲ್ಲಿ ಬಂಧಿತರನ್ನು ವಿಚಾರಣೆಗೆ ಒಳಪಡಿಸಲು ಎನ್‌ಐಎ ತಂಡ ನಿರ್ಧರಿಸಿದೆ ಎಂದು ಕೇರಳದ ಪತ್ರಿಕೆಯೊಂದು ವರದಿ ಮಾಡಿದೆ.

ಏನೀ ಸುಳಿವು?:

ಬೆಂಗಳೂರಿನಲ್ಲಿ ಬಂಧಿತ ಡ್ರಗ್ಸ್‌ ಪ್ರಕರಣದ ಆರೋಪಿಯೊಬ್ಬನ ಮೊಬೈಲ್‌ ಸೇರಿದಂತೆ ಕೆಲ ಉಪಕರಣಗಳನ್ನು ಜಾಲಾಡಿದಾಗ, ಅದರಲ್ಲಿ ಶ್ರೀಲಂಕಾ ಸ್ಫೋಟಕ್ಕೆ ಸಂಬಂಧಿಸಿದ್ದು ಎನ್ನಲಾದ ಕೆಲ ಸಂದೇಹಾಸ್ಪದ ಸಂದೇಶಗಳು ಲಭ್ಯವಾಗಿವೆ. ಇದಕ್ಕೆ ಪೂರಕವೆಂಬಂತೆ, ಶ್ರೀಲಂಕಾ ಸ್ಫೋಟದ ರೂವಾರಿ ಎನ್ನ​ಲಾದ ಜಹ್ರಾನ್‌ ಹಷೀಂ ಎಂಬಾತ ಬೆಂಗ​ಳೂ​ರಿಗೆ 3 ವರ್ಷದ ಹಿಂದೆ ಭೇಟಿ ನೀಡಿದ್ದ ಎಂಬ ಮಾಹಿತಿ ಗುಪ್ತ​ಚರ ದಳಕ್ಕೆ ಲಭಿ​ಸಿದೆ. ಈ ಕಾರ​ಣಕ್ಕೇ ಡ್ರಗ್ಸ್‌ ಕೇಸ್‌ ಆರೋ​ಪಿಗೂ ಹಷೀಂಗೂ ನಂಟು ಇರ​ಬ​ಹುದು ಎಂಬ ಅನು​ಮಾನ ಎನ್‌​ಐ​ಎ​ನದ್ದು.

ಡ್ರಗ್ಸ್ ಪ್ರಕರಣ; ಸ್ಫೋಟಕ 'ಮತ್ತಿನ' ನ್ಯೂಸ್ ಕೊಟ್ಟ ಕುಮಾರಸ್ವಾಮಿ

ಜಹ್ರಾನ್‌ ಹಷೀಂನನ್ನು ಸೋಷಿ​ಯಲ್‌ ಮೀಡಿ​ಯಾ​ಗ​ಳಲ್ಲಿ ಫಾಲೋ ಮಾಡು​ತ್ತಿದ್ದ ಯುವ​ಕ​ರನ್ನು ಈಗಾ​ಗಲೇ ಕೇರ​ಳ​ದಲ್ಲಿ ಎನ್‌​ಐಎ ವಿಚಾ​ರ​ಣೆಗೆ ಒಳ​ಪ​ಡಿ​ಸಿ​ದೆ. ಭಾರ​ತಕ್ಕೆ ಶ್ರೀಲಂಕಾ​ದಿಂದ ಭಾರೀ ಪ್ರಮಾ​ಣದ ಮಾದಕ ವಸ್ತು​ಗಳ ಕಳ್ಳ​ಸಾ​ಗಣೆ ನಡೆ​ಯು​ತ್ತಿ​ತ್ತು ಹಾಗೂ ಕೇರ​ಳದ ಯುವ​ಕರು ಶ್ರೀಲಂಕಾ ಕ್ಯಾಸಿ​ನೋ​ಗ​ಳಿಗೆ ಭೇಟಿ ನೀಡಿ ರೇವ್‌ ಮಾರ್ಟಿ ಮಾಡು​ತ್ತಿ​ದ್ದ​ರು ಎಂದು ಈ ಹಿಂದೆಯೇ ಗುಪ್ತ​ಚರ ದಳ ಪತ್ತೆ ಮಾಡಿ​ತ್ತು ಎಂದೂ ಮಾಧ್ಯಮ ವರ​ದಿ ಹೇಳಿ​ದೆ.

ಇದ​ಲ್ಲದೆ, ಇದೇ ಡ್ರಗ್ಸ್‌ ಕೇಸ್‌ ಆರೋ​ಪಿಗೂ, ಕೇರ​ಳದ ರಾಜ​ತಾಂತ್ರಿಕ ಗೋಲ್ಡ್‌ ಸ್ಮಗ್ಲಿಂಗ್‌ ಪ್ರಕ​ರ​ಣದ ಆರೋ​ಪಿಗೂ ನಂಟು ಇರ​ಬ​ಹುದು ಎಂದು ಎನ್‌​ಐಎ ಶಂಕಿ​ಸಿ​ದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!