
ಥಳುಕು ಬಳುಕು, ಬಣ್ಣಬಣ್ಣದ ಮಾತು, ಐಷಾರಾಮಿ ಕಾರು, ಬೈಕು, ಹೀರೋಗಳ ಸ್ಟೈಲ್ನಲ್ಲಿ ಹೇರ್ಸ್ಟೈಲ್, ದಿನವೂ ಪಿಕ್ ಅಪ್ ಡ್ರಾಪ್, ಶ್ರೀಮಂತಿಕೆ, ಇಂಥ ಕನಸನ್ನು ಕಾಣುವುದು ಎಲ್ಲಿಯವರೆಗೆ ಹಿಂದೂ ಯುವತಿಯರು ಬಿಡುವುದಿಲ್ಲವೋ ಅಲ್ಲಿಯವರೆಗೆ ಅಂಥವರೇ ಬೆತ್ತಲಾಗುವುದು ಗ್ಯಾರೆಂಟಿ ಎನ್ನುವುದು ಪದೇ ಪದೇ ಸಾಬೀತಾಗುತ್ತಿದ್ದರೂ ನನ್ನವ ಎಲ್ಲರಂಥವನಲ್ಲ ಎಂದರೆ ನಿಮ್ಮ ವಿಡಿಯೋಗಳು ಪೋ*ರ್ನ್ ವೆಬ್ಸೈಟ್ನಲ್ಲಿ ಅಪ್ಲೋಡ್ ಆಗಿಯೋ, ಇಲ್ಲವೇ ಮಕ್ಕಳನ್ನು ಹೆರುವ ಮಷಿನ್ ಆಗಿಯೋ, ಬೀದಿಗೆ ಬರುವುದೋ ಕೊನೆಗೆ ಆ*ತ್ಮಹತ್ಯೆ ಒಂದೇ ದಾರಿ ಎಂದುಕೊಳ್ಳುವುದೋ ತಪ್ಪಲ್ಲ ಎಂದು ಪೊಲೀಸರು, ಹಿಂದೂ ಸಂಘಟನೆಗಳು ದಿನನಿತ್ಯವೂ ಎಚ್ಚರಿಕೆಯನ್ನು ಕೊಡುತ್ತಲೇ ಇದ್ದಾರೆ.
ಅದೆಷ್ಟೋ ಹಿಂದೂ ಯುವತಿಯರು ನರಕದ ಬಾಯಿಗೆ ಹೋಗಿ ಹೇಳಿಕೊಳ್ಳಲಾಗದ ಸಂಕಷ್ಟ ಅನುಭವಿಸುತ್ತ ಕೊನೆಗೆ ಸಾವಿನ ಹಾದಿ ಹಿಡಿದಿರುವ ಬಗ್ಗೆ ಪೊಲೀಸರು ಪತ್ರಿಕಾಗೋಷ್ಠಿ ಮಾಡಿ ಎಚ್ಚರ ಕೊಡುತ್ತಲೇ ಇದ್ದರೂ, ನಾನು ಎಜುಕೇಟೆಡ್, ನನಗೆ ಇವೆಲ್ಲಾ ಬುದ್ಧಿಮಾತು ನಿಮ್ಮಿಂದ ಕಲಿಯಬೇಕಿಲ್ಲ ಎನ್ನುವ ಯುವತಿಯರ ಸಂಖ್ಯೆ ಹೆಚ್ಚುತ್ತಲೇ ಇದೆ.
ಇದಾಗಲೇ ಹುಬ್ಬಳ್ಳಿಯ ಲವ್ ಜಿಹಾದ್ ಕೇಂದ್ರವಾಗಿದೆ. ಹುಬ್ಬಳ್ಳಿಯ ಜಿಮ್ ಓನರ್ ಸಮೀರ್ ಮುಲ್ಲಾ ಸೇರಿದಂತೆ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಮೊಬೈಲ್ಗಳಲ್ಲಿ ಹಿಂದೂ ಯುವತಿಯರ ಅಶ್ಲೀಲ ಫೋಟೋಗಳು ಪತ್ತೆಯಾಗಿವೆ. ಕೆಲವೊಂದನ್ನು ಖುದ್ದು ಯುವತಿಯರೇ ಖುಷಿಯಿಂದ ತೆಗೆದುಕೊಂಡರೆ, ಇನ್ನು ಕೆಲವು ಮಾದಕ ದ್ರವ್ಯ ನೀಡಿಯೋ ಅಥವಾ ಇನ್ನೇನೋ ಕೊಟ್ಟು ಯುವತಿಯರನ್ನು ಬೆತ್ತಲು ಮಾಡಿ, ರೇ*ಪ್ ಮಾಡಿರುವ ವಿಡಿಯೋ ಅವು. ಇಷ್ಟಾದರೂ ಯುವತಿಯರು ಥಳಕು ಬಳುಕಿನದ್ದಕ್ಕೆ ಮೊರೆ ಹೋಗುತ್ತಿರುವುದು ಹುಬ್ಬಳ್ಳಿಯಿಂದಲೇ ವರದಿಯಾಗಿದೆ.
ಕಾಲೇಜು ಯುವತಿಯೊಬ್ಬಳ ಬ್ರೈನ್ವಾಷ್ ಮಾಡಿ ಆಕೆಯನ್ನುತನ್ನ ಮನೆಗೆ ಕರೆದುಕೊಂಡು ಹೋಗಿದ್ದ ಸಾಜಿದ್ ಉಣಕಲ್ ಎಂಬಾತ ಹಿಂದೂ ಸಂಘಟನೆ ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದಿದ್ದಾನೆ. ಹುಬ್ಬಳ್ಳಿಯ ಸಾಗರ್ ಕಾಲೋನಿಯಲ್ಲಿರುವ ಮನೆಗೆ ಕರೆದುಕೊಂಡು ಹೋಗಿರುವ ಈತ ಆಕೆಗೆ ಮಾದಕ ದ್ರವ್ಯ ನೀಡಿ ಬೆತ್ತಲುಮಾಡಿದ್ದ ಎನ್ನುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬಜರಂಗದಳ, ಹಿಂದೂ ಸಂಘಟನೆ ಕಾರ್ಯಕರ್ತರು ಯುವಕನ ಮನೆಗೆ ತೆರಳಿ ಯುವಕನಿಗೆ ಥಳಿಸಿ ಯುವತಿಯನ್ನು ಮನೆಗೆ ಕಳುಹಿಸಿದ್ದಾರೆ. ಈ ಸಂಬಂಧ ಅಶೋಕ ನಗರ ಠಾಣೆ ಪೊಲೀಸರು ಸಾಜಿದ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ