ಪ್ರಿಯಕರನ ಮೋಜುಮಸ್ತಿಗೆ ಚಿಕ್ಕಪ್ಪನ ಮನೆಯಲ್ಲಿ ಲಕ್ಷಾಂತರ ರೂ. ಬೆಲೆಯ ಚಿನ್ನಾಭರಣ ಕದ್ದ ವಿದ್ಯಾರ್ಥಿನಿ!

Published : Jul 30, 2025, 07:02 AM ISTUpdated : Jul 30, 2025, 07:43 AM IST
Bengaluru arrested

ಸಾರಾಂಶ

ಬೆಂಗಳೂರಿನಲ್ಲಿ ಬಿಕಾಂ ವಿದ್ಯಾರ್ಥಿನಿ ತನ್ನ ಚಿಕ್ಕಪ್ಪನ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪ್ರಿಯಕರನಿಗೆ ನೀಡಿದ್ದಾಳೆ. ಈ ಕೃತ್ಯದಲ್ಲಿ ಆಕೆಯ ಪ್ರಿಯಕರ ಮತ್ತು ಇಬ್ಬರು ಸ್ನೇಹಿತರು ಭಾಗಿಯಾಗಿದ್ದಾರೆ.

ಬೆಂಗಳೂರು (ಜುಲೈ.30) ತನ್ನ ಪ್ರಿಯಕರನ ಮೋಜಿನ ಜೀವನಕ್ಕೆ ಚಿಕ್ಕಪ್ಪನ ಮನೆಯಲ್ಲಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಕದ್ದು ಕೊಟ್ಟಿದ್ದ ಬಿಕಾಂ ವಿದ್ಯಾರ್ಥಿ ಹಾಗೂ ಆಕೆಯ ಮೂವರು ಸ್ನೇಹಿತರು ಕೊತ್ತನೂರು ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬೈರತಿ ನಿವಾಸಿಗಳಾದ ಸಚಿತಾ, ಆಕೆಯ ಪ್ರಿಯಕರ ಯಶವಂತ್, ಸ್ನೇಹಿತರಾದ ತನುಷ್, ಎಲ್‌ಎಲ್‌ಬಿ ವಿದ್ಯಾರ್ಥಿ ರಾಮ್‌ ಪ್ರಕಾಶ್ ಬಂಧಿತರಾಗಿದ್ದು, ಆರೋಪಿಗಳಿಂದ 65 ಲಕ್ಷ ರು. ಮೌಲ್ಯದ ಚಿನ್ನಾಭರಣ ಹಾಗೂ 10 ಲಕ್ಷ ರು. ನಗದು ಜಪ್ತಿಯಾಗಿದೆ. ಕೆಲ ದಿನಗಳ ಹಿಂದೆ ತಮ್ಮ ಮನೆಯ ಲಾಕರ್‌ನಲ್ಲಿಟ್ಟಿದ್ದ ಒಂದು ಕೆಜಿ ಆಭರಣ ಕಳ್ಳತನವಾಗಿದೆ ಎಂದು ಕೊತ್ತನೂರು ಪೊಲೀಸರಿಗೆ ಸಚಿತಾ ಚಿಕ್ಕಪ್ಪ ಬಿ.ಎನ್‌.ಶ್ರೀನಿವಾಸ್ ದೂರು ಕೊಟ್ಟಿದ್ದರು. ಅದರನ್ವಯ ತನಿಖೆಗಿಳಿದ ಪೊಲೀಸರು, ಶಂಕೆ ಮೇರೆಗೆ ಸಚಿತಾಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಕೊನೆಗೆ ಚಿನ್ನದ ಕಳ್ಳತನ ಬಯಲಾಗಿದೆ.

ವಿದ್ಯಾರ್ಥಿಗಳ ಮೋಜಿನ ಜೀವನ

ಖಾಸಗಿ ಕಾಲೇಜಿನಲ್ಲಿ ಸಚಿತಾ, ತನುಷ್‌ ಹಾಗೂ ಯಶವಂತ್ ಪದವಿ ವಿದ್ಯಾರ್ಥಿಗಳಾಗಿದ್ದರೆ, ರಾಮ್‌ ಪ್ರಸಾದ್ ಎಲ್‌ಎಲ್‌ಬಿ ಓದುತ್ತಿದ್ದ. ಮೋಜಿನ ಜೀವನಕ್ಕೆ ವ್ಯಾಮೋಹಗೊಂಡ ಈ ವಿದ್ಯಾರ್ಥಿಗಳು ತಮ್ಮ ಶೋಕಿಗೆ ಹಣಕ್ಕೆ ಪರದಾಡುತ್ತಿದ್ದರು. ಆಗ ಸಚಿತಾಳ ಚಿಕ್ಕಪ್ಪ ಆರ್ಥಿಕ ಸ್ಥಿತಿಗತಿ ಬಗ್ಗೆ ತಿಳಿದಿದ್ದ ಆಕೆಯ ಪ್ರಿಯಕರ ಯಶವಂತ್‌, ಚಿಕ್ಕಪ್ಪನ ಮನೆಯಲ್ಲಿ ಚಿನ್ನ ಹಾಗೂ ಹಣ ಕಳ್ಳತನಕ್ಕೆ ಪ್ರಚೋದನೆ ನೀಡಿದ್ದ. ಕೊನೆಗೆ ಪ್ರಿಯಕರನ ಮಾತಿಗೆ ಮರುಳಾಗಿ ಆಕೆ ಕಳ್ಳತನಕ್ಕಿಳಿದಿದ್ದಳು ಎನ್ನಲಾಗಿದೆ.

ಅಂತೆಯೇ ಆಕೆ ಆರು ತಿಂಗಳ ಅವಧಿಯಲ್ಲಿ ಸ್ಪಲ್ಪ ಸ್ಪಲ್ಪವೇ ಚಿನ್ನ ಕದ್ದು ಪ್ರಿಯಕರನಿಗೆ ಕೊಟ್ಟಿದ್ದಳು. ಈ ಚಿನ್ನವನ್ನು ಕರಗಿಸಿ ಸ್ನೇಹಿತರ ಜತೆ ಆತ ಮಜಾ ಮಾಡಿದ್ದ. ಕೊನೆಗೆ ಮನೆಯ ಲಾಕರ್‌ನಲ್ಲಿ ಚಿನ್ನ ಕಳ್ಳತನ ಬಗ್ಗೆ ಕೊತ್ತನೂರು ಠಾಣೆಗೆ ಅವರ ಚಿಕ್ಕಪ್ಪ ದೂರು ಕೊಟ್ಟಿದ್ದರು. ಆ ದೂರಿನಲ್ಲಿ ತಮ್ಮ ಮನೆಯ ಇಬ್ಬರು ಕೆಲಸಗಾರರ ಮೇಲೆ ಅವರು ಶಂಕೆ ವ್ಯಕ್ತಪಡಿಸಿದ್ದರು.

ಈ ಅನುಮಾನ ಹಿನ್ನೆಲೆಯಲ್ಲಿ ಶ್ರೀನಿವಾಸ್‌ ಮನೆಯ ಕೆಲಸಗಾರರನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ದೋಷಮುಕ್ತರಾದರು. ಆಗ ದೂರುದಾರರ ಮನೆಗೆ ಬಂದು ಹೋಗುವವರ ಕುರಿತು ಪೊಲೀಸರು ಮಾಹಿತಿ ಕಲೆ ಹಾಕಿದರು. ಈ ವೇಳೆ ಸಚಿತಾಳ ನಡವಳಿಕೆ ಮೇಲೆ ಪೊಲೀಸರಿಗೆ ಗುಮಾನಿ ಬಂದಿದೆ. ಕೂಡಲೇ ಆಕೆಯನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಮೂಲಗಳು ಹೇಳಿವೆ.

ಗೋವಾದಲ್ಲಿ ಮೋಜು ಮಸ್ತಿ

ಕಳ್ಳತನದ ಹಣದಲ್ಲಿ ಗೋವಾಕ್ಕೆ ಹೋಗಿ ಸಚಿತಾಳ ಸ್ನೇಹಿತರು ಮೋಜು ಮಸ್ತಿ ಮಾಡಿದ್ದರು. ಚಿನ್ನದ ವಿಲೇವಾರಿಯಲ್ಲಿ ಯಶವಂತ್‌ಗೆ ಆತನ ಸ್ನೇಹಿತರ ನೆರವು ಸಿಕ್ಕಿತು ಎಂದು ಪೊಲೀಸರು ತಿಳಿಸಿದ್ದಾರೆ.

ದತ್ತು ಮಗಳ ತಂದ ಸಂಕಟ: ದೂರುದಾರ ಶ್ರೀನಿವಾಸ್ ಅವರ ಹಿರಿಯ ಸೋದರನಿಗೆ ಸಂತಾನ ಇರಲಿಲ್ಲ. ಈ ಕಾರಣಕ್ಕೆ ಅನಾಥಾಶ್ರಮದಲ್ಲಿ ಸಚಿತಾಳನ್ನು ಅವರು ದತ್ತು ಪಡೆದಿದ್ದರು. ಈಗ ಕಳ್ಳತನ ಪ್ರಕರಣದಲ್ಲಿ ಆಕೆ ಜೈಲು ಸೇರಿದ್ದು ಆಕೆಯ ಪೋಷಕರಿಗೆ ಹೆಚ್ಚು ಸಂಕಟ ತಂದಿದೆ ಎಂದು ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ