ಸಿನಿಮೀಯ ರೀತಿಯಲ್ಲಿ ಮಚ್ಚು ಹಿಡಿದು ಬ್ಯಾಂಕಿನೊಳಗೆ ನುಗ್ಗಿದ ಯುವಕ

Published : Dec 02, 2019, 08:28 PM ISTUpdated : Dec 02, 2019, 08:31 PM IST
ಸಿನಿಮೀಯ ರೀತಿಯಲ್ಲಿ ಮಚ್ಚು ಹಿಡಿದು  ಬ್ಯಾಂಕಿನೊಳಗೆ ನುಗ್ಗಿದ ಯುವಕ

ಸಾರಾಂಶ

ಸಿನಿಮಾಗಳಲ್ಲಿ ಕಳ್ಳರು ಕೈಯಲ್ಲಿ ಮಚ್ಚು ಹಿಡಿದು ಬ್ಯಾಂಕ್ ಲೂಟಿ ಮಾಡುವುದನ್ನು ನೋಡಿದ್ದೇವೆ.ಅದೇ ಸಿನಿಮಾ ಸ್ಟೈಲ್ ನಲ್ಲಿ  ಇಲ್ಲೊಬ್ಬ ಯುವಕ ಮಚ್ಚು ಹಿಡಿದು ಬ್ಯಾಂಕಿನೊಳಗೆ ಎಂಟ್ರಿಕೊಟ್ಟಿದ್ದಾನೆ.. ಯಾರು? ಎಲ್ಲಿ?ಯಾಕೆ? ಮಾಹಿತಿ ಈ ಕೆಳಗಿನಂತಿದೆ.

ಬೆಂಗಳೂರು/ದೊಡ್ಡಬಳ್ಳಾಪುರ  [ಡಿ.2]: ಸಿನಿಮೀಯ ರೀತಿಯಲ್ಲಿ ರೀತಿಯಲ್ಲಿ ಯುವಕನೊಬ್ಬ ಹಾಡು ಹಗಲೇ ಮಚ್ಚು ಹಿಡಿದು ಬ್ಯಾಂಕಿನೊಳಗೆ ನುಗ್ಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತೂಬಗೆರೆಯಲ್ಲಿ ಘಟ‌ನೆ ನಡೆದಿದೆ.

ಇಂದು [ಸೋಮವಾರ] ಬೆಳಗ್ಗೆ 11ರ ಸುಮಾರಿಗೆ ದುರ್ಗೇನಹಳ್ಳಿ ಕುಮಾರ್ ಎನ್ನುವ ಯುವಕ ಮಚ್ಚು ಹಿಡಿದು ತೂಬಗೆರೆಯಲ್ಲಿರುವ ಕಾರ್ಪೊರೇಷನ್ ಬ್ಯಾಂಕಿನೊಳಗೆ ನುಗ್ಗಿದ್ದಾನೆ.

ದಾಂಪತ್ಯ ಜೀವನಕ್ಕೆ ಕ್ರಿಕೆಟಿಗ ಮನೀಶ್, ನಿತ್ಯನ ಲೀಲೆಗೆ ಡೆಲ್ಲಿ ಸ್ಕೂಲ್ ಫಿನೀಶ್; ಡಿ.2ರ ಟಾಪ್ 10 ಸುದ್ದಿ!

ಬ್ಯಾಂಕ್ ಗೆ ನುಗ್ಗಿ ಮಚ್ಚಿನಿಂದ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಇದರಿಂದ ಕೆಲ ಕಾಲ ಯುವಕನ ಕೃತ್ಯಕ್ಕೆ ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕರು ಬೆಚ್ಚಿಬಿದ್ದಿದ್ದಾರೆ. ಈ ದೃಶ್ಯ ಬ್ಯಾಂಕಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ದುರ್ಗೇನಹಳ್ಳಿ ಕುಮಾರ್ ನನ್ನು ಸ್ಥಳೀಯರು ಹಿಡಿದು ಥಳಿಸಿ, ಬಳಿಕ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡರು.

ಅಗತ್ಯ ದಾಖಲಾತಿಗಳಿಲ್ಲದೇ  ಹಣ ಕೊಡಲ್ಲ ಎಂದು ಬ್ಯಾಂಕ್ ಸಿಬ್ಬಂದಿ ಹೇಳಿ ಕಳುಹಿಸಿದ್ದಾರೆ. ಇದರಿಂದ ಕುಪಿತಗೊಂಡು ಮಚ್ಚು ತಂದು ಹಲ್ಲೆಗೆ ಮುಂದಾಗಿದ್ದಾನೆಂದು ಸ್ಥಳೀಯರ ಅಭಿಪ್ರಾಯವಾಗಿದೆ.

ಸದ್ಯ ಕುಮಾರ್ ಮೇಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಚ್ಚು ಹಿಡಿದು ಹಲ್ಲೆಗೆ ಮುಂದಾಗಿದ್ದು ಯಾಕೆ ಎಂಬುದರ ಬಗ್ಗೆ ವಿಚಾರಣೆ ನಡೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!