ಎಣ್ಣೆ ಕುಡಿಯೋಕೆ ಹಣ ಕೊಟ್ಟಿಲ್ಲ ಅಂತ ಬ್ಲೇಡ್‌ನಿಂದ ಅಮಾಯಕನ ಕುತ್ತಿಗೆ ಕುಯ್ದ ಕುಡುಕ!

Published : Aug 30, 2024, 12:28 PM IST
ಎಣ್ಣೆ ಕುಡಿಯೋಕೆ ಹಣ ಕೊಟ್ಟಿಲ್ಲ ಅಂತ ಬ್ಲೇಡ್‌ನಿಂದ ಅಮಾಯಕನ ಕುತ್ತಿಗೆ ಕುಯ್ದ ಕುಡುಕ!

ಸಾರಾಂಶ

ಎಣ್ಣೆ ಕುಡಿಯೋಕೆ ಹಣ ನೀಡಲಿಲ್ಲವೆಂದು ಕುಡುಕನೋರ್ವ ವ್ಯಕ್ತಿಯ ಕುತ್ತಿಗೆ ಕುಯ್ದ ಘಟನೆ ತುಮಕೂರು ನಗರದ ಸದಾಶಿವನಗರದ 4 ನೇ ಮುಖ್ಯರಸ್ತೆಯಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ತುಮಕೂರು (ಆ.30): ಎಣ್ಣೆ ಕುಡಿಯೋಕೆ ಹಣ ನೀಡಲಿಲ್ಲವೆಂದು ಕುಡುಕನೋರ್ವ ವ್ಯಕ್ತಿಯ ಕುತ್ತಿಗೆ ಕುಯ್ದ ಘಟನೆ ತುಮಕೂರು ನಗರದ ಸದಾಶಿವನಗರದ 4 ನೇ ಮುಖ್ಯರಸ್ತೆಯಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಹಣಮಂತ ಗಾಯಗೊಂಡ ವ್ಯಕ್ತಿ.  ಚಿತ್ರದುರ್ಗ ಮೂಲದ ಹನುಮಂತ ಎಂಬಾತ ತನ್ನ ಪತ್ನಿ ಮಕ್ಕಳೊಂದಿಗೆ, ದಿನಸಿ ಖರೀದಿಸಲು ಅಂಗಡಿಗೆ ಬಂದಿದ್ದ. ಈ ವೇಳೆ ರಸ್ತೆ ಬದಿ ನಿಂತಿದ್ದ ಪುಂಡನೊಬ್ಬ ಹನುಮಂತನ ಬಳಿ ಬಂದು ಕುಡಿಯಲು ಹಣ ಕೊಡುವಂತೆ ಕೇಳಿದ್ದಾನೆ. ಹಣ ಕೊಡಲು ಹಣಮಂತ ನಿರಾಕರಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದು ಏಕಾಏಕಿ ಬ್ಲೇಡ್‌ನಿಂದ ಹಣಮಂತನ ಕುತ್ತಿಗೆ ಕುಯ್ದು ಪರಾರಿಯಾಗಿ ಯತ್ನಿಸಿದ ದುರುಳ. ಸಾರ್ವಜನಿಕರ ಸಹಾಯದಿಂದ ಕುಡುಕನನ್ನು ಹಿಡಿದು ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಹಣಮಂತನ ಪತ್ನಿ. ಸಾರ್ವಜನಿಕರು ಸಹ ಪುಂಡನಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

 

ಸದ್ಯ ಗಾಯಾಳು ಹಣಮಂತಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಘಟನೆ ಸಂಬಂಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಜಿಟಲ್ ಅರೆಸ್ಟ್‌ಗೆ ಹೆದರಿ ಕೋಟಿಗಟ್ಟಲೆ ಬೆಲೆಬಾಳುವ ಸೈಟ್, ಮನೆ ಮಾರಿದ ಬೆಂಗಳೂರು ಮಹಿಳಾ ಟೆಕ್ಕಿ!
ಮೂಡಿಗೆರೆ: ಮನೆ ಭೋಗ್ಯ ವಿಚಾರಕ್ಕೆ ಜಗಳ, ಮಹಿಳೆಯ ಜಡೆ ಹಿಡಿದು ಎಳೆದು ಬಿಸಾಡಿ ಹಲ್ಲೆ.!