
ವರಂಗಲ್(ಮೇ.26): ಇತ್ತೀಚೆಗಷ್ಟೇ ಇಲ್ಲಿನ ಬಾವಿಯೊಂದರಲ್ಲಿ ಪತ್ತೆಯಾಗಿದ್ದ 9 ಶವ ಪತ್ತೆ ಪ್ರಕರಣವನ್ನು ತೆಲಂಗಾಣ ಪೊಲೀಸರು ಭೇದಿಸಿದ್ದಾರೆ. ಅಕ್ರಮ ಸಂಬಂಧವೇ ಹತ್ಯೆಗೆ ಕಾರಣ ಎಂಬುದು ಬೆಳಕಿಗೆ ಬಂದಿದ್ದು, ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.
ಬಂಗಾಳ ಮೂಲದ ಮಕ್ಸೂದ್ ಕುಟುಂಬ ವರಂಗಲ್ನಲ್ಲಿ ನೆಲೆಸಿತ್ತು. ಕುಟುಂಬದ 6 ಜನರ ಪೈಕಿ, ಪತಿ ಬಿಟ್ಟು ಬಂದಿದ್ದ ಮಹಿಳೆಯೊಬ್ಬಳಿದ್ದಳು. ಆಕೆ ಜೊತೆಗೆ ಆರೋಪಿ ಸಂಜಯ್ ನಂಟು ಬೆಳೆಸಿದ್ದ. ಆದರೆ ಇತ್ತೀಚೆಗೆ ಬಿಹಾರ ಮೂಲದ ಮೂವರು ವ್ಯಕ್ತಿಗಳು ಮಕ್ಸೂದ್ ಕುಟುಂಬಕ್ಕೆ ಆಪ್ತರಾದ ಬಳಿಕ, ಅವರು ಆರೋಪಿ ಸಂಜಯ್ಕುಮಾರ್ನನ್ನು ದೂರ ಮಾಡಿದ್ದ.
2 ದಿನದಲ್ಲಿ ವಾರಂಗಲ್ ಕೊಳವೆ ಬಾವಿಯಲ್ಲಿ 9 ಮೃತದೇಹಗಳ ಪತ್ತೆ!
ಇದರಿಂದ ಆಕ್ರೋಶಗೊಂಡ ಸಂಜಯ್, ಇತ್ತೀಚೆಗೆ ಮಕ್ಸೂದ್ ಮನೆಯಲ್ಲಿ ನಡೆದ ಕಾರ್ಯಕ್ರಮವೊಂದರ ವೇಳೆ ತಂಪು ಪಾನೀಯದಲ್ಲಿ ಮಾದಕ ವಸ್ತು ಬೆರೆಸಿದ್ದ. ಜೊತೆಗೆ ತನ್ನ ಮೂವರು ಸಹಚರರ ಜೊತೆಗೂಡಿ ಮಕ್ಸೂದ್ ಕುಟುಂಬದ 6 ಜನ ಮತ್ತು ಮೂವರು ವಲಸಿಗ ಕಾರ್ಮಿಕರನ್ನು ಹತ್ಯೆ ಮಾಡಿದ್ದ. ಈ ಬಗ್ಗೆ ವಿಸ್ತೃತ ತನಿಖೆ ನಡೆಸಿದ್ದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ