ರಾಮನಗರ: ತಾಳಿಯ ಚಿನ್ನದ ಗುಂಡು ಕಳವು ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ

Published : Jul 11, 2023, 01:33 PM IST
ರಾಮನಗರ: ತಾಳಿಯ ಚಿನ್ನದ ಗುಂಡು ಕಳವು ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ

ಸಾರಾಂಶ

ನಮ್ಮ ತಂದೆಗೆ ಕಪಾಳಕ್ಕೆ ಹೊಡೆದು ಕೊಲೆ ಮಾಡಿರುವುದಾಗಿ ಗಂಗಚೆಲುವಯ್ಯ ಪುತ್ರ ರಾಜಮುಡಿ ಮಾಗಡಿ ಪೊಲೀಸ್‌ ಠಾಣೆಗೆ ದೂರು ನೀಡಿ​ದ್ದಾರೆ. 

ಮಾಗಡಿ(ಜು.11):  ತಾಳಿಯ ಚಿನ್ನದ ಗುಂಡು ಕಳ​ವಾ​ಗಿ​ರುವ ವಿಚಾ​ರಕ್ಕೆ ಸಂಬಂಧಿ​ಗಳ ನಡುವಿನ ಗಲಾಟೆ ಕೊಲೆ​ಯಲ್ಲಿ ಅಂತ್ಯ​ವಾ​ಗಿ​ರುವ ಘಟನೆ ತಾಲೂ​ಕಿನ ಬೈರ​ನ​ಹಳ್ಳಿ ಗ್ರಾಮ​ದಲ್ಲಿ ನಡೆ​ದಿದೆ. ಗ್ರಾಮದ ಗಂಗ ಚೆಲು​ವಯ್ಯ(63) ಕೊಲೆ​ಯಾ​ದ​ವರು. ಬೆಟ್ಟ​ಸ್ವಾ​ಮಿ ಪುತ್ರ ಸುದ​ರ್ಶನ ಕೃತ್ಯ ಎಸ​ಗಿ​ದ​ವನು.

ಘಟನೆ ವಿವ​ರ:

ಬೈರನಹಳ್ಳಿಯ ಗಂಗ ಚೆಲುವಯ್ಯನವರ ಸಂಬಂಧಿ ನಂದಿನಿ ಗ್ರಾಮದ ಬೆಟ್ಟಸ್ವಾಮಿ ಸಂಬಂಧಿ ಅಟ್ಟಮ್ಮನವರ ತಾಳಿಗುಂಡನ್ನು ಕದ್ದಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಗ್ರಾಮದಲ್ಲಿ ನಡೆದ ರಾಜಿ ಪಂಚಾಯಿತಿಯಲ್ಲಿ ನಂದಿನಿ ಕಳ್ಳತನ ಮಾಡಿಲ್ಲ ಎಂದು ಒಪ್ಪಿಕೊಂಡಿದ್ದರು.

ಈ ವಿಚಾರವಾಗಿ ಬೆಟ್ಟಸ್ವಾಮಿ ಪತ್ನಿ ಶಿವಮ್ಮನವರು ಗಂಗ ಚೆಲುವಯ್ಯನವರ ವಿರುದ್ಧ ಗ್ರಾಮದಲ್ಲಿ ಪದೇಪದೆ ಅವಾಚ್ಯ ಶಬ್ದಗಳಿಂದ ನಿಂದಿ​ಸು​ತ್ತಿ​ದ್ದರು. ಭಾನುವಾರ ಸಂಜೆ ಬೆಟ್ಟಸ್ವಾಮಿ ಪತ್ನಿ ಶಿವಮ್ಮ, ಪುತ್ರ ಸುದರ್ಶನ, ರಾಜು ಗ್ರಾಮಕ್ಕೆ ಬಂದು ಗಂಗಚೆಲುವಯ್ಯ ಮನೆಯ ಮುಂದೆ ನಂದಿನಿಗೆ ಬೆಂಬಲಿಸಿದ್ದೀರಾ ಎಂದು ಆರೋಪಿಸಿ ತಗಾದೆ ತೆಗೆ​ದಿ​ದ್ದಾರೆ.

ಮಡಿಕೇರಿ: ಗೌರಿ ಕೊಲೆ ಆರೋಪಿಗಳ ಪರ ವಕೀಲಗೆ ನಕ್ಸಲರಿಂದ ಬೆದರಿಕೆ?: ದೂರು ದಾಖಲು

ಸುದರ್ಶನ ಕೋಪ​ದಲ್ಲಿ ಗಂಗಚೆಲುವಯ್ಯನವರ ಕಪಾಳಕ್ಕೆ ಹೊಡೆದಾಗ ಅಸ್ವಸ್ಥಗೊಂಡಿ​ದ್ದಾರೆ. ತಕ್ಷಣ ಅವ​ರನ್ನು ಮಾಗಡಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ​ಮಧ್ಯೆ ಕೊನೆ ಯುಸಿ​ರೆ​ಳೆ​ದಿ​ದ್ದಾರೆ. ನಮ್ಮ ತಂದೆಗೆ ಕಪಾಳಕ್ಕೆ ಹೊಡೆದು ಕೊಲೆ ಮಾಡಿರುವುದಾಗಿ ಗಂಗಚೆಲುವಯ್ಯ ಪುತ್ರ ರಾಜಮುಡಿ ಮಾಗಡಿ ಪೊಲೀಸ್‌ ಠಾಣೆಗೆ ದೂರು ನೀಡಿ​ದ್ದಾರೆ. ಮಾಗಡಿ ಪೊಲೀ​ಸರು ತನಿಖೆ ನಡೆ​ಸು​ತ್ತಿ​ದ್ದಾ​ರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ