ಮುಂಡಗೋಡ: ಗೋಡಂಬಿ ಕೊಡಿಸೋದಾಗಿ ನಂಬಿಸಿ 28 ಲಕ್ಷ ವಂಚನೆ

Kannadaprabha News   | Asianet News
Published : Jul 17, 2021, 03:09 PM IST
ಮುಂಡಗೋಡ: ಗೋಡಂಬಿ ಕೊಡಿಸೋದಾಗಿ ನಂಬಿಸಿ 28 ಲಕ್ಷ ವಂಚನೆ

ಸಾರಾಂಶ

* ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮಳಗಿ ಗ್ರಾಮದಲ್ಲಿ ನಡೆದ ಘಟನೆ * 28 ಲಕ್ಷ ಹಣದ ಬ್ಯಾಗ್‌ ಕಸಿದುಕೊಂಡು ಪರಾರಿಯಾದ ವಂಚಕರು * ಈ ಸಂಬಂಧ ಮುಂಡಗೋಡ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು  

ಮುಂಡಗೋಡ(ಜು.17): ಗೋಡಂಬಿ ಕೊಡಿಸುವುದಾಗಿ ನಂಬಿಸಿ ಕರೆದೊಯ್ದು 28 ಲಕ್ಷ ನಗದುಳ್ಳ ಬ್ಯಾಗ್‌ನ್ನು ಎಗರಿಸಿ ಪರಾರಿಯಾದ ಘಟನೆ ತಾಲೂಕಿನ ಮಳಗಿ ಗ್ರಾಮ ಧರ್ಮಾ ಜಲಾಶಯ ಬಳಿ ಶುಕ್ರವಾರ ನಡೆದಿದೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ಮೂಲದ ಶಿವನಗೌಡ ಪಾಟೀಲ ಹಾಗೂ ಇವರ ಸ್ನೇಹಿತ ಅಸ್ಲಂ ನದಾಫ್‌ ಇಬ್ಬರು 28 ಲಕ್ಷ ಹಣದೊಂದಿಗೆ ಕಾರಿನಲ್ಲಿ ಬಂದಿದ್ದರು. ಈ ವೇಳೆ ಇವರನ್ನು ಭೇಟಿಯಾದ ವಂಚಕರ ತಂಡ ಗೋಡಂಬಿ ಕೊಡಿಸುವುದಾಗಿ ನಂಬಿಸಿ ಧರ್ಮಾ ಜಲಾಶಯ ಬಳಿ ಕರೆದುಕೊಂಡು ಹೋಗಿದೆ. ಅಲ್ಲಿ ಇವರ ಬಳಿ ಇದ್ದ 28 ಲಕ್ಷ ಹಣದ ಬ್ಯಾಗ್‌ ಕಸಿದುಕೊಂಡು ಪರಾರಿಯಾಗಿದ್ದಾರೆ. ವಂಚಕರ ತಂಡದಲ್ಲಿ ನಾಲ್ವರಿಗಿಂತ ಅಧಿಕ ಜನರಿದ್ದರು ಎನ್ನಲಾಗಿದೆ.
ಈ ಕುರಿತು ಮುಂಡಗೋಡ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

ಹುಬ್ಬಳ್ಳಿ; 'ಮಿಂಚುಳ್ಳಿ ಗಾಯಕಿ' ಬಣ್ಣದ ಮಾತಿಂದ ಮರುಳು ಮಾಡಿ ಎಲ್ಲವ ದೋಚಿದಳು!

ಘಟನಾ ಸ್ಥಳಕ್ಕೆ ಶಿರಸಿ ಡಿವೈಎಸ್‌ಪಿ ರವಿ ನಾಯ್ಕ, ಮುಂಡಗೋಡ ಸಿಪಿಐ ಪ್ರಭುಗೌಡ, ಪಿಎಸ್‌ಐ ಎನ್‌.ಡಿ. ಜಕ್ಕಣ್ಣವರ ಹಾಗೂ ಬಸವರಾಜ ಮಬನೂರ ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಕೂಡ ಆಗಮಿಸಿದ್ದು, ಕಾರ್ಯಾಚರಣೆ ನಡೆಸುತ್ತಿದೆ.

ಗೋಡಂಬಿ ಖರೀದಿಸಲು ಲಕ್ಷಾಂತರ ರುಪಾಯಿಯೊಂದಿಗೆ ಯಾರೋ ಅಪರಿಚಿತರ ಬಳಿ ಹೋಗಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿದ್ದು, ಗೋಡಂಬಿ ಬದಲಾಗಿ ಗಟ್ಟಿ ಬಂಗಾರ ಕೊಡುವುದಾಗಿ ಕರೆಸಿ ಹಣದ ಚೀಲ ಎಗರಿಸಿ ಪರಾರಿಯಾಗಿರಬಹುದು ಎಂಬ ಮಾತು ಸ್ಥಳಿಯರಿಂದ ಕೇಳಿ ಬರುತ್ತಿದೆ. ಪೊಲೀಸ್‌ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ