ಬೆಂಗಳೂರು: ಕುಳ್ಳನಾಗಿದ್ದಕ್ಕೆ ಖಿನ್ನತೆ, ಪೆಟ್ರೋಲ್‌ ಸುರಿದುಕೊಂಡು ಯುವಕ ಆತ್ಮಹತ್ಯೆ

By Kannadaprabha NewsFirst Published Sep 10, 2023, 4:30 AM IST
Highlights

ಬೆಂಗಳೂರಿನ ಯಶವಂತಪುರದ ಉದಯ್‌ ರಾಜ್‌ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡವನು. ಈತ ಹಲವು ವರ್ಷಗಳಿಂದ ಮೊಬೈಲ್‌ ಮಾರಾಟ ಕಂಪನಿಯಲ್ಲಿ ಉದ್ಯೋಗಿಯಾಗಿ ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ. ತಾನು ಕುಳ್ಳಗಿರುವುದರಿಂದ ಖಿನ್ನತೆಗೆ ಒಳಗಾಗಿ ಪರಿಹಾರಕ್ಕಾಗಿ ಹಲವು ವೈದ್ಯರನ್ನೂ ಸಂಪರ್ಕಿಸಿದ್ದ ಎನ್ನಲಾಗಿದೆ. 

ದಾಬಸ್‌ಪೇಟೆ(ಸೆ.10): ವ್ಯಕ್ತಿಯೊಬ್ಬ ತಾನು ಕುಳ್ಳಗಿದ್ದೇನೆಂದು ಮನನೊಂದು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾಬಸ್‌ಪೇಟೆ ಠಾಣಾ ವ್ಯಾಪ್ತಿಯ ಕೆಂಗಲ್‌ ಕೆಂಪೋಹಳ್ಳಿ ಬಳಿ ಶನಿ​ವಾರ ನಡೆದಿದೆ.

ಬೆಂಗಳೂರಿನ ಯಶವಂತಪುರದ ಉದಯ್‌ ರಾಜ್‌(27) ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡವನು. ಈತ ಹಲವು ವರ್ಷಗಳಿಂದ ಮೊಬೈಲ್‌ ಮಾರಾಟ ಕಂಪನಿಯಲ್ಲಿ ಉದ್ಯೋಗಿಯಾಗಿ ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ. ತಾನು ಕುಳ್ಳಗಿರುವುದರಿಂದ ಖಿನ್ನತೆಗೆ ಒಳಗಾಗಿ ಪರಿಹಾರಕ್ಕಾಗಿ ಹಲವು ವೈದ್ಯರನ್ನೂ ಸಂಪರ್ಕಿಸಿದ್ದ ಎನ್ನಲಾಗಿದೆ. 

ದಾವಣಗೆರೆ: ಕುತ್ತಿಗೆ ಮೈ-ಕೈ ಕೊಯ್ದುಕೊಂಡು ಮದ್ಯವ್ಯಸನಿ ಸಾವು

ಸಾಯುವ ಮುನ್ನ ಸೆಲ್ಫಿ ವಿಡಿಯೋ ಮಾಡಿದ್ದು, ಅದರಲ್ಲಿ ನನ್ನ ಸಾವಿಗೆ ಮಾನಸಿಕ ಒತ್ತಡವೇ ಕಾರಣವೆಂದು ಹೇಳಿ ತನ್ನ ತಂದೆ ಹಾಗೂ ಕಂಪನಿಯ ಮ್ಯಾನೇಜರ್‌ ಮೊಬೈಲ್‌ಗೆ ವಿಡಿಯೋ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಲೊಕೇಷನ್‌ ಕಳುಹಿದ್ದಾ​ನೆ. ನಂತರ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಡಿಯೋ ಸಂದೇಶ ನೋಡಿ ಕುಟುಂಬಸ್ಥರು ಬರುವ ವೇಳೆಗಾಗಲೇ ಆತ ಮೃತಪಟ್ಟಿದ್ದ. ದಾಬಸ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖ​ಲಾ​ಗಿ​ದೆ.

click me!