ಪೊಲೀಸರು ಬೈಕ್ ಸೀಜ್‌ ಮಾಡಿದ್ದಕ್ಕೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಗೊಂಡ!

Published : Jul 13, 2020, 07:45 PM ISTUpdated : Jul 13, 2020, 07:46 PM IST
ಪೊಲೀಸರು ಬೈಕ್ ಸೀಜ್‌ ಮಾಡಿದ್ದಕ್ಕೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಗೊಂಡ!

ಸಾರಾಂಶ

ಸಂಡೇ ಲಾಕ್ ಡೌನ್ ನಿಯಮ ಉಲ್ಲಂಘಿಸಿದ್ದಕ್ಕೆ ಬೈಕ್ ಸೀಜ್/ಪೊಲಿಸರ ಮೇಲೆ ಕೋಪಗೊಂಡು ಮನೆಗೆ ಹೋಗಿ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ ಭೂಪ/  ತಮಿಳುನಾಡಿನಲ್ಲಿ ಘಟನೆ

ಚೆನ್ನೈ(ಜು. 13) ಪೊಲೀಸರು ತನ್ನ ಬೈಕ್ ಸೀಜ್ ಮಾಡಿದ್ದಾರೆ ಎಂದು ಕಂಗಾಲಾದ ವ್ಯಕ್ತಿ ಮನೆಗೆ ಬಂದು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ನೋಡಿದ್ದಾನೆ. 

ಲಾಕ್ ಡೌನ್ ನಿಯಮ ಉಲ್ಲಂಘಿಸಿದ್ದವನ ಬೈಕ್ ಅನ್ನು ಪೊಲೀಸರು ಸೀಜ್ ಮಾಡಿದ್ದರು. ಬೆಂಕಿ ಹಚ್ಚಿಕೊಳ್ಳಲು ಯತ್ನ ಮಾಡಿದ್ದವ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ತಮಿಳುನಾಡಿನ ಅಂಬುರ್ ನಲ್ಲಿ ಘಟನೆ ನಡೆದಿದೆ.   ಅಣ್ಣಾ ನಗರದಲ್ಲಿ ವಾಸವಿರುವ 27  ವರ್ಷದ  ಮುಗಿಳನ್ ಹೆಂಡತಿ ಮತ್ತು ಮೂವರು ಮಕ್ಕಳೊಂದಿಗೆ  ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡುತ್ತಿದ್ದ.  ತಮಿಳುನಾಡಿದನಲ್ಲಿ ಈ ವೇಳೆ ಆತನ ಬೈಕ್ ಅನ್ನು ಪೊಲೀಸರು ಸಂಡೇ ಲಾಕ್ ಡೌನ್ ಇದ್ದ ಕಾರಣಕ್ಕೆ ತಡೆದಿದ್ದಾರೆ.

ತನ್ನ ಚಿತೆ ತಾನೇ ಸಿದ್ಧ ಮಾಡಿಕೊಂಡು ಅಂತ್ಯಕ್ರಿಯೆ ಮಾಡಿಕೊಂಡ

ಪೊಲೀಸರು ಪ್ರಶ್ನೆ ಮಾಡಿದ್ದಕ್ಕೆ ಮುಗಿಳನ್ ಸರಿಯಾದ ಉತ್ತರ ನೀಡಿಲ್ಲ. ಇದಾದ ಮೇಲೆ ಪೊಲೀಸರು ಆತನ ಬೈಕ್ ಸೀಜ್ ಮಾಡಿದ್ದಾರೆ. ಬೈಕ್ ಬಿಟ್ಟು ಬಿಡುವಂತೆ ಪೊಲೀಸರ ದುಂಬಾಲು ಬಿದ್ದಿದ್ದಾನೆ.  ಆದರೆ ಪೊಲೀಸರು ವಾಹನ ಬಿಟ್ಟಿಲ್ಲ.

ಅಲ್ಲಿಂದ ಮನೆಗೆ ಬಂದವ ಸೀಮೆಎಣ್ಣೆ ಕ್ಯಾನ್ ತೆಗೆದುಕೊಂಡು ರಸ್ತೆಗೆ ಬಂದಿದ್ದಾನೆ. ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು  ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾನೆ.  ಹತ್ತಿರದಲ್ಲೇ ಇದ್ದ ಪೊಲೀಸ್ ಸಿಬ್ಬಂದಿ ಆತನ ರಕ್ಷಣೆ ಮಾಡಿದ್ದಾರೆ. ಗಂಭೀರ ಸುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನ ಸೀಜ್ ಮಾಡುವ ವೇಳೆ ಇದ್ದ ಪೊಲೀಸ್ ಅಧಿಕಾರಿಗಳನ್ನು ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ