ರಾಯಚೂರು: ಮದ್ಯದ ಚಟ ಒಳ್ಳೆಯದಲ್ಲ ಬಿಟ್ಟುಬಿಡು ಎಂದ ಅಪ್ಪ, ಮನನೊಂದು ಮಗ ಆತ್ಮಹತ್ಯೆ

By Kannadaprabha NewsFirst Published Feb 23, 2024, 10:30 PM IST
Highlights

ಮದ್ಯದ ಚಟ ಒಳ್ಳೆಯದಲ್ಲ ಅದನ್ನು ಬಿಟ್ಟುಬಿಡು ಎಂದು ಅಪ್ಪ ಮಗ ಆದರ್ಶಗೆ ಬುದ್ದಿ ಮಾತು ಹೇಳಿದ್ದು, ಇದರಿಂದಾಗಿ ಮನನೊಂದ ಆದರ್ಶ ಸ್ನಾನದ ಕೊಠಡಿಯ ನೀರಿನ ಪೈಪ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಾನ್ವಿ(ಫೆ.23): ಮದ್ಯ ಕುಡಿಯುವ ವಿಚಾರವಾಗಿ ಅಪ್ಪ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದಲ್ಲಿ ಜರುಗಿದೆ. ಸ್ಥಳೀಯ ನಿವಾಸಿ ಆದರ್ಶ (24) ಆತ್ಮಹತ್ಯೆಗೆ ಶರಣಾದ ಮಗನಾಗಿದ್ದಾನೆ. 

ಮದ್ಯದ ಚಟ ಒಳ್ಳೆಯದಲ್ಲ ಅದನ್ನು ಬಿಟ್ಟುಬಿಡು ಎಂದು ಅಪ್ಪ ಮಗ ಆದರ್ಶಗೆ ಬುದ್ದಿ ಮಾತು ಹೇಳಿದ್ದು, ಇದರಿಂದಾಗಿ ಮನನೊಂದ ಆದರ್ಶ ಸ್ನಾನದ ಕೊಠಡಿಯ ನೀರಿನ ಪೈಪ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಂಗಳೂರು: ಜೀವನದಲ್ಲಿ ಜುಗುಪ್ಸೆ, ವೃದ್ಧ ದಂಪತಿ ನೇಣಿಗೆ ಶರಣು!

ಘಟನೆಗೆ ಸಂಬಂಧಿಸಿದಂತೆ ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!