ಅಲ್ಲಿ ಆನೆ, ಇಲ್ಲಿ ಶ್ವಾನ..ಮಾನವೀಯತೆ ಮರೆತ ಮಾನವ!

Published : Jun 07, 2020, 03:04 PM ISTUpdated : Jun 07, 2020, 03:06 PM IST
ಅಲ್ಲಿ ಆನೆ, ಇಲ್ಲಿ ಶ್ವಾನ..ಮಾನವೀಯತೆ ಮರೆತ ಮಾನವ!

ಸಾರಾಂಶ

ಕೇರಳ ಆಯ್ತು ಮಹಾರಾಷ್ಟ್ರದಲ್ಲಿ ಪ್ರಾಣಿ ಹಿಂಸೆ/ ಶ್ವಾನವನ್ನು ಚಲಿಸುವ ಬೈಕ್ ಗೆ ಕಟ್ಟಿ ಎಳೆದ ದುರುಳರು/ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್/ ದೂರು ದಾಖಲಿಸಿಕೊಂಡ ಪೊಲೀಸರು

ಔರಂಗಾಬಾದ್(ಜೂ. 07)  ಆಹಾರಕ್ಕಾಗಿ ಬಂದ ಗರ್ಭಿಣಿ ಆನೆಗೆ ಆಹಾರದಲ್ಲಿ ಪಟಾಕಿ ಇಟ್ಟ ದುರುಳರ ಸುದ್ದಿಯನ್ನು ಓದಿ ಅರಗಿಸಿಕೊಂಡಿದ್ದೇವೆ.  ಮಹಾರಾಷ್ಟ್ರದ  ಔರಂಗಾಬಾದ್ ಪೊಲೀಸರು ಪ್ರಕರಣವೊಂದನ್ನು ದಾಖಲಿಸಿಕೊಂಡಿದ್ದಾರೆ. ಪ್ರಾಣಿ ಹಿಂಸೆ ಕೇಸ್ ಅಡಿ ಪ್ರಕರಣ ದಾಖಲಾಗಿದೆ.

ಶ್ವಾನವೊಂದನ್ನು ಚಲಿಸುವ ಬೈಕ್ ಹಿಂಬದಿಗೆ ಕಟ್ಟಿ ಎಳೆದುಕೊಂಡು ಹೋದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ  ವೈರಲ್ ಆಗಿದೆ. ಅಪರಿಚಿತ ಇಬ್ಬರು ವ್ಯಕ್ತಿಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಪೋಟಕವಿಟ್ಟು ಗರ್ಭಿಣಿ ಆನೆ ಕೊಂದರು.. ನೊಂದು ಜೀವ ಬಿಟ್ಟ  ಮೂಕ ಪ್ರಾಣಿ

ಔರಂಗಾಬಾದ್ ನೋಂದಣಿ ಸಂಖ್ಯೆ ಹೊಂದಿರವ ಬೈಕ್ ಗೆ ನಾಯಿಯನ್ನು ಕಟ್ಟಲಾಗಿದೆ. ನಾಯಿಯ ಕುತ್ತಿಗೆಗೆ ಹಗ್ಗ ಬಿಗಿಯಲಾಗಿದ್ದು ಚಲಿಸುವ  ಬೈಕ್ ನಲ್ಲಿ ಎಳೆದುಕೊಂಡು ಹೋಗಲಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮಹಾರಾಷ್ಟ್ರ ಪರಿಸರ ಸಚಿವ ಆದಿತ್ಯ ಠಾಕ್ರೆ, ಔರಂಗಾಬಾದ್ ಜಿಲ್ಲಾ ಉಸ್ತುವಾರಿ ಸಚಿವ ಸುಭಾಷ್ ದೇಸಾಯಿ, ಮುನ್ಸಿಪಲ್ ಜವಾಬ್ದಾರಿ ಹೊತ್ತಿರುವ ಅಸ್ತಿಕುಮಾರ್ ಪಾಂಡೆ ಮತ್ತು ಡಿಜಿಪಿಗೆ  ಟ್ಯಾಗ್ ಮಾಡಿದ್ದಾರೆ.

ಪತ್ರಕರ್ತಇಬ್ರಾಜ್ ಅನ್ಸಾರಿ ಒಂದು ಪೊಲೀಸ್ ದೂರು ಸಹ ನೀಡಿದ್ದು  ಪ್ರಾಣಿ ಹಿಂಸೆ ಮಾಡಿದ ಕಿರಾತಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. 

 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಪರೂಪದ ಕೋತಿ ಪ್ರಭೇದ ಬ್ಯಾಗ್‌ನಲ್ಲಿಟ್ಟು ವಿದೇಶದಿಂದ ಅಕ್ರಮ ಸಾಗಾಟ, ಬೆಂಗಳೂರು ಏರ್ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಪ್ರಯಾಣಿಕ!
ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ