ಚಿಕ್ಕಬಳ್ಳಾಪುರ: ನೆರೆ-ಹೊರೆ ನಿವಾಸಿಗಳ ಮಧ್ಯೆ ಜಗಳ, ಜೈಲಿಗೆ ಹಾಕುವ ಭೀತಿ, ಬಾಲಕ ಆತ್ಮಹತ್ಯೆ

Published : Sep 09, 2024, 10:58 AM IST
ಚಿಕ್ಕಬಳ್ಳಾಪುರ: ನೆರೆ-ಹೊರೆ ನಿವಾಸಿಗಳ ಮಧ್ಯೆ ಜಗಳ, ಜೈಲಿಗೆ ಹಾಕುವ ಭೀತಿ, ಬಾಲಕ ಆತ್ಮಹತ್ಯೆ

ಸಾರಾಂಶ

ಗ್ರಾಮದ ರಾಮಯ್ಯ-ಲಕ್ಷ್ಮಮ್ಮ ದಂಪತಿ, ಲಕ್ಷಯ್ಯ-ಆಶಮ್ಮ ದಂಪತಿ, ವಿವಾದಿತ ರಸ್ತೆಯಲ್ಲಿ ನಡೆದು ಬರುತ್ತಿದ್ದ ಬಾಲಕ ಸುದೀಪ್ ಮತ್ತು ಆತನ ತಂಗಿಯೊಂದಿಗೆ ಜಗಳ ಮಾಡಿ ಹಲ್ಲೆ ನಡೆಸಿದರು ಎನ್ನಲಾಗಿದೆ. ಈ ವೇಳೆ ಕೋಪಗೊಂಡ ಬಾಲಕ ಇಟ್ಟಿಗೆ ಎಸೆದಿದ್ದು ರಾಮಯ್ಯನಿಗೆ ಗಾಯವಾಗಿದೆ. ಈ ಕುರಿತು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಬಾಲಕ ಹಾಗೂ ಆತನ ತಂದೆ ವಿರುದ್ಧ ದೂರು ನೀಡಲಾಗಿತ್ತು.

ಚಿಕ್ಕಬಳ್ಳಾಪುರ(ಸೆ.09):  ವಿವಾದಿತ ರಸ್ತೆ ಜಾಗದ ವಿಚಾರವಾಗಿ ನೆರೆ-ಹೊರೆ ನಿವಾಸಿಗಳ ಜಗಳದಲ್ಲಿ ಇಟ್ಟಿಗೆ ತೂರಿದ್ದ ಬಾಲಕನೊಬ್ಬ ಪೊಲೀಸರು ತನ್ನನ್ನು ಜೈಲಿಗೆ ಹಾಕುತ್ತಾರೆಂಬ ಭೀತಿಯಿಂದ ಅತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಕವರನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಕವರನಹಳ್ಳಿ ಗ್ರಾಮದ ಮಂಜುನಾಥ್ ಹಾಗೂ ಪುಷ್ಪ ದಂಪತಿಯ ಮಗ ಸುದೀಪ್ (16) ಆತ್ಮಹತ್ಯೆಗೆ ಶರಣಾದ ಬಾಲಕ.

ಬಾಲಕನ ವಿರುದ್ಧ ದೂರು

ಶುಕ್ರವಾರ ಸಂಜೆ ಗ್ರಾಮದ ರಾಮಯ್ಯ-ಲಕ್ಷ್ಮಮ್ಮ ದಂಪತಿ, ಲಕ್ಷಯ್ಯ-ಆಶಮ್ಮ ದಂಪತಿ, ವಿವಾದಿತ ರಸ್ತೆಯಲ್ಲಿ ನಡೆದು ಬರುತ್ತಿದ್ದ ಬಾಲಕ ಸುದೀಪ್ ಮತ್ತು ಆತನ ತಂಗಿಯೊಂದಿಗೆ ಜಗಳ ಮಾಡಿ ಹಲ್ಲೆ ನಡೆಸಿದರು ಎನ್ನಲಾಗಿದೆ. ಈ ವೇಳೆ ಕೋಪಗೊಂಡ ಬಾಲಕ ಇಟ್ಟಿಗೆ ಎಸೆದಿದ್ದು ರಾಮಯ್ಯನಿಗೆ ಗಾಯವಾಗಿದೆ. ಈ ಕುರಿತು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಬಾಲಕ ಹಾಗೂ ಆತನ ತಂದೆ ವಿರುದ್ಧ ದೂರು ನೀಡಲಾಗಿತ್ತು.

ಧಾರವಾಡ: ಪ್ರೇಮ ವೈಫಲ್ಯದಿಂದ ನೊಂದು ವಿಷ ಸೇವಿಸಿ ಯುವಕ ಆತ್ಮಹತ್ಯೆ!

ಬಾಲಕ ಆತ್ಮಹತ್ಯೆ:

ನಿಮ್ಮನ್ನ ಜೈಲಿಗೆ ಹಾಕಿಸುವವರೆಗೂ ಬಿಡುವುದಿಲ್ಲ ಎಂದು ಬಾಲಕನಿಗೆ ಬೆದರಿಕೆ ಹಾಕಿದ್ದಾರಂತೆ. ಇದರಿಂದ ಹೆದರಿದ ಬಾಲಕ ಶನಿವಾರ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಸತ್ತಿದ್ದಾನೆ. ಘಟನೆ ನಂತರ ಆಶಮ್ಮ ಹಾಗೂ ಲಕ್ಷ್ಮಮ್ಮನವರ ಕುಟುಂಬಸ್ಥರು ಮನೆಗಳಿಗೆ ಬೀಗ ಹಾಕು ಪರಾರಿಯಾಗಿದ್ದಾರೆ.

ಈ ಸಂಬಧವೂ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?