
ಕೋಲ್ಕತ್ತಾ(ಆ. 15) ಪಬ್ ಜಿ ಹುಚ್ಚಾಟ ಯುವಕನ ಪ್ರಾಣವನ್ನೇ ಬಲಿ ಪಡೆದಿದೆ. ಪಬ್ ಜಿಗೆ ದಾಸನಾಗಿದ್ದ 16 ವರ್ಷದ ಯುವಕ ಊಟ-ತಿಂಡಿ ಬಿಟ್ಟು ಜೀವ ಕಳೆದುಕೊಂಡಿದ್ದಾನೆ.
ನಿರಂತರವಾಗಿ ಪಬ್ ಜಿ ಆಡುತ್ತ ಊಟ ತಿಂಡಿಯನ್ನೇ ಬಿಟ್ಟಿದ್ದಾನೆ. ಊಟ-ತಿಂಡಿ-ನೀರು ಎಲ್ಲವನ್ನು ಬಿಟ್ಟ ಬಾಲಕನ ಆರೋಗ್ಯ ಹದಗೆಟ್ಟಿದೆ. ಡಿಹೈಡ್ರೇಶನ್ ಆಗಿ ಆಸ್ಪತ್ರೆ ಸೇರುವ ಸ್ಥಿತಿ ನಿರ್ಮಾಣವಾಗಿದೆ.
ಇಲ್ಲೂರಿನ ಆಸ್ಪತ್ರೆಯೊಂದಕ್ಕೆ ಕುಟುಂಬ ಬಾಲಕನ ಕರೆದುಕೊಂಡು ಬಂದಿದೆ. ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದ ಮನಗಂಡ ವೈದ್ಯರು ಚಿಕಿತ್ಸೆಗೆ ಮುಂದಾಗಿದ್ದಾರೆ. ಆದರೆ ಬಾಲಕನನ್ನು ಬದುಕಿಸಲು ಸಾಧ್ಯವಾಗಿಲ್ಲ.
ಬಾಲಕರ ಮನಸ್ಸಿನ ಮೇಲೆ ಸೈಬರ್ ಲೋಕದ ದಂಧೆಕೋರರು ಪರಿಣಾಮ ಬೀರಿರುವ ಸಾಧ್ಯತೆ ಇರುತ್ತದೆ ಎಂದು ಸಿಐಡಿ ಅಧಿಕಾರಿ ಜಿಆರ್ ರಾಧಿಕಾ ಹೇಳುತ್ತಾರೆ. ಜನವರಿಯಲ್ಲಿ ಒಬ್ಬಾತ ಪಬ್ ಜಿ ಗೆ ದಾಸನಾಗಿ ತನ್ನ ನಿಯಂತ್ರಣ ಕಳೆದುಕೊಂಡಿದ್ದ ಘಟನೆಯನ್ನು ಹೈದರಾಬಾದ್ ಪೊಲೀಸರು ಉಲ್ಲೇಖ ಮಾಡುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ