ಪಬ್‌ಜಿ ದಾಸ ಊಟ-ತಿಂಡಿ ಬಿಟ್ಟ.. ಕೊನೆಗೆ ಪ್ರಾಣವನ್ನೂ ಬಿಟ್ಟ!

Published : Aug 15, 2020, 04:01 PM IST
ಪಬ್‌ಜಿ ದಾಸ ಊಟ-ತಿಂಡಿ ಬಿಟ್ಟ.. ಕೊನೆಗೆ ಪ್ರಾಣವನ್ನೂ ಬಿಟ್ಟ!

ಸಾರಾಂಶ

ಪಬ್ ಜಿ ದಾಸನಾಗಿದ್ದ ಬಾಲಕ ಊಟ-ತಿಂಡಿ ಬಿಟ್ಟ/ ಆರೋಗ್ಯ ಕೆಟ್ಟು ಆಸ್ಪತ್ರೆ ಸೇರಿದ/ ಚಿಕಿತ್ಸೆ ಫಲಿಸದೆ ಕೊನೆ ಉಸಿರು ಎಳೆದ/ ಪಬ್ ಜಿ ಹುಚ್ಚಾಟಕ್ಕೆ ಬಲಿ

ಕೋಲ್ಕತ್ತಾ(ಆ.  15) ಪಬ್ ಜಿ ಹುಚ್ಚಾಟ ಯುವಕನ ಪ್ರಾಣವನ್ನೇ ಬಲಿ ಪಡೆದಿದೆ.  ಪಬ್ ಜಿಗೆ ದಾಸನಾಗಿದ್ದ  16  ವರ್ಷದ ಯುವಕ ಊಟ-ತಿಂಡಿ ಬಿಟ್ಟು ಜೀವ ಕಳೆದುಕೊಂಡಿದ್ದಾನೆ. 

ನಿರಂತರವಾಗಿ ಪಬ್ ಜಿ ಆಡುತ್ತ ಊಟ ತಿಂಡಿಯನ್ನೇ ಬಿಟ್ಟಿದ್ದಾನೆ.  ಊಟ-ತಿಂಡಿ-ನೀರು ಎಲ್ಲವನ್ನು ಬಿಟ್ಟ ಬಾಲಕನ ಆರೋಗ್ಯ ಹದಗೆಟ್ಟಿದೆ. ಡಿಹೈಡ್ರೇಶನ್ ಆಗಿ ಆಸ್ಪತ್ರೆ ಸೇರುವ ಸ್ಥಿತಿ ನಿರ್ಮಾಣವಾಗಿದೆ.

ನೂರಾರು ಜನರ ಜೀವ ಉಳಿಸಿದ ಪಬ್ ಜಿ

ಇಲ್ಲೂರಿನ ಆಸ್ಪತ್ರೆಯೊಂದಕ್ಕೆ ಕುಟುಂಬ ಬಾಲಕನ ಕರೆದುಕೊಂಡು ಬಂದಿದೆ.  ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದ ಮನಗಂಡ ವೈದ್ಯರು ಚಿಕಿತ್ಸೆಗೆ ಮುಂದಾಗಿದ್ದಾರೆ. ಆದರೆ ಬಾಲಕನನ್ನು ಬದುಕಿಸಲು ಸಾಧ್ಯವಾಗಿಲ್ಲ.

ಬಾಲಕರ ಮನಸ್ಸಿನ ಮೇಲೆ ಸೈಬರ್ ಲೋಕದ ದಂಧೆಕೋರರು ಪರಿಣಾಮ ಬೀರಿರುವ ಸಾಧ್ಯತೆ ಇರುತ್ತದೆ  ಎಂದು ಸಿಐಡಿ ಅಧಿಕಾರಿ ಜಿಆರ್ ರಾಧಿಕಾ ಹೇಳುತ್ತಾರೆ.  ಜನವರಿಯಲ್ಲಿ ಒಬ್ಬಾತ ಪಬ್ ಜಿ ಗೆ ದಾಸನಾಗಿ ತನ್ನ ನಿಯಂತ್ರಣ ಕಳೆದುಕೊಂಡಿದ್ದ ಘಟನೆಯನ್ನು ಹೈದರಾಬಾದ್ ಪೊಲೀಸರು ಉಲ್ಲೇಖ ಮಾಡುತ್ತಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!