
ಬೆಂಗಳೂರು(ಆ.04): ಟೀಂ ಇಂಡಿಯಾ ಕ್ಯಾಪ್ಟನ್ ಮತ್ತು ವೈಸ್ ಕ್ಯಾಪ್ಟನ್ಗಳ ಇಂಜುರಿ ಮಿಸ್ಟರಿ ಮುಗಿಯುವಂತೆ ಕಾಣ್ತಿಲ್ಲ. ಒಬ್ಬರು ಫಿಟ್ ಆದ್ರೆ ಇನ್ನೊಬ್ಬರು ಇಂಜುರಿಯಾಗ್ತಾರೆ. ಒಬ್ಬರೆ ಇಂಜುರಿಯಾದ್ರೆ, ಇನ್ನೊಬ್ಬ ಫಿಟ್ ಆಗ್ತಾರೆ. ಹಾಗಾಗಿದೆ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಅವರು ಇಂಜುರಿ ಟ್ರ್ಯಾಜಿಡಿ ಸ್ಟೋರಿ. ಕನ್ನಡಿಗ ರಾಹುಲ್ ಇಂಜುರಿಯಿಂದ ರಿಕವರಿಯಾಗ್ತಿದ್ದು, ಏಷ್ಯಾಕಪ್ಗೆ ಕಮ್ಬ್ಯಾಕ್ ಮಾಡಲಿದ್ದಾರೆ. ಆದ್ರೆ ಏಷ್ಯಾಕಪ್ ಆರಂಭಕ್ಕೂ ಮುನ್ನವೇ ರೋಹಿತ್ ಶರ್ಮಾ ಇಂಜುರಿ ಲಿಸ್ಟ್ಗೆ ಸೇರಿದ್ದಾರೆ.
ಇನ್ನಿಂಗ್ಸ್ ಮಧ್ಯೆಯೇ ಮೈದಾನದಿಂದ ಹೊರನಡೆದ ರೋಹಿತ್:
ಮೊನ್ನೆ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಗೆಲುವಿಗೆ 165 ರನ್ ಬೆನ್ನಟ್ಟಿದ್ದ ಟೀಂ ಇಂಡಿಯಾ, ಉತ್ತಮ ಆರಂಭವನ್ನೇ ಪಡೆಯಿತು. ರೋಹಿತ್ ಶರ್ಮಾ, ಒಂದು ಬೌಂಡ್ರಿ, ಒಂದು ಸಿಕ್ಸರ್ ಸಹಿತ 11 ರನ್ ಬಾರಿಸಿ, ಸಿಡಿಯುವ ಮುನ್ಸೂಚನೆ ನೀಡಿದ್ದರು, ಆದರೆ 2ನೇ ಓವರ್ನಲ್ಲಿ ಅಲ್ಜಾರಿ ಜೋಸೆಫ್ಗೆ ಒಂದು ಸಿಕ್ಸ್ ಮತ್ತು ಒಂದು ಬೌಂಡ್ರಿ ಬಾರಿಸಿದ ರೋಹಿತ್, ಅದೇ ಓವರ್ನಲ್ಲಿ ಬೆನ್ನು ನೋವಿಗೆ ತುತ್ತಾಗಿ ಮೈದಾನದಿಂದ ಹೊರ ನಡೆದರು. ಮತ್ತೆ ಅವರು ಬ್ಯಾಟಿಂಗ್ ಮಾಡಲು ಬರಲಿಲ್ಲ.
ರೋಹಿತ್ ಗಾಯದ ಸಮಸ್ಯೆಯ ತೀವ್ರತೆ ಎಷ್ಟಿದೆ ಎಂಬುದು ಇನ್ನು ಗೊತ್ತಾಗಿಲ್ಲ. ಬ್ಯಾಕ್ ಟು ಬ್ಯಾಕ್ ಟಿ20 ಪಂದ್ಯಗಳನ್ನಾಡಿರುವುದರಿಂದ ರೋಹಿತ್ಗೆ ಬೆನ್ನು ನೋವು ಕಾಣಿಸಿಕೊಂಡಿದೆ ಎಂದು ಹೇಳಲಾಗ್ತಿದೆ. ಶನಿವಾರ ನಡೆಯುವ 4ನೇ ಟಿ20 ಪಂದ್ಯದ ವೇಳೆಗೆ ರಿಕವರಿಯಾಗ್ತಾರೆ ಎಂದು ಅಂದಾಜಿಸಲಾಗಿದೆ. ತಮ್ಮ ಇಂಜುರಿ ಬಗ್ಗೆ ರೋಹಿತ್ ಶರ್ಮಾ ಸಹ ಮಾತನಾಡಿದ್ದಾರೆ. ಸದ್ಯಕ್ಕೆ ಹೆಚ್ಚಿನ ಸಮಸ್ಯೆ ಇಲ್ಲ. ಮುಂದಿನ ಪಂದ್ಯಕ್ಕೆ ಇನ್ನು ಕೆಲ ದಿನಗಳು ಬಾಕಿ ಇದೆ. ಅಷ್ಟರಲ್ಲಿ ಚೇತರಿಸಿಕೊಳ್ಳುವ ವಿಶ್ವಾಸವಿದೆ ಎಂದು ಪಂದ್ಯದ ನಂತರ ರೋಹಿತ್ ಹೇಳಿದ್ದಾರೆ.
ಏಷ್ಯಾಕಪ್ಗೆ ದಿನಗಣನೆ, ಆತಂಕ ಮೂಡಿಸಿದ ರೋಹಿತ್ ಇಂಜುರಿ:
ಅಕ್ಟೋಬರ್-ನವೆಂಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ20 ವಿಶ್ವಕಪ್. ಆಗಸ್ಟ್ 27ರಿಂದ ಮಿನಿ ವಿಶ್ವಕಪ್ ಎಂದು ಬಿಂಬಿಸಲಾಗ್ತಿರೋ ಏಷ್ಯಾಕಪ್ ನಡೆಯಲಿದೆ. ವಿಂಡೀಸ್ ಸರಣಿಗೆ ಪ್ರಯೋಗಗಳನ್ನು ಸ್ಟಾಪ್ ಮಾಡಿ, ಏಷ್ಯಾಕಪ್ನಿಂದಲೇ ಬಲಿಷ್ಠ ಭಾರತ ತಂಡ ಕಣಕ್ಕಿಳಿಯಲಿದೆ ಬಿಸಿಸಿಐ. ಇಂತಹ ಮಹತ್ವದ ಟೂರ್ನಿಗೂ ಮುನ್ನ ರೋಹಿತ್ ಶರ್ಮಾ ಇಂಜುರಿಯಾಗಿರೋದು ಬಿಸಿಸಿಐಗೆ ತಲೆ ನೋವು ಹೆಚ್ಚಿಸಿದೆ. ರೋಹಿತ್ ನಾಯಕತ್ವದಲ್ಲೇ ಒಮ್ಮೆ ಏಷ್ಯಾಕಪ್ ಗೆದ್ದಿರುವ ಟೀಂ ಇಂಡಿಯಾ, ಈ ಸಲವೂ ಗೆದ್ದು ಟಿ20 ವರ್ಲ್ಡ್ಕಪ್ಗೆ ಭರ್ಜರಿ ಸಿದ್ದತೆ ಮಾಡಿಕೊಳ್ಳೋ ಪ್ಲಾನ್ನಲ್ಲಿತ್ತು. ಆದ್ರೆ ಹಿಟ್ಮ್ಯಾನ್ ಇಂಜುರಿ ಭಾರತೀಯರ ಪ್ಲಾನ್ಗಳೆಲ್ಲವನ್ನೂ ಉಲ್ಟಾ ಮಾಡಿಬಿಟ್ಟಿದೆ.
ಎಂ ಎಸ್ ಧೋನಿ ಫಾಲೋ ಮಾಡಲು ಹೋಗಿ ಎಡವಿಬಿದ್ದ ರೋಹಿತ್ ಶರ್ಮಾ..!
ರೋಹಿತ್ಗೆ ಬೆನ್ನು ನೋವು ನಿನ್ನೆ ಮೊನ್ನೆಯದಲ್ಲ..!:
ಇನ್ನು ರೋಹಿತ್ ಇಂಜುರಿ ಬಗ್ಗೆ ಆತಂಕ ಮೂಡಿಸೋದಕ್ಕೂ ಕಾರಣವಿದೆ. ಹಿಟ್ಮ್ಯಾನ್ಗೆ ಬೆನ್ನು ನೋವು ಕಾಣಿಸಿಕೊಳ್ತಿರೋದು ನಿನ್ನೆ ಮೊನ್ನೆಯಿಂದಲ್ಲ. ಸುಮಾರು ವರ್ಷದಿಂದ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಪದೇ ಪದೇ ಕಾಣಿಸಿಕೊಳ್ಳುವ ಬೆನ್ನು ನೋವಿನಿಂದಲೇ ರೋಹಿತ್ ಶರ್ಮಾ ಅದೆಷ್ಟೋ ಸರಣಿಗಳನ್ನ ಮಿಸ್ ಮಾಡಿಕೊಂಡಿದ್ದಾರೆ. ಹಾಗಾಗಿಯೇ ಆತಂಕ ಹೆಚ್ಚಾಗಿರೋದು. ಏಷ್ಯಾಕಪ್ನಿಂದ ಹೊರಗುಳಿದರೆ ಪರವಾಗಿಲ್ಲ. ಟಿ20 ವರ್ಲ್ಡ್ಕಪ್ ಮಿಸ್ ಮಾಡಿಕೊಂಡರೆ ಟೀಂ ಇಂಡಿಯಾಗೆ ದೊಡ್ಡ ಲಾಸ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.