
ಚಂಡಿಘಡ(ಏ.25): ಕೊರೋನಾ ವೈರಸ್ ಹಾವಳಿ ಹೆಚ್ಚಾಗುತ್ತಿದೆ. ಭಾರತದಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇತ್ತ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್ಡೌನ್ ಆಗಿದೆ. ಲಾಕ್ಡೌನ್ ತೆರವಾದ ಬೆನ್ನಲ್ಲೇ ಕೆಲ ಸೇವೆಗಳು ಆರಂಭಗಳೊಳ್ಳಲಿದೆ. ಆದರೆ ಬಹುತೇಕ ಸೇವಗಳ ಮೇಲೆ ನಿರ್ಬಂಧ ಹೇರುವುದು ಖಚಿತ. ಇತ್ತ ಕ್ರಿಕೆಟ್ ಆಯೋಜನೆ ಕುರಿತು ಮಾತುಕತೆಗಳು ನಡೆಯುತ್ತಿದೆ. ಇದೀಗ ಯುವರಾಜ್ ಸಿಂಗ್, ಕೊರೋನಾ ವೈರಸ್ ಭಯ ನಿವಾರಣೆಯಾದ ಮೇಲೆ ಕ್ರಿಕೆಟ್ ಆಯೋಜನೆ ಒಳಿತು ಎಂದಿದ್ದಾರೆ.
ಫ್ಲಿಂಟಾಫ್ 'ಹೀಗನ್ನದಿದ್ದರೆ' ಬಹುಶಃ ಯುವಿ 6 ಸಿಕ್ಸರ್ ಬಾರಿಸುತ್ತಿರಲಿಲ್ಲವೇನೋ..?.
ಭಾರತದಿಂದ ಮಾತ್ರವಲ್ಲ ವಿಶ್ವದಿಂದಲೇ ಕೊರೋನಾ ವೈರಸ್ ಸಂಪೂರ್ಣವಾಗಿ ತೊಲಗುವರೆಗೂ ಕ್ರಿಕೆಟ್ ಆಯೋಜನೆ ಉಚಿತವಲ್ಲ. ಆಟಗಾರರಿಗೆ, ಪಂದ್ಯ ವೀಕ್ಷಣೆಗೆ ಆಗಮಿಸುವ ಕ್ರೀಡಾಭಿಮಾನಿಗಳಿಗೆ ವೈರಸ ಭಯ ಇರಬಾರದು. ದೇಶದ ಯಾವುದೇ ಮೂಲೆಯಲ್ಲಿ ಕೊರೋನಾ ವೈರಸ್ ಇದ್ದರೂ ಪಂದ್ಯ ಆಯೋಜನೆ ಒಳಿತಲ್ಲ ಎಂದು 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಹೇಳಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಂಡು ಯಾವುದೇ ಕ್ರೀಡಾಕೂಟ ಆಯೋಜನೆ ಕಷ್ಟ. ಮೈದಾನದಲ್ಲಿ ಆಟಗಾರರ ನಡುವೆ ಅಂತರ ಕಾಯ್ದುಕೊಳ್ಳುವುದು ಅಸಾಧ್ಯ. ಡ್ರೆಸ್ಸಿಂಗ್ ರೂಮ್ ಹೀಗೆ ಪ್ರತಿಯೊಂದು ಕಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟ. ಇನ್ನು ಪಂದ್ಯದ ಒತ್ತಡ ಆಟಗಾರರ ಮೇಲಿರುತ್ತೆ. ಇದರ ಜೊತಗೆ ಕೊರೋನಾ ವೈರಸ್ ಭಯ ಇದ್ದರೆ ನೈಜ ಪ್ರದರ್ಶನ ಅಸಾಧ್ಯ ಎಂದು ಯುವಿ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.