ಲಾಕ್‌ಡೌನ್ ಕಾರಣ ಜನರ ಓಡಾಟವಿಲ್ಲ, ಟೀಂ ಇಂಡಿಯಾ ಕ್ರಿಕೆಟಿಗನ ಮನೆಗೆ ನುಗ್ಗಿದ ಕಳ್ಳರು!

Suvarna News   | Asianet News
Published : Apr 25, 2020, 06:54 PM IST
ಲಾಕ್‌ಡೌನ್ ಕಾರಣ ಜನರ ಓಡಾಟವಿಲ್ಲ, ಟೀಂ ಇಂಡಿಯಾ ಕ್ರಿಕೆಟಿಗನ ಮನೆಗೆ ನುಗ್ಗಿದ ಕಳ್ಳರು!

ಸಾರಾಂಶ

ಕೊರೋನಾ ವೈರಸ್ ಹಾವಳಿ, ಲಾಕ್‌ಡೌನ್ ಪರಿಣಾಮ ಹಾದಿ ಬೀದಿಗಳಲ್ಲಿ ಜನರ ಓಡಾಟವಿಲ್ಲ. ಆಂಗಡಿ ಮುಂಗಟ್ಟುಗಳು ಮುಚ್ಚಲಾಗಿದೆ. ಮನೆಯೊಳಗಿದ್ದವರು ಹೊರಗೆ ಬರುವಂತಿಲ್ಲ. ಇದೇ ಸಮಯವನ್ನು ಉಪಯೋಗಿಸಿಕೊಂಡ ಕಳ್ಳರು ಟೀಂ ಇಂಡಿಯಾ ಕ್ರಿಕೆಟಿಗನ ಮನಗೆ ಕನ್ನ ಹಾಕಿದ್ದಾರೆ.

ಕೋಲ್ಕತಾ(ಏ.25): ಕೊರೋನಾ ವೈರಸ್ ಕಾರಣ ಕಳ್ಳರು ಕೂಡ ಜೀವ ಭಯದಿಂದ ಮನೆಯೊಳಗೇ ಇರುತ್ತಾರೆ ಎಂದು ಕೊಂಡರೆ ತಪ್ಪು. ಲಾಕ್‌ಡೌನ್ ಸಮಯವನ್ನು ಉಪಯೋಗಿಸಿಕೊಂಡು ಕನ್ನ ಹಾಕುತ್ತಿದ್ದಾರೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಲಾಕ್‌ಡೌನ್‌ಗೂ ಮುನ್ನ ಊರಿಗೆ ತೆರಳಿದ, ಅಥವಾ ಕೆಲಸಕ್ಕಾಗಿ ತೆರಳಿ ಲಾಕ್ ಆಗಿರುವವರ ಮನೆಯನ್ನೇ ಕಳ್ಳರು ಟಾರ್ಗೆಟ್ ಮಾಡಲಾಗುತ್ತಿದೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗ ವೃದ್ದಿಮಾನ್ ಸಾಹ ಅಜ್ಜನ ಮನೆಗೆ ಕಳ್ಳರು ನುಗ್ಗುವ ಪ್ರಯತ್ನ ಮಾಡಿದ್ದಾರೆ.

ಆಶೀರ್ವಾದ ಪಡೆದೆ ಸಚಿನ್‌ಗೆ ಸ್ಪೆಷಲ್ ಬರ್ತ್‌ಡೇ ಗಿಫ್ಟ್ ನೀಡಿದ ತಾಯಿ!

ಏಪ್ರಿಲ್ 24ರ ಬೆಳ್ಳಂಬೆಳಗ್ಗೆ 2 ಗಂಟೆ ಸುಮಾರಿಗೆ ಸಿಲಿಗುರಿ ಬಳಿ ಇರುವ ಸಾಹ ತಾತನ ಮನೆಗೆ 6 ಮಂದಿ ಕಳ್ಳರು ನುಗ್ಗಿದ್ದಾರೆ. ಹಿಂಬಾಗಿಲ ಬಾಗಿಲ ಒಡೆದು ಮನೆಗೆ ನುಗ್ಗುವ ಪ್ರಯತ್ನ ಮಾಡಿದ್ದಾರೆ. ತಾತನ ಮನೆಯ ಪಕ್ಕದಲ್ಲೇ ಸಾಹ ಸಂಬಂಧಿಕರ ಮನೆಯಿದೆ. ಹೀಗಾಗಿ ಕಳ್ಳರು ಬಾಗಿಲು ಒಡೆಯುವ ಶಬ್ದಕ್ಕೆ ಎಚ್ಚರಗೊಂಡ ಸಾಹ ಸಂಬಂಧಿಕರು ತಕ್ಷಣವೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಇಷ್ಟೇ ಅಲ್ಲ ಅಕ್ಕ ಪಕ್ಕದ ಮನೆಯವರನ್ನು ಕೂಗಿ ಎಚ್ಚರಿಸಿದ್ದಾರೆ. 

ಝಿವಾಳೊಂದಿಗೆ ಧೋನಿ ಬೈಕ್‌ ರೈಡ್‌! ವಿಡಿಯೋ ವೈರಲ್

ಎಲ್ಲರ ಮನೆಯಲ್ಲೂ ಬೆಳಕು ಕಂಡ ತಕ್ಷಣ ಕಳ್ಳರು ಪರಾರಿಯಾಗಿದ್ದಾರೆ. ಇತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ನಡೆಯುತ್ತಿದೆ. ಘಟನೆ ಕುರಿತ ವೃದ್ದಿಮಾನ್ ಸಾಹ ಪ್ರತಿಕ್ರಿಯೆ ನೀಡಿದ್ದಾರೆ. ಚಿಕ್ಕ ಮಯಸ್ಸಿನಲ್ಲಿ ಕಳ್ಳತನ. ಢಕಾಯಿತರು ಕುರಿತು ಕೇಳಿದ್ದೇವು. ಇದೀಗ ನಮ್ಮ ಮನೆಗೆ ಕಳ್ಳರು ನುಗ್ಗಿದ್ದಾರೆ. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಾರೆ ಎಂದು ಸಾಹ ಹೇಳಿದ್ದಾರೆ.

ಸಾಹ ಕುಟುಂಬ ಕೋಲ್ಕತ್ತಾದಲ್ಲಿ ವಾಸವಾಗಿದ್ದರೆ. ಸಾಹ ಸಹೋದರ ಮುಂಬೈಲ್ಲಿ ನೆಲೆಸಿದ್ದಾರೆ. ರಜೆ ಕಾರಣ ಸಾಹ ಪೋಷಕರು ಮುಂಬೈಗೆ ತೆರಳಿದ್ದರು. ಲಾಕ್‌ಡೌನ್ ಕಾರಣ ಮುಂಬೈನಲ್ಲಿ ಉಳಿದುಕೊಂಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?