
ನವದೆಹಲಿ(ಜೂ.03): ಹಾಂಕಾಂಗ್ನಲ್ಲಿ ಜೂ.12ರಿಂದ ಆರಂಭವಾಗಲಿರುವ ಎಸಿಸಿ ಉದಯೋನ್ಮುಖ ಮಹಿಳೆಯರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಬಿಸಿಸಿಐ ಶುಕ್ರವಾರ 14 ಮಂದಿಯ ಭಾರತ ‘ಎ’ ತಂಡ ಪ್ರಕಟಿಸಿದ್ದು, ಕರ್ನಾಟಕದ ಯುವ ಕ್ರಿಕೆಟರ್ ಶ್ರೇಯಾಂಕ ಪಾಟೀಲ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕನ್ನಡತಿ ಶ್ರೇಯಾಂಕ ಪಾಟೀಲ್ ಆಲ್ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು
ಮೂಲತಃ ಕರ್ನಾಟಕದ, ಸದ್ಯ ಹೈದರಾಬಾದ್ನಲ್ಲಿ ನೆಲೆಸಿರುವ ವಿಕೆಟ್ ಕೀಪರ್ ಬ್ಯಾಟರ್ ಮಮತಾ ಮಡಿವಾಳ ಕೂಡಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ತಂಡಕ್ಕೆ ಶ್ವೇತಾ ಸೆಹ್ರಾವತ್ ನಾಯಕಿಯಾಗಿದ್ದಾರೆ. ಭಾರತ ಜೂ.13ಕ್ಕೆ ಹಾಂಕಾಂಗ್, ಜೂ.15ಕ್ಕೆ ಥಾಯ್ಲೆಂಡ್, ಜೂ.17ಕ್ಕೆ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ. ಟೂರ್ನಿಯಲ್ಲಿ 8 ತಂಡಗಳು ಪಾಲ್ಗೊಳ್ಳಲಿದ್ದು, ಜೂ.21ರಂದು ಫೈನಲ್ ನಡೆಯಲಿದೆ.
ಎಸಿಸಿ ಉದಯೋನ್ಮುಖ ಮಹಿಳೆಯರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡ:
ಶ್ವೇತಾ ಸೆಹ್ರಾವತ್(ನಾಯಕಿ), ಸೌಮ್ಯಾ ತಿವಾರಿ(ಉಪನಾಯಕಿ), ತ್ರಿಶಾ ಗೊಂಗಾಡಿ, ಮುಸ್ಕಾನ್ ಮಲಿಕ್, ಶ್ರೇಯಾಂಕ ಪಾಟೀಲ್, ಕನಿಕಾ ಅಹುಜಾ, ಉಮಾ ಚೆಟ್ರಿ(ವಿಕೆಟ್ ಕೀಪರ್), ಮಮತಾ ಮಡಿವಾಳ(ವಿಕೆಟ್ ಕೀಪರ್), ತಿತಾಸ್ ಸಂಧು, ಸೊಪ್ಪಂದಂಡಿ ಯಶಾರಿ, ಕಶಾವೀ ಗೌತಮ್, ಪರ್ಶಾವಿ ಚೋಪ್ರಾ, ಮನ್ನತ್ ಕಶ್ಯಪ್, ಬಿ ಅನುಷಾ.
ಏಕದಿನ: ಲಂಕಾ ವಿರುದ್ಧ ಆಫ್ಘನ್ಗೆ 6 ವಿಕೆಟ್ ಜಯ
ಹಂಬನ್ತೋಟಾ: ಏಕದಿನ ವಿಶ್ವಕಪ್ ಅರ್ಹತಾ ಟೂರ್ನಿಗೆ ಸಿದ್ಧತೆ ನಡೆಸುವ ಉದ್ದೇಶದಿಂದ ಅಷ್ಘಾನಿಸ್ತಾನ ವಿರುದ್ಧ ತವರಲ್ಲಿ 3 ಪಂದ್ಯಗಳ ಏಕದಿನ ಸರಣಿ ಆಡುತ್ತಿರುವ ಶ್ರೀಲಂಕಾಕ್ಕೆ ಹಿನ್ನಡೆ ಉಂಟಾಗಿದೆ. ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಆಫ್ಘನ್ 6 ವಿಕೆಟ್ ಜಯ ಸಾಧಿಸಿತು.
WTC Final: ಆಸೀಸ್ಗೆ ಭಾರತೀಯ ಸ್ಪಿನ್ನರ್ಗಳದ್ದೇ ತಲೆಬಿಸಿ..!
ಚರಿತ್ ಅಸಲಂಕಾ ಅವರ 91 ರನ್ ಆಟದ ನೆರವಿನಿಂದ ಲಂಕಾ 50 ಓವರಲ್ಲಿ 268ಕ್ಕೆ ಆಲೌಟ್ ಆಯಿತು. ಇಬ್ರಾಹಿಂ ಜದ್ರಾನ್ 98, ರಹಮತ್ ಶಾ 55 ರನ್ ಗಳಿಸಿ ತಂಡ 46.5 ಓವರಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಲು ನೆರವಾದರು.
ನಮೀಬಿಯಾ ವಿರುದ್ಧ ರಾಜ್ಯಕ್ಕೆ 9 ವಿಕೆಟ್ ಜಯ
ವಿಂಡ್ಹೋಕ್: ನಮೀಬಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಕರ್ನಾಟಕ ತಂಡ 9 ವಿಕೆಟ್ ಜಯ ಸಾಧಿಸಿ, 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಮೊದಲು ಬ್ಯಾಟ್ ಮಾಡಿದ ನಮೀಬಿಯಾ, 41.1 ಓವರಲ್ಲಿ 171 ರನ್ಗೆ ಆಲೌಟ್ ಆಯಿತು. ಜಾನ್ ಫ್ರೈಲಿಂಗ್ 57 ರನ್ ಗಳಿಸಿದರೆ, ವಿದ್ವತ್ ಕಾವೇರಪ್ಪ 8.1 ಓವರಲ್ಲಿ 16 ರನ್ಗೆ 4, ರಿಶಿ ಬೋಪಣ್ಣ 9 ಓವರಲ್ಲಿ 34 ರನ್ಗೆ 3 ವಿಕೆಟ್ ಕಿತ್ತರು.
ಕರ್ನಾಟಕ 35.5 ಓವರಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ನಾಯಕ ಆರ್.ಸಮರ್ಥ್ ಔಟಾಗದೆ 78, ನಿಕಿನ್ ಜೋಸ್ ಔಟಾಗದೆ 56, ಎಲ್.ಆರ್.ಚೇತನ್ 37(3 ಬೌಂಡರಿ, 4 ಸಿಕ್ಸರ್) ರನ್ ಸಿಡಿಸಿದರು.
ಕ್ರಿಕೆಟಿಗ ಋುತುರಾಜ್ಗೆ ಇಂದು ಮದುವೆ ಸಂಭ್ರಮ
ಪುಣೆ: ಭಾರತದ ಕ್ರಿಕೆಟಿಗ ಋುತುರಾಜ್ ಗಾಯಕ್ವಾಡ್ ಶನಿವಾರ ತಮ್ಮ ಬಹುದಿನಗಳ ಪ್ರೇಯಸಿ, ಮಹಾರಾಷ್ಟ್ರ ಕ್ರಿಕೆಟರ್ ಉತ್ಕರ್ಷ ಪವಾರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಗುರುವಾರವೇ ಸಂಪ್ರದಾಯಗಳು ಶುರುವಾಗಿದ್ದು, ಮೆಹೆಂದಿ ಕಾರ್ಯಕ್ರಮದ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.