ರಣಜಿ ಟ್ರೋಫಿ: ಇನ್ನಿಂಗ್ಸ್‌ ಮುನ್ನಡೆಗೆ ಕರ್ನಾಟಕ ಕಸರತ್ತು!

Kannadaprabha News   | Asianet News
Published : Feb 07, 2020, 09:10 AM IST
ರಣಜಿ ಟ್ರೋಫಿ: ಇನ್ನಿಂಗ್ಸ್‌ ಮುನ್ನಡೆಗೆ ಕರ್ನಾಟಕ ಕಸರತ್ತು!

ಸಾರಾಂಶ

ಮೊದಲ ಇನ್ನಿಂಗ್ಸ್‌ನಲ್ಲಿ 426 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿ, ಗೆಲುವಿನ ವಿಶ್ವಾಸದಲ್ಲಿದ್ದ ಕರುಣ್‌ ನಾಯರ್‌ ಪಡೆಗೆ ಪಂದ್ಯದ 3ನೇ ದಿನವಾದ ಗುರುವಾರ ಆಘಾತ ಎದುರಾಯಿತು. ಮಧ್ಯಪ್ರದೇಶ ತಂಡ ಇಡೀ ದಿನ ಕಳೆದುಕೊಂಡಿದ್ದು ಕೇವಲ 2 ವಿಕೆಟ್‌.

ಶಿವಮೊಗ್ಗ(ಫೆ.07): ಸುಲಭ ಗೆಲುವು ಸಾಧಿಸಿ 2019-20ರ ರಣಜಿ ಟ್ರೋಫಿ ನಾಕೌಟ್‌ ಹಂತದಲ್ಲಿ ಸ್ಥಾನ ಖಚಿತಪಡಿಸಿಕೊಳ್ಳುವ ಉತ್ಸಾಹದಲ್ಲಿದ್ದ ಕರ್ನಾಟಕಕ್ಕೆ ಹಿನ್ನಡೆಯಾದಂತೆ ಕಾಣುತ್ತಿದೆ. ಮಧ್ಯಪ್ರದೇಶ ವಿರುದ್ಧ ಇಲ್ಲಿ ನಡೆಯುತ್ತಿರುವ ‘ಬಿ’ ಗುಂಪಿನ ಪಂದ್ಯ ಬಹುತೇಕ ಡ್ರಾನತ್ತ ಸಾಗಿದೆ. ಅಲ್ಲದೆ ಮೊದಲ ಇನ್ನಿಂಗ್ಸ್‌ ಮುನ್ನಡೆಯನ್ನಾದರೂ ಸಾಧಿಸಿ, 3 ಅಂಕ ಪಡೆಯಲು ಕರ್ನಾಟಕ ಕಸರತ್ತು ನಡೆಸಬೇಕಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ 426 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿ, ಗೆಲುವಿನ ವಿಶ್ವಾಸದಲ್ಲಿದ್ದ ಕರುಣ್‌ ನಾಯರ್‌ ಪಡೆಗೆ ಪಂದ್ಯದ 3ನೇ ದಿನವಾದ ಗುರುವಾರ ಆಘಾತ ಎದುರಾಯಿತು. ಮಧ್ಯಪ್ರದೇಶ ತಂಡ ಇಡೀ ದಿನ ಕಳೆದುಕೊಂಡಿದ್ದು ಕೇವಲ 2 ವಿಕೆಟ್‌. 2ನೇ ದಿನದಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 60 ರನ್‌ ಗಳಿಸಿದ್ದ ಮಧ್ಯಪ್ರದೇಶ, 3ನೇ ದಿನದಾಟದ ಮುಕ್ತಾಯಕ್ಕೆ 4 ವಿಕೆಟ್‌ ನಷ್ಟಕ್ಕೆ 311 ರನ್‌ ಗಳಿಸಿದ್ದು, ಇನ್ನು 115 ರನ್‌ಗಳ ಹಿನ್ನಡೆಯಲ್ಲಿದೆ.

ಶುಕ್ರವಾರ 4ನೇ ಹಾಗೂ ಅಂತಿಮ ದಿನವಾಗಿದ್ದು, ಮೊದಲ ಇನ್ನಿಂಗ್ಸ್‌ ಮುನ್ನಡೆಗಾಗಿ ಉಭಯ ತಂಡಗಳ ನಡುವೆ ಭರ್ಜರಿ ಪೈಪೋಟಿ ನಡೆಯಲಿದೆ. ಪಂದ್ಯ ಡ್ರಾಗೊಂಡರೆ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆಯುವ ತಂಡಕ್ಕೆ 3 ಅಂಕ ಸಿಗಲಿದ್ದು, ಮತ್ತೊಂದು ತಂಡಕ್ಕೆ 1 ಅಂಕ ಸಿಗಲಿದೆ.

ರಣಜಿ ಟ್ರೋಫಿ: ಮಧ್ಯ ಪ್ರದೇಶ ವಿರುದ್ಧ ಕರ್ನಾಟಕ ಬೃಹತ್‌ ಮೊತ್ತ!

ಮಧ್ಯಪ್ರದೇಶ ಈಗಾಗಲೇ ನಾಕೌಟ್‌ ರೇಸ್‌ನಿಂದ ಹೊರಬಿದ್ದಿರುವ ಕಾರಣ, ಫಲಿತಾಂಶದಿಂದ ತಂಡಕ್ಕೆ ಹೆಚ್ಚೇನೂ ವ್ಯತ್ಯಾಸವಾಗುವುದಿಲ್ಲ. ಆದರೆ ನಾಕೌಟ್‌ ಹಂತಕ್ಕೇರುವ ನೆಚ್ಚಿನ ತಂಡಗಳ ಪೈಕಿ ಒಂದೆನಿಸಿರುವ ಕರ್ನಾಟಕಕ್ಕೆ ಗೆಲುವಿನ ಅಗತ್ಯವಿದೆ. ಈ ಪಂದ್ಯ ಡ್ರಾಗೊಂಡರೆ ಬರೋಡಾ ವಿರುದ್ಧ ನಡೆಯಲಿರುವ ಅಂತಿಮ ಪಂದ್ಯವನ್ನು ಗೆಲ್ಲಬೇಕಾದ ಒತ್ತಡಕ್ಕೆ ಕರ್ನಾಟಕ ಸಿಲುಕಲಿದೆ.

ಆದಿತ್ಯ ಶತಕ: 3ನೇ ದಿನವಾದ ಬುಧವಾರ ಮಧ್ಯಪ್ರದೇಶ ಯಶ್‌ ದುಬೆ (45) ಹಾಗೂ ನಾಯಕ ಶುಭಮ್‌ ಶರ್ಮಾ (25) ವಿಕೆಟನ್ನು ಬೇಗನೆ ಕಳೆದುಕೊಂಡಿತು. 123 ರನ್‌ಗಳಿಗೆ ತಂಡ 4 ವಿಕೆಟ್‌ ಕಳೆದುಕೊಂಡಿತು. 5ನೇ ವಿಕೆಟ್‌ಗೆ ಜತೆಯಾದ ಆದಿತ್ಯ ಶ್ರೀವಾಸ್ತವ (109*) ಹಾಗೂ ವೆಂಕಟೇಶ್‌ ಅಯ್ಯರ್‌(80*) ಅಜೇಯ 188 ರನ್‌ ಜೊತೆಯಾಟವಾಡಿದ್ದು, ಅಂತಿಮ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಸ್ಕೋರ್‌:

ಕರ್ನಾಟಕ 426, 
ಮಧ್ಯಪ್ರದೇಶ 311/4 
(ಆದಿತ್ಯ 109*, ವೆಂಕಟೇಶ್‌ 80*, ಗೌತಮ್‌ 1-61, ಶ್ರೇಯಸ್‌ 1-67)
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ
ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ