
ತ್ರಿಪುರ (ನ.02) ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಿ ಗಮನ ಸೆಳೆದಿದ್ದ ಆಲ್ರೌಂಡರ್, ಮಾಜಿ ರಣಜಿ ಕ್ರಿಕೆಟಿಗ ರಾಜೇಶ್ ಬಾನಿಕ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತ್ರಿಪುರ ರಣಜಿ ತಂಡದ ಮೂಲಕ ದೇಶಿ ಕ್ರಿಕೆಟ್ನಲ್ಲಿ ಭಾರಿ ಸಂಚವನ ಸೃಷ್ಟಿಸಿದ್ದ ರಾಜೇಶ್ ಬಾನಿಕ್ ಬಳಿಕ ಆಯ್ಕೆ ಸಮಿತಿ ಸದಸ್ಯನಾಗಿ ಗಮನಸೆಳೆದಿದ್ದರು. ಇಗೀಗ ಕಾರು ಅಪಘಾತದಲ್ಲಿ ರಾಜೇಶ್ ಬಾನಿಕ್ ಮೃತಪಟ್ಟಿದ್ದಾರೆ. ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ತ್ರಿಪುರ ಕ್ರಿಕೆಟ್ ಸಂಸ್ಥೆ, ಕುಟುಂಬಕ್ಕೆ ಸಂತಾಪ ಸೂಚಿಸಿದೆ.
ಪಶ್ಚಿಮ ತ್ರಿಪುರಾದ ಆನಂದನಗರದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಟೀಂ ಇಂಡಿಯಾ ಪ್ರತಿನಿಧಿಸಿದ್ದ ಕ್ರಿಕೆಟಿಗ ರಾಜೇಶ್ ಬಾನಿಕ್ ಮೃತಪಟ್ಟಿದ್ದಾರೆ. 40 ವರ್ಷದ ರಾಜೇಶ್ ಬಾನಿಕ್ ತಂದೆ, ತಾಯಿ ಹಾಗೂ ಸಹೋದರನ ಅಗಲಿದ್ದಾರೆ. ತ್ರಿಪುರ ರಣಜಿ ತಂಡದ ಪ್ರಮುಖ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದ ರಾಜೇಶ್ ಬಾನಿಕ್, ಸದ್ಯ ತ್ರಿಪುರ ಅಂಡರ್ 16 ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು.
ತ್ರಿಪುರ ಕಂಡ ಉತ್ತಮ, ಪ್ರತಿಭಾನ್ವಿತ ಕ್ರಿಕೆಟಿಗ, ಆಯ್ಕೆ ಸಮಿತಿ ಸದಸ್ಯ ರಾಜೇಶ್ ಬಾನಿಕ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಅನ್ನೋ ಸುದ್ದಿ ನಿಜಕ್ಕೂ ಆಘಾತ ತಂದಿದೆ. ನಾವು ಅತ್ಯುತ್ತಮ ಅಲ್ರೌಂಡರ್ ಕ್ರಿಕೆಟಿಗನನ್ನು, ಓಬ್ಬ ಉತ್ತಮ ಆಯ್ಕೆಗಾರನನ್ನು, ಆಡಳಿತಗಾರನನ್ನು ಕಳೆದುಕೊಂಡಿದ್ದೇವೆ. ಈ ಘಟನೆಯಿಂದ ಆಘಾತವಾಗಿದೆ. ರಾಜೇಶ್ ಬಾನಿಕ್ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬ ಹಾಗೂ ಆಪ್ತರಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ತ್ರಿಪುರ ಕ್ರಿಕೆಟ್ ಸಂಸ್ಥೆ ಪ್ರಕಟಣೆಯಲ್ಲಿ ಹೇಳಿದೆ.
2002-03ರ ರಣಜಿ ಟೂರ್ನಿಯಲ್ಲಿ ರಾಜೇಶ್ ಬಾನಿಕ್ ತ್ರಿಪುರ ರಣಜಿ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಬಲಗೈ ಬ್ಯಾಟ್ಸಮನ್ ಹಾಗೂ ಬಲೈಗೆ ಸ್ಪಿನ್ನರ್ ಆಗಿದ್ದ ರಾಜೇಶ್ ಬಾನಿಕ್, ತ್ರಿಪುರಾದ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. 42 ಪ್ರಥಮ ದರ್ಜೆ ಪಂದ್ಯ ಆಡಿರುವ ರಾಜೇಶ್ ಬಾನಿಕ್, 1,469 ರನ್ ಸಿಡಿಸಿದ್ದರು. 24 ಲಿಸ್ಟ್ ಎ ಗೇಮ್ ಆಡುವ ಮೂಲಕ 378 ರನ್ ಸಿಡಿಸಿದ್ದರು. ತ್ರಿಪುರ ಪರ 18 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.